Tuesday, April 29, 2025
Google search engine
Homeಶಿವಮೊಗ್ಗಆರೋಗ್ಯBig impact :ಸುದ್ದಿ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ ಚೈನಾದಿಂದ ಬಂದು...

Big impact :ಸುದ್ದಿ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ ಚೈನಾದಿಂದ ಬಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ವಶ..!

ಶಿವಮೊಗ್ಗ : ಭಾರತ ಸರ್ಕಾರದಿಂದ ಬ್ಯಾನ್ ಆಗಿದ್ದ ಚೈನಾ ಮಾರುಕಟ್ಟೆಯ ಬೆಳ್ಳುಳ್ಳಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು ಪತ್ರಿಕೆ ಇದರ ಬಗ್ಗೆ ಸುದ್ದಿ ಪ್ರಕಟಿಸಿತ್ತು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು ಜಿಲ್ಲಾಧಿಕಾರಿಗಳು ಕೂಡಲೇ ಇದಕ್ಕೆ ಸ್ಪಂದಿಸಿ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ತಿಳಿಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಹಾಗೂ ದಾಸ್ತಾನಿದ್ದ ಬೆಳ್ಳುಳ್ಳಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಾನವರ ಆರೋಗ್ಯಕ್ಕೆ ಹಾನಿಕರವಾಗುತ್ತಿದ್ದ ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದ ಬೆಳ್ಳುಳ್ಳಿಯನ್ನು ಹಣದ ಹಾಸಿಗೆ ಬಿದ್ದ ಕೆಲವು ವ್ಯಾಪಾರಿಗಳು ವಾಮ ಮಾರ್ಗದಿಂದ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು ಇದನ್ನು ಮನಗಂಡ ಭಾರತ ಸರ್ಕಾರ ಇಂತಹ ಬೆಳ್ಳುಳ್ಳಿಯನ್ನು ಅಮದು ಮಾಡಿಕೊಳ್ಳುವುದನ್ನು ನಿಷೇಧ ಮಾಡಿತ್ತು. ನಂತರ ಕೂಡ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಹಣದ ಆಸೆಗೆ ಬಿದ್ದ ವ್ಯಾಪಾರಿಗಳು ಇದನ್ನು ವಾಮ ಮಾರ್ಗದಿಂದ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು ಆದರೆ ಪಕ್ಕದ ರಾಜ್ಯಗಳಾದ ರಾಜಸ್ಥಾನ್, ಮಧ್ಯಪ್ರದೇಶ ,ಉತ್ತರ ಪ್ರದೇಶ್, ಹರಿಯಾಣಗಳಲ್ಲಿ, ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಾಗ ಅಧಿಕಾರಿಗಳು ಅದನ್ನು ಸಿಜ್ ಮಾಡಿ ಸಂಬಂಧಪಟ್ಟ ವ್ಯಾಪಾರಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಂಡಿದ್ದರು.

ಶಿವಮೊಗ್ಗಕ್ಕೂ ಆಗಮಿಸಿದ ಚೈನಾ ಬೆಳ್ಳುಳ್ಳಿ..!

ಭಾರತ ಅಮದು ಮಾಡಿಕೊಳ್ಳುವುದನ್ನು ಬಂದ್ ಮಾಡಿದ್ದ ಚೈನಾ ಬೆಳ್ಳುಳ್ಳಿ ವಾರ್ಮ ಮಾರ್ಗದಿಂದ ಶಿವಮೊಗ್ಗದ ಮಾರುಕಟ್ಟೆಗೆ ಬಂದಿದ್ದು ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್, ರಸ್ಕಿನ್ ಮೌಲಾ, ಗಾಂಧಿ ಬಜಾರ್ ನ ಕೆಲವು ಅಂಗಡಿಗಳಲ್ಲಿ ಹಾಗೂ ಗೋಡಾನ್ ಗಳಲ್ಲಿ ದಾಸ್ತಾನು ಇಟ್ಟಿದ್ದರು ಇದರ ಬಗ್ಗೆ ಪತ್ರಿಕೆ ಸುದ್ದಿ ಪ್ರಕಟಿಸಿತ್ತು ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೂ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು.

