ಶಿವಮೊಗ್ಗ: ಕಳಪೆ ಕಾಮಗಾರಿಗಳನ್ನು ಮಾಡಿ ಎಲ್ಲೆಡೆ ಸುದ್ದಿಯಾಗಿರುವ ಸ್ಮಾರ್ಟ್ ಸಿಟಿ ಕಚೇರಿಯನ್ನು ಸರ್ಕಾರ ಮಾರ್ಚ್ 30 ಕ್ಕೆ ಮುಚ್ಚುವಂತೆ ಆದೇಶ ನೀಡಿದೆ.
ಕಾಮಗಾರಿಗಳೆಲ್ಲ ಮುಗಿದು ಏನು ಕೆಲಸವಿಲ್ಲದೆ ಕಚೇರಿಯಲ್ಲಿ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ಹಲವರು ವಿರೋಧ ವ್ಯಕ್ತಪಡಿಸಿದ್ದರು ಸ್ಮಾರ್ಟ್ ಸಿಟಿ ಕಾಮಗಾರಿ ಕೆಲಸ ಮುಗಿದಿದೆ ಆದರೂ ಕೂಡ ಅಧಿಕಾರಿಗಳು ಕಚೇರಿ ತೆರೆದು ಕುಳಿತುಕೊಂಡಿದ್ದಾರೆ ಮಾಡಲು ಏನೂ ಕೆಲಸವಿಲ್ಲ ಮಾಡಿರುವುದೇಲ್ಲ ಕಳಪೆ ಕೆಲಸ ಕಚೇರಿ ಬಂದ್ ಮಾಡಿಸಿ ಸ್ಮಾರ್ಟ್ ಸಿಟಿ ಯೋಜನೆಯನ್ನು ತನಿಖೆಗೆ ಒಳಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಕೂಡ ನೀಡಿದ್ದರು.
ಹಲವು ಆಕ್ರೋಶಗಳು, ಹಲವು ಮನವಿಗಳು ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಆಧರಿಸಿ ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಣ ಸಚಿವರು ಆದ ಮಧು ಬಂಗಾರಪ್ಪನವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಯೋಜನೆಯ ಸಂಪೂರ್ಣ ಕಾಮಗಾರಿಯ ತನಿಖೆ ನಡೆಸುವಂತೆ ಸಂಬಂಧಪಟ್ಟ ಸಚಿವರಾದ ಬೈರತಿ ಸುರೇಶ್ ಅವರಿಗೆ ಮನವಿ ಮಾಡಿದ್ದರು ಇವರ ಮನವಿ ಆಧರಿಸಿ ಸಚಿವ ಭೈರತಿ ಸುರೇಶ್ ಅವರು ಸ್ಮಾರ್ಟ್ ಸಿಟಿ ಯೋಜನೆಯನ್ನು ತನಿಖೆಗೆ ಒಳಪಡಿಸುವಂತೆ ಆದೇಶ ನೀಡಿದ್ದರು ಈಗ ಇದರ ಬೆನ್ನಲ್ಲೇ ಸ್ಮಾರ್ಟ ಸಿಟಿ ಕಚೇರಿಯನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ ಇದರಿಂದ 24 ಜನ ಕೆಲಸ ಕಳೆದುಕೊಳ್ಳಲಿದ್ದಾರೆ.
ಉಳಿದಿರುವ 80 ಕೋಟಿ ಹಣವನ್ನು ಮಹಾನಗರ ಪಾಲಿಕೆಗೆ ಕಾಮಗಾರಿಗಳ ಪ್ರಗತಿಗಾಗಿ ನೀಡಲಾಗಿದ್ದು ಸ್ಮಾರ್ಟ್ ಸಿಟಿಯ ಎಲ್ಲಾ ಕಾಮಗಾರಿಗಳನ್ನು ಮಹಾನಗರ ಪಾಲಿಕೆಯ ಉಸ್ತುವಾರಿಗೆ ವಹಿಸಲಾಗುತ್ತಿದೆ…
ಜವಾಬ್ದಾರಿ ತೆಗೆದುಕೊಳ್ಳುತ್ತಾ ಮಹಾನಗರ ಪಾಲಿಕೆ…?!

ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಲೋಪ ದೋಷದಿಂದ ಕೂಡಿದ್ದು ಈಗಲೂ ಕೂಡ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಹಲವು ಬಡಾವಣೆಗಳು ಗಬ್ಬು ನಾರುತ್ತಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಚರಂಡಿಗಳಲ್ಲಿ ಸರಿಯಾಗಿ ನೀರು ಹೋಗುತ್ತಿಲ್ಲ, ರಸ್ತೆಗಳ ವ್ಯವಸ್ಥೆ ಸರಿಯಾಗಿ ಇಲ್ಲ ಫುಟ್ ಪಾತ್ ಗಳಿಗೆ ಹಾಕಿರುವ ಟೈಲ್ಸ್ಗಳು ಕಿತ್ತು ಹೋಗಿವೆ ಜನರು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಗಿಂತ ನಗರಸಭೆ ಕಾಮಗಾರಿ ಎಷ್ಟೋ ವಾಸಿ..,!
