ಆಶ್ರಯ ಯೋಜನೆಯ ಮನೆಗಳನ್ನು ಹಸ್ತಾಂತರಿಸಲು ದಿನಾಂಕ 28.01.2025 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜಮೀರ್ ಅಹ್ಮದ್!!
ಶಿವಮೊಗ್ಗದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಪ್ರಧಾನ ಮಂತ್ರಿ ಆಶ್ರಯ ಯೋಜನೆ ಅಡಿಯಲ್ಲಿ ಈಗಾಗಲೇ ನಿರ್ಮಾಣಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿರುವ 652 ಮನೆಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜಮೀರ್ ಅಹ್ಮದ್ ಅವರನ್ನು ಕಳೆದವಾರ ಭೇಟಿಯಾಗಿ, ಮನೆಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮನೆಗಳಲ್ಲಿ ಇರುವಂತಹ ನೀರಿನ ಹಾಗೂ ವಿದ್ಯುತ್ ಸಮಸ್ಯೆಗಳ ಕುರಿತು ಸುಧೀರ್ಘ ಚರ್ಚೆ ನಡೆಸಿ, ಜನವರಿ 18ರಂದು ಹಸ್ತಾಂತರ ಪ್ರಕ್ರಿಯೆಯನ್ನು ನಡೆಸಲು ಈ ಮೊದಲೇ ನಿಗದಿಪಡಿಸಲಾಗಿತ್ತು.
ಆದರೆ ಕೇಂದ್ರ ಸಚಿವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆಗ ಮತ್ತೊಂದು ದಿನ ಶಿವಮೊಗ್ಗ ನಗರಕ್ಕೆ ಖಂಡಿತಾ ಆಗಮಿಸುವುದಾಗಿ ಸಚಿವರು ತಿಳಿಸಿದ್ದರೂ, ಆದರೆ ಸತತ ಪರಿಶ್ರಮದ ಫಲವಾಗಿ ದಿನಾಂಕ 28.01.2025ರ ಮಂಗಳವಾರದಂದು ಶಿವಮೊಗ್ಗ ನಗರಕ್ಕೆ ಆಗಮಿಸುವುದಾಗಿ ಇಂದು ಸಚಿವರಾದ ಜಮೀರ್ ಅಹ್ಮದ್ ಅವರು ದೂರವಾಣಿ ಮೂಲಕ ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ ನವರಿಗೆ ತಿಳಿಸಿದ್ದು, ಅವರ ಉಪಸ್ಥಿತಿಯಲ್ಲಿ ಮನೆಗಳ ಹಸ್ತಾಂತರ ಪ್ರಕ್ರಿಯೆಯು ನಡೆಯಲಿದೆ.