ಸುದ್ದಿ ಬೆನ್ನಲ್ಲೇ ದಿಡೀರ್ ದಾಳಿ ಮಾಡಿದ ಆಹಾರ ಸುರಕ್ಷಿತ ಅಧಿಕಾರಿಗಳು :

ಸುದ್ದಿ ಬೆನ್ನಲ್ಲೇ ನಗರದ ಏಳು ಕಡೆ ದಾಳಿ ಮಾಡಿದ ಆಹಾರ ಸುರಕ್ಷಿತ ಅಧಿಕಾರಿಗಳು ಅನುಮಾನ ಬಂದ ಎರಡು ಕಡೆ ಲೀಗಲ್ ಸ್ಯಾಂಪಲ್ ತೆಗೆದುಕೊಂಡಿದ್ದು ಅದನ್ನು ತಪಾಸಣೆಗೆ ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿರುವ ಎನ್ಎಬಿಎಲ್ ಲ್ಯಾಬ್ ಗೆ ಲೀಗಲ್ ಸ್ಯಾಂಪಲ್‌ಗೆ ಕಳುಹಿಸಲಾಗಿದ್ದು ಹತ್ತರಿಂದ ಹದಿನೈದು ದಿನದಲ್ಲಿ ಫಲಿ ಫಲಿತಾಂಶ ಬರುವ ನೀರಿಕ್ಷೆ ಇದೆ.

ಫಲಿತಾಂಶ ಬಂದ ನಂತರ ಸಂಬಂಧಪಟ್ಟವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುವ ಸಾಧ್ಯತೆ ಇದೆ.

ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾಕ್ಟರ್ ಹರೀಶ್ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಸದಾಶಿವಪ್ಪ ಜಿ ಅವರ ನೇತೃತ್ವದಲ್ಲಿ ತಂಡ ದಿಡೀರ್ ಭೇಟಿ ನೀಡಿದ್ದು ಎಲ್ಲಾ ವ್ಯಾಪಾರಿಗಳಿಗೂ ಎಚ್ಚರಿಕೆ ನೀಡಿದ್ದು ಮಾರುಕಟ್ಟೆಯಲ್ಲಿ ಬಂದ್ ಆಗಿರುವ ವಸ್ತುಗಳನ್ನು ಮಾರುವಂತಿಲ್ಲ ಒಂದು ವೇಳೆ ಇಂಥಹ ವಸ್ತುಗಳು ಮಾರುಕಟ್ಟೆಗೆ ಬಂದರೆ ನಮ್ಮ ಗಮನಕ್ಕೆ ತರಬೇಕು ಮುಂದೆ ಈಗಾಗದಂತೆ ಎಚ್ಚರ ವಹಿಸಬೇಕು ಎನ್ನುವ ತಿಳುವಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಅತಿ ಬೇಗ ಸುದ್ದಿಗೆ ಸ್ಪಂದಿಸಿದ್ದು ವ್ಯಾಪಾರಸ್ಥರಿಗೆ ತಿಳುವಳಿಕೆ ನೀಡುವುದರ ಮುಖಾಂತರ ಸಾರ್ವಜನಿಕರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ ಮುಂದೆ ಕೂಡ ಹೀಗಾಗದಂತೆ ದಿಡೀರ್ ದಾಳಿ, ಪರೀಕ್ಷೆ ನಿರಂತರವಾಗಿ ನಡೆಯುತ್ತಿರಲಿ ಎನ್ನುವುದು ಪತ್ರಿಕೆಯ ಕಳಕಳಿ.

ರಘುರಾಜ್ ಹೆಚ್.ಕೆ..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...