Wednesday, April 30, 2025
Google search engine
Homeಶಿವಮೊಗ್ಗಅಧಿಕಾರದ ಪಿತ್ತ ನೆತ್ತಿಗಿರುವುದು ನಿಮಗೆ ಕಂಡಿದ್ದೀಯಾ? ಯಾರಿಗೆ ದುರಂಕಾರ ಎಂದು ಜನರು ತೀರ್ಮಾನ ಕೈಗೊಳ್ಳುತ್ತಾರೆ ಸಚಿವ...

ಅಧಿಕಾರದ ಪಿತ್ತ ನೆತ್ತಿಗಿರುವುದು ನಿಮಗೆ ಕಂಡಿದ್ದೀಯಾ? ಯಾರಿಗೆ ದುರಂಕಾರ ಎಂದು ಜನರು ತೀರ್ಮಾನ ಕೈಗೊಳ್ಳುತ್ತಾರೆ ಸಚಿವ ಮಧು ಬಂಗಾರಪ್ಪ..!

ಶಿವಮೊಗ್ಗ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಮಿತಿ ರಚನೆ ಮಾಡಲಾಗಿದೆ ಪುಸ್ತಕ, ಶೂ, ಗಳನ್ನು ಕೊಡುವುದುವಿಳಂಬವಾಗುತ್ತಿತ್ತು ನಾನು ಬಂದ ನಂತರ ತಕ್ಷಣವೇ ಕೊಡಲಾಗುತ್ತಿದೆ.

ಮಕ್ಕಳಿಗೆ ಇರುವ ಆಹಾರ ಕೊರತೆಯನ್ನು ರಾಗಿ ಮಾಲ್ ಮೊಟ್ಟೆಗಳನ್ನು ಕೊಡುವುದರ ಮೂಲಕ ನಿಗಿಸಲಾಗುತ್ತಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ 10 ಕೋಟಿ ಅನುದಾನ ಇಡಬೇಕಾಗಿತ್ತು ವಿಮಾನ ನಿಲ್ದಾಣಕ್ಕೆ 630 ಕೋಟಿ ಖರ್ಚು ಮಾಡಲಾಗಿದೆ 10 ಕೋಟಿ ಇಡಲಿಕ್ಕೆ ಆಗಲಿಲ್ಲವಾ? ಎಂದು ಪ್ರಶ್ನಿಸಿದರು.

ಸ್ಮಾರ್ಟ್ ಸಿಟಿ ಮತ್ತು ವಿಮಾನ ನಿಲ್ದಾಣ ಕಾಮಗಾರಿ ಕುರಿತ ಅಕ್ಷೇಪಣೆಗಳ ಬಗ್ಗೆ ಸಿಎಂ ಜೊತೆಗೆ ಮಾತನಾಡುತ್ತೇನೆ ವಿ ಐ ಎಸ್ ಎಲ್ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಮಾತನಾಡಿದ ಸಚಿವರು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಶಿವಮೊಗ್ಗ ಜಿಲ್ಲೆಯ ಬಂದಾಗ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮಾತನಾಡಿದರು ಆದರೆ ತೆಲಂಗಾಣದ ಕಾರ್ಖಾನೆಗಳಿಗೆ ಅನುದಾನ ನೀಡಿದ್ದಾರೆ.

ಕುವೆಂಪು ವಿವಿ ಮುಚ್ಚುವ ಹುನ್ನಾರ ಎಂದು ವಿಧಾನ ಪರಿಷತ್ ಶಾಸಕ ಡಿಎಸ್ ಅರುಣ್ ಹೇಳಿಕೆ ವಿಚಾರ ಗಮನಕ್ಕೆ ಬಂದಿದೆ ಆದರೆ ಕುವೆಂಪು ವಿವಿಯ ಇಂದಿನ ಸ್ಥಿತಿಗೆ ಬಿಜೆಪಿ ಸರ್ಕಾರ ಕಾರಣ ಬಂಗಾರಪ್ಪನವರು ಕುವೆಂಪು ಪ್ರಾರಂಭಿಸಿದಾಗ ಭರ್ತಿ ಮಾಡಿದ ಹುದ್ದೆಗಳನ್ನು ನಂತರ ತುಂಬಿಸಿಲ್ಲ ರಾಜ್ಯಪಾಲರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದಾಗ ನಾನು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದೆ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರ್ ಕೊಡುವ ಹಿನ್ನೆಲೆಯಲ್ಲಿ ನಾನು ಬಂದಿದ್ದೆ ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿಯ ವಿಧಾನಸೌಧ ಎದುರು ಗಾಂಧಿ ಪುತ್ತಳಿ ನಿರ್ಮಾಣ ಮಾಡಲಾಗಿದೆ.ಡಿಸ್ ಅರುಣ್ ಅವರ ತಂದೆ ಸ್ಪೀಕರ್ ಆಗಿದ್ದ ಡಿ ಎಚ್ ಶಂಕರಮೂರ್ತಿ ಅಧಿಕಾರ ಅವಧಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಎಂಟು ಕೋಟಿ ಖರ್ಚು ಮಾಡಿದರೆ ನಮ್ಮ ಅವಧಿಯಲ್ಲಿ 4.5 ಕೋಟಿ ಖರ್ಚಾಗಿದೆ ಪ್ರತಿಮೆ ನಿರ್ಮಾಣದ ಪ್ರಕರಣ ದೆಹಲಿಯವರೆಗೂ ತಲುಪಿತ್ತು ಎಂಬುದು ಅರುಣ್ ಗೆ ಗೊತ್ತಿರಲಿ ಎಂದರು.

ಯತ್ನಾಳ್ ಹೇಳಿಕೆ ನೋಡಿದರೆ ಬಿಜೆಪಿಯವರನ್ನು ಹರಾಜು ಹಾಕಿದ್ದಾರೆ ನಿಮ್ಮ ಪಾರ್ಟಿಯಲ್ಲಿ ದಿನ ಬೆಳಗ್ಗೆ ಎದ್ದರೆ ಹೊಲಸು ಬೇಕಾಬಿಟ್ಟಿ ಬೈದಾಡಿಕೊಳ್ಳುತ್ತಿದ್ದಾರೆ.

ಶಾಸಕ ಚನ್ನಬಸಪ್ಪ ತಮ್ಮ ವಿರುದ್ಧ ಸ್ಪೀಕರ್ ಗೆ ಹಕ್ಕು ಚ್ಯುತಿ ಮಂಡಿಸಿರುವ ವಿಚಾರ ಹಾಗೂ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಹೇಳಿಕೆ ವಿಚಾರ ಹಕ್ಕು ಚ್ಯುತಿ ಮಂಡಿಸಿದರೆ ಮಂಡಿಸಲಿ ಸ್ಪೀಕರ್ ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ.ಅಧಿಕಾರದ ಪಿತ್ತ ನೆತ್ತಿಗಿರುವುದು ನಿಮಗೆ ಕಂಡಿದ್ದೀಯಾ? ಯಾರಿಗೆ ದುರಂಕಾರ ಎಂದು ಜನರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಶಾಸಕ ಚನ್ನಬಸಪ್ಪ ಫೆಬ್ರವರಿ ನಾಲ್ಕರಂದು ಆಶ್ರಯ ಮನೆಗಳ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವ ವಿಚಾರ ಶಾಸಕ ಚನ್ನಬಸಪ್ಪನವರಿಗೆ ಆ ಅಧಿಕಾರ ಇಲ್ಲ ಡಿಸಿ ಅವರು ದಿನಾಂಕ ನಿಗದಿಗೊಳಿಸುತ್ತಾರೆ ಎಂದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...