Wednesday, April 30, 2025
Google search engine
Homeಶಿವಮೊಗ್ಗಹಾಡೋನಹಳ್ಳಿ ಅಕ್ರಮ ಮರಳು ದಂಧೆ ಮೇಲೆ ಮುಗಿಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಖಲಾಗುತ್ತಾ...

ಹಾಡೋನಹಳ್ಳಿ ಅಕ್ರಮ ಮರಳು ದಂಧೆ ಮೇಲೆ ಮುಗಿಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಖಲಾಗುತ್ತಾ ಎಫ್ ಐ ಆರ್..? ಜಿಲ್ಲೆಯಲ್ಲಿ ಎಷ್ಟು ಕಡೆ ನಡೆಯುತ್ತಿದೆ ಅಕ್ರಮ ಮರಳು ದಂಧೆ ಯಾರಿದ್ದಾರೆ ಈ ದಂಧೆಯ ಹಿಂದೆ..?! ಫುಲ್ ಡಿಟೇಲ್ಸ್…!

ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳುದಂದೆ ನಡೆಯುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪೋಲಿಸ್ ಇಲಾಖೆ ತಹಶೀಲ್ದಾರ್ ಒಳಗೊಂಡ ತಂಡ ನಿರಂತರವಾಗಿ ದಾಳಿ ನಡೆಸುತ್ತಿದ್ದರು ಈ ದಂಧೆ ನಿಂತಿಲ್ಲ ಇದಕ್ಕೆ ಹಲವು ಕಾಣದ ಕೈಗಳು ಕೈಜೋಡಿಸಿರುವುದು ಈ ದಂಧೆ ಈ ಮಟ್ಟದಲ್ಲಿ ನಡೆಯಲು ಕಾರಣ ಎಂದರೆ ತಪ್ಪಾಗಲಾರದು. ಅದರಲ್ಲೂ ಕೆಲವು ಜನ ಪ್ರತಿನಿಧಿಗಳು ತಮ್ಮ ಕಾರ್ಯಕರ್ತರನ್ನು ತಮ್ಮ ಬೆಂಬಲಿಗರನ್ನು ಬೆಂಬಲಿಸುವ ಭರದಲ್ಲಿ ಅಕ್ರಮ ಮರಳು ದಂಧೆಗೂ ಕೂಡ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇದರಿಂದ ದಂಧೆ ಮಾಡುವವರು ಹಗಲು ರಾತ್ರಿ ಎನ್ನದೇ ರಾಜ ರೋಷವಾಗಿ ಲಾರಿ, ಟಿಪ್ಪರ್ ಟ್ರ್ಯಾಕ್ಟರ್ ಗಳನ್ನು ಬಳಸಿ ಮರಳನ್ನು ಸಾಗಿಸುತ್ತಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಾಳಿ :

ನಿನ್ನೆ ತಡರಾತ್ರಿ ಸುಮಾರು 12:30 ವೇಳೆಗೆ ಹಾಡೋನಹಳ್ಳಿ ಮರಳು ಕೋರೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಈ ದಾಳಿಯ ವೇಳೆ ನಾಲ್ಕು ಟ್ರ್ಯಾಕ್ಟರ್ ಗಳು ಸಿಕ್ಕರೂ ಕೂಡ ಗಣಿ ಇಲಾಖೆಯ ಸಿಬ್ಬಂದಿಗಳು ತಡೆದರೆ ನಿಲ್ಲಿಸದೆ ಪರಾರಿಯಾಗಿದ್ದಾರೆ. ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವುದರ ಕುರುಹುಗಳನ್ನು ಪತ್ತೆ ಹಚ್ಚಿ ಇದ್ದ ಆರು ಜೆಸಿಬಿ ಗಳಲ್ಲಿ ಒಂದು ಜೆಸಿಬಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಉಳಿದ ಐದು ಜೆಸಿಬಿ ಗಳು ಪರಾರಿಯಾಗಿದ್ದು ಒಂದು ಜೆಸಿಬಿಯನ್ನು ಗ್ರಾಮಾಂತರ ಠಾಣೆಯ ವಶಕ್ಕೆ ನೀಡಿದ್ದಾರೆ ಜೊತೆಗೆ ಅಬ್ಬಲಗೆರೆ ಹತ್ತಿರ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದನ್ನು ವಶಪಡಿಸಿಕೊಂಡಿದ್ದು ಅದನ್ನು ಕೂಡ ಗ್ರಾಮಾಂತರ ಠಾಣೆಯ ವಶಕ್ಕೆ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಪ್ರಿಯಾ ದೊಡ್ಡ ಗೌಡರ್ ಅವರನ್ನು ಒಳಗೊಂಡ ತಂಡ ಕಾರ್ಯಚರಣೆ ನಡೆಸಿದ್ದು ಈಗ ಈ ಜೆಸಿಬಿಯ ಮಾಲೀಕರ ಹಾಗೂ ಪಾಲುದಾರರ ಮೇಲೆ ಠಾಣೆಯಲ್ಲಿ ಯಾರ ಮುಲಾಜಿಗೂ ಒತ್ತಡಕ್ಕೂ ಮಣಿಯದೆ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆ ಎಫ್ಐಆರ್ ದಾಖಲಿಸುತ್ತಾರ..?! ಅಥವಾ ಪಿಸಿಆರ್ ಮಾಡುತ್ತಾರಾ..?! ಕಾದು ನೋಡಬೇಕು….

