Wednesday, April 30, 2025
Google search engine
Homeರಾಜ್ಯShivamogga:ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ದೀಪಕ್ ಸ್ಥಳಕ್ಕೆ ಮಂಜುನಾಥ್..! ಕೆ ಟಿ ಗುರುರಾಜ್ ಮಂಜುನಾಥ್ ಸ್ಥಳಕ್ಕೆ..!ಆಯಾಕಟ್ಟಿನ ಜಾಗಗಳಿಗಾಗಿ ಭಾರಿ...

Shivamogga:ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ದೀಪಕ್ ಸ್ಥಳಕ್ಕೆ ಮಂಜುನಾಥ್..! ಕೆ ಟಿ ಗುರುರಾಜ್ ಮಂಜುನಾಥ್ ಸ್ಥಳಕ್ಕೆ..!ಆಯಾಕಟ್ಟಿನ ಜಾಗಗಳಿಗಾಗಿ ಭಾರಿ ಪೈಪೋಟಿ..!

ಶಿವಮೊಗ್ಗ : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ನಡೆದಿದ್ದು 15 ಇನ್ಸ್ಪೆಕ್ಟರ್ಗಳ ವರ್ಗಾವಣೆ ಆಗಿದೆ ಅದರಲ್ಲಿ ಶಿವಮೊಗ್ಗದ ಇಬ್ಬರು ಸೇರಿದ್ದಾರೆ.

ಶಿವಮೊಗ್ಗದ ತುಂಗಾ ನಗರದಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದು ಅವರ ಸ್ಥಳಕ್ಕೆ ಕೆ ಟಿ ಗುರುರಾಜ್ ವರ್ಗಾವಣೆಯಾಗಿ ಬಂದಿದ್ದಾರೆ.

ಹಾಗೆ ಸಿ ಇ ಎನ್ ನಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಎಂಎಸ್ ವರ್ಗಾವಣೆಯಾಗಿದ್ದು ಅವರಿಗೆ ಇನ್ನೂ ಸ್ಥಳ ತೋರಿಸಿಲ್ಲ ಅವರ ಸ್ಥಳಕ್ಕೆ ಹಿಂದೆ ತುಂಗಾನಗರದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು ನಂತರ ಪದೊನ್ನತಿ ಹೊಂದಿ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡ ಮಂಜುನಾಥ್ ಶಿವಮೊಗ್ಗ ಸೆನ್ ಗೆ ವರ್ಗಾವಣೆಯಾಗಿದ್ದಾರೆ.

ಆಯಾಕಟ್ಟಿನ ಜಾಗಗಳಿಗಾಗಿ ಭಾರಿ ಪೈಪೋಟಿ :

ಸಾಮಾನ್ಯವಾಗಿ ಸರ್ಕಾರಗಳು ಆಡಳಿತದ ಹಿತ ದೃಷ್ಟಿಯಿಂದ ಒಂದಷ್ಟು ವರ್ಗಾವಣೆಗಳನ್ನು ಮಾಡಿದರೆ ಕೆಲವು ಅಧಿಕಾರಿಗಳೇ ಆಯಾಕಟ್ಟಿನ ಜಾಗಗಳಿಗಾಗಿ ತಮ್ಮ ಶಿಫಾರಸ್ಸುಗಳನ್ನು ಬಳಸಿಕೊಂಡು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಇದು ವ್ಯವಸ್ಥೆಯಲ್ಲಿ ಮಾಮೂಲು ಕೆಲವೊಂದು ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದರೆ ಅವರಿಗೆ ಎಲ್ಲವೂ ಸುಸೂತ್ರ ಹಾಗಾಗಿ ಅದೇ ಸ್ಥಳಗಳನ್ನು ಅವರು ಆರಿಸಿಕೊಂಡಿರುತ್ತಾರೆ ಅದಕ್ಕೋಸ್ಕರ ಶಿಫಾರಸ್ಸು ಹಣ ಎಲ್ಲವೂ ಖರ್ಚಾಗಿರುತ್ತದೆ ಯಥಾಪ್ರಕಾರ ಅದನ್ನು ಹಿಂಪಡೆಯಲು ಇಲ್ಲಿ ಕಸರತ್ತು ಪ್ರಾರಂಭವಾಗುತ್ತದೆ .

ವರ್ಗಾವಣೆಯಾಗಿ ಹೋದವರು ವಾಪಸ್ ಬಂದರು ಆಶ್ಚರ್ಯ ಇಲ್ಲ ಹಾಗೆ ಒಂದಷ್ಟು ಜನ ವರ್ಗಾವಣೆಯಾಗಿ ಹೋದರು ಆಶ್ಚರ್ಯವಿಲ್ಲ ಆದರೆ ಕೆಲವು ದಕ್ಷ ಅಧಿಕಾರಿಗಳು ಜಿಲ್ಲೆಯಲ್ಲಿ ಇರಬೇಕಾದ ಅವಶ್ಯಕತೆ ಇರುತ್ತದೆ ಅವರಿಂದ ಒಂದಷ್ಟು ಕಾನೂನಿನ ವ್ಯವಸ್ಥೆ ಉತ್ತಮವಾಗುವುದರಲ್ಲಿ ಸಂಶಯವಿಲ್ಲ ಆದರೆ ಕೆಲವು ಅಧಿಕಾರಿಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಓಡಾಡಿಕೊಂಡು ಇಲ್ಲೇ ವರ್ಗಾವಣೆ ಮಾಡಿಕೊಂಡು ಇದ್ದಾರೆ ಅಂತವರ ವರ್ಗಾವಣೆಯಾದರೆ ಒಳಿತು ವ್ಯವಸ್ಥೆ ಒಳಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವವರ ವರ್ಗಾವಣೆಯಾದರೆ ಆಡಳಿತದ ಹಿತದೃಷ್ಟಿಯಿಂದ ಕಷ್ಟ ಆ ದಿಕ್ಕಿನಲ್ಲಿ ಸಚಿವರ ಚಿಂತನೆ ಇರಲಿ ಎನ್ನುವುದು ಸಾರ್ವಜನಿಕರ ಕಳಕಳಿ..

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...