Wednesday, April 30, 2025
Google search engine
Homeಶಿವಮೊಗ್ಗಭತ್ತದ ತ್ಯಾಜ್ಯ ಬಳಸಿ, ಅಣಬೆ ಬೆಳಸಿ...!

ಭತ್ತದ ತ್ಯಾಜ್ಯ ಬಳಸಿ, ಅಣಬೆ ಬೆಳಸಿ…!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು ತಮ್ಮ ಕೃಷಿ ಗ್ರಾಮೀಣ ಕಾರ್ಯಾನುಭ ಕಾರ್ಯಕ್ರಮದ ಅಂಗವಾಗಿ ಅಣಬೆ ಕೃಷಿ ಕುರಿತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.

ಈ ಭಾಗದಲ್ಲಿ ಎರಡನೇ ಮುಖ್ಯ ಬೆಳೆ ಭತ್ತ, ಭತ್ತ ಕಟಾವು ಅದ ನಂತರ ಮನೆಗೆ ಬೇಕಾದಷ್ಟು ಹುಲ್ಲನ್ನು ಇಟ್ಟುಕೊಂಡು ಮಿಕ್ಕಿದ ಹುಲ್ಲನ್ನು ಮಾರಲಾಗುತ್ತದೆ ಅದರ ಬದಲು ಹುಲ್ಲನ್ನು ಬಳಸಿಕೊಂಡು ಅಣಬೆ ಕೃಷಿಯನ್ನು ಪ್ರಾರಂಭಿಸಬಹುದು ಜೊತೆಗೆ ಒಂದು ಕೋಣೆ ಅಥವಾ ಶೆಡ್ ಇದ್ದರೆ ಸಾಕು ಅಣಬೆ ಕೃಷಿ ಸುಲಭವಾಗಿ ಮಾಡಬಹುದು. ಮೊದಲಿಗೆ ಕೋಣೆ ಅಥವಾ ಶೆಡ್ ಅನ್ನು ಫಾರ್ಮಾಲಿನ್ ನಿಂದ ಸ್ವಚ್ಛ ಮಾಡಿ ಯಾವುದೇ ಸೂಕ್ಷ್ಮಮಾಣು ಜೀವಿಗಳು ಇರದಂತೆ ಮಾಡಬೇಕು ನಂತರ ಭತ್ತದ ಹುಲ್ಲನ್ನು ನೀರಲ್ಲಿ ಕುದಿಸಿ ಬೇಯಿಸಬೇಕು ನಂತರ ನೆರಳಲ್ಲಿ ಒಣಗಿಸಬೇಕು ತದನಂತರ ಪಿಪಿ ಕವರ್ ತೆಗೆದುಕೊಂಡು ಹಸಿಯಾದ ಹುಲ್ಲನ್ನು ಒಂದು ಪದರ ಹಾಕಿ ಅಣಬೆ ಬೀಜ ಹಾಕಬೇಕು ಹಾಗೆ ಕವರ್ ತುಂಬುವರೆಗೆ ಹುಲ್ಲು ಮತ್ತು ಅಣಬೆ ಬೀಜಗಳ ಪದರವಾಗಿ ಹಾಕಬೇಕು ಒಂದು ಕವರಗೆ 100ಗ್ರಾಂ ಅಣಬೆ ಬೀಜ ಹಾಕಿ ತುದಿಗೆ ರಬ್ಬರ್ ಹಾಕಬೇಕು ನಂತರ ಕವರ್ ಅನ್ನು ಸಣ್ಣ ಸಣ್ಣ ರಂದ್ರ ಮಾಡಿ ಗಾಳಿ ಆಡುವಂತೆ ಮಾಡಬೇಕು ಮೊದಲು 20 ದಿನ ಕವರ್ ಗೆ ಬೆಳಕು ಬೀಳದಂತೆ ಕತ್ತಲು ಮಾಡಬೇಕು 21 ನೇ ದಿನಕ್ಕೆ ಬೀಜ ಮೊಳಕೆಯೊಡೆದು ಅಣಬೆ ಹೊರಬರುತ್ತದೆ ಎರಡರಿಂದ ಮೂರು ಕೊಯ್ಲು ತೆಗಿಯಬೇಕು ಒಂದು ಕವರ್ ಗೆ ಸುಮಾರು ಒಂದುವರೆ ಕೆಜಿ ಅಣಬೆ ಬರುತ್ತದೆ ಒಂದು ಕೆಜಿಗೆ 250 ರೂಪಾಯಿಯಂತೆ ಮಾರಾಟವಾಗುತ್ತದೆ.ಅಣಬೆ ತಿನ್ನುವುದರಿಂದ ಕೊಬ್ಬಿನಂಶ ಹಾಗೂ ಸಕ್ಕರೆ ಪ್ರಮಾಣ ನಿಯತ್ರಣದಲ್ಲಿರುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಸುತ್ತದೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...