ಜಿಲ್ಲೆಯಲ್ಲಿ ಎಷ್ಟು ಕಡೆ ನಡೆಯುತ್ತಿದೆ ಅಕ್ರಮ ಮರಳು ದಂಧೆ..?!

ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಬುಕ್ಕಲಾಪುರದಲ್ಲಿ ಎರಡು, ದಬ್ಬಣಗದ್ದೆ, ಮುಂಡೂಳ್ಳಿ, ಗಬಡಿ ಅಧಿಕೃತ ಕೋರೆಗಳಾಗಿದ್ದು ಇದರಲ್ಲಿ ಎರಡು ಖಾಸಗಿ ಕೋರೆಗಳು , ಮೂರು ಸರ್ಕಾರಿ ಕೋರೆಗಳಿದ್ದು ಅದರಲ್ಲಿ ಮುಂಡೂಳ್ಳಿ ಕೋರೆ ಹೊರತುಪಡಿಸಿ ಉಳಿದ ಮರಳು ಕೋರೆಗಳು ಇನ್ನೂ ಪ್ರಾರಂಭವಾಗಿಲ್ಲ ಆದರೆ ಉಳಿದ ಕಡೆ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಹಾಗಾದರೆ ಎಲ್ಲೆಲ್ಲಿ ನಡೆಯುತ್ತಿದೆ ಈ ದಂಧೆ…. ಕೂಡ್ಲಿ, ಒಡೆಂಪುರ, ಹಾಡೋನಹಳ್ಳಿ, ಸೂಗೂರು, ಹೊಳೆಹಟ್ಟಿ, ಹೊಳೆಹನಸನವಾಡಿ, ಬೇಡರ ಹೊಸಹಳ್ಳಿ, ಲಿಂಬೆಗುಂದಿ, ಪಿಲ್ಲಂಗೆರೆ, ಹೊಯ್ಸನಹಳ್ಳಿ, ಸಿದ್ಲಿಪುರ, ಕುಸ್ಕೂರ್, ಮತ್ತೂರು ಭಾಗದಲ್ಲಿ ವ್ಯಾಪಕವಾಗಿ ಈ ದಂಧೆ ನಡೆಯುತ್ತಿದೆ. ಇದಲ್ಲದೆ ತುಂಗಾ ನಗರ ಠಾಣೆಯ ವ್ಯಾಪ್ತಿಗೆ ಒಳಪಡುವ ಮಂಡ್ಲಿ ಭಾಗದಲ್ಲಿ ಅಕ್ರಮ ಮರಳನ್ನು ಸಾಕಷ್ಟು ಕಡೆ ಶೇಖರಿಸಿ ಇಟ್ಟಿದ್ದು ಇಲ್ಲಿಂದಲೇ ಎಲ್ಲ ಕಡೆ ಲಾರಿಗಳಲ್ಲಿ ಮರಳು ರವಾನೆ ಆಗುತ್ತದೆ ಇದರ ಮೇಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಬೇಕು. ಇದರ ಮಾಲೀಕರ ವಿರುದ್ಧ ಹಾಗೂ ಈ ಜಾಗದ ಮಾಲೀಕರ ವಿರುದ್ಧ ಪ್ರಕರಣಗಳು ದಾಖಲಾಗಬೇಕು.

ಜಿಲ್ಲಾಧಿಕಾರಿಗಳ ಖಡಕ್ ಆದೇಶ ಪಾಲನೆಯಾಗಬೇಕು..!

ಜಿಲ್ಲಾಧಿಕಾರಿಗಳು ಇತ್ತೀಚೆಗೆ ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಖಡಕ್ ಆದೇಶ ನೀಡಿದ್ದರು ಇದರ ಬೆನ್ನಲ್ಲೇ ನಿರಂತರ ದಾಳಿಗಳು ನಡೆಯುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಆಗಬೇಕು ಜೊತೆಗೆ ಜಿಲ್ಲಾಧಿಕಾರಿಗಳು ಅಧಿಕೃತ ಮರಳುಗಾರಿಕೆಗು ಕೂಡ ಇರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದರೆ ಅವರ ವಿರುದ್ಧವೂ ಕೂಡ ಮಾಕದ್ದಮೆಗಳನ್ನು ದಾಖಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ನಿಮಗಿದು ಗೊತ್ತಿರಲಿ…..

ಪತ್ರಿಕೆ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ ಆದರೆ ನಮಗೂ ಇದಕ್ಕೂ ಸಂಬಂಧವಿಲ್ಲ ಯಾರಾದರೂ ಹಣ ಕೇಳಿದರೆ… ನೇರವಾಗಿ ಪತ್ರಿಕೆ ಕಚೇರಿಗೆ ಕರೆ ಮಾಡಿ….

  • ರಘುರಾಜ್ ಹೆಚ್.ಕೆ…9449553305…7892830899....
RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...