ಈ ಹಿಂದೆ ನಗರಸಭೆಯಿಂದ ಮಾಡಿರುವಂತಹ ಚರಂಡಿ ಕಾಮಗಾರಿಗಳು ಅದರ ಮೇಲೆನೆ ಮುಚ್ಚಳ ಹಾಕಿ ನಕಲಿ ಬಿಲ್ ಮಾಡಿಕೊಂಡಿರುವ ಹಳೆಯ ಕಾಮಗಾರಿಗಳು ಎಷ್ಟು,? ಹೊಸದಾಗಿ ಬಂದಿರುವ ಸ್ಮಾರ್ಟ್ ಸಿಟಿ ಎಂ ಡಿ ರವರು ವಾರಕ್ಕೊಮ್ಮೆ ಕಚೇರಿಗೆ ಬಂದು ಹೋಗುತ್ತಾರೆ.

ಈ ಜವಾಬ್ದಾರಿ ನನಗೆ ಸಂಬಂಧಿಸಿದಲ್ಲ.ನನ್ನ ಪಾಲು ನನಗೆ ಸಿಕ್ಕಿದಷ್ಟು ಶಿವ ಎಂದು ರಜಾ ಹಾಕಿ ಹೋಗಿದ್ದಾರೆ. ಈ ಯೋಜನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಇಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು ಸಾರ್ವಜನಿಕ ದೂರುಗಳನ್ನು ಸ್ವೀಕರಿಸುವ ಇನ್ನೊಬ್ಬರು ಮಹಿಳಾಧಿಕಾರಿ. ಮೂರು ಜನ ನಿವೃತ್ತಿಯಾಗಿದ್ದರು ಪಿಂಚಣಿ ಈ ಯೋಜನೆಯ ಹೆಸರಲ್ಲಿ ಲಕ್ಷಗಟ್ಟಲೆ ಸಂಬಳ ಸಹ ಪಡೆಯುತ್ತಿದ್ದು ಈಗ ಇವರುಗಳು ಯಾವುದೇ ದೂರುಗಳನ್ನು ಸ್ವೀಕರಿಸದೆ ಕಚೇರಿಯನ್ನೇ ಮುಚ್ಚಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಹಗರಣದಿಂದ ತಪ್ಪಿಸಿಕೊಳ್ಳಲು ಸರ್ಕಾರದ ದಿಕ್ಕು ತಪ್ಪಿಸಲು ಹೊರಟಿದ್ದಾರೆ.
ನಿರ್ವಹಣೆ ಹೆಸರಿನಲ್ಲಿ ಕಾಮಗಾರಿ ಮಾಡದೆ ಗುತ್ತಿಗೆದಾರನೊಂದಿಗೆ ಶಾಮಿಲಾಗಿ ಗುತ್ತಿಗೆದಾರನಿಗೆ ಕೊಟ್ಟಿರುವ ಕೋಟಿಗಟ್ಟಲೆ ಹಣ ಎಷ್ಟು? ಇನ್ನು ನಿರ್ವಹಣೆಗೆ ಉಳಿದಿದೆ ಎನ್ನಲಾದ 80 ಕೋಟಿ ಹಣವನ್ನು ಲೂಟಿ ಹೊಡೆಯಲು ಸರ್ಕಾರ ಬಿಡಬಾರದು. ಜಲ ಮಂಡಳಿಯಿಂದ 24*7 ಕುಡಿಯುವ ನೀರಿನ ಕಾಮಗಾರಿ ಯೋಜನಾ ಬದ್ಧವಾಗಿ ಮುಗಿಯದೇ ಇದ್ದರು ತರಾ ತುರಿಯಲ್ಲಿ ಶರಾವತಿ ನಗರ ಹೊಸಮನೆ ಬಡಾವಣೆಯಲ್ಲಿ ರಸ್ತೆ ಫುಟ್ಪಾತ್ ಕಾಮಗಾರಿಗಳು ಮುಗಿಸಿದ್ದೇಕೆ..?! ಈಗ ಅವರು ಗುಂಡಿಗಳು ಹೊಡೆಯುತ್ತಿದ್ದು ರಸ್ತೆಗಳು ಫುಟ್ಪಾತ್ ಹಾಳು ಮಾಡುತ್ತಿದ್ದು ಇದು ತೆರಿಗೆಯ ಹಣ ಲೂಟಿ ಅಲ್ಲವೇ? ಸ್ಮಾರ್ಟ್ ಸಿಟಿ ಮಂಡಳಿಯ ಅಧ್ಯಕ್ಷರಾದ ಬಿ ಬಿ.ಕಾವೇರಿ ಮೇಡಮ್ ರವರು ಕುಳಿತಲ್ಲೇ ಕಾಮಗಾರಿ ನೋಡದೆ ತಾವು ದಯಮಾಡಿ ಶಿವಮೊಗ್ಗಕ್ಕೆ ಬಂದು ಇದನ್ನೆಲ್ಲ ಪರಿಶೀಲಿಸಿ. ನಗರದ ಸ್ಮಾರ್ಟ್ ಸಿಟಿ ಯೋಜನೆಯ ಶರಾವತಿನಗರ ,ಹೊಸಮನೆ ಬಡಾವಣೆಯ ಕಳಪೆ ಕಾಮಗಾರಿ ಹಾಗೂ ಇತರೆ ಬಡಾವಣೆಯ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡ ಮೇಲೆ ಸ್ಮಾರ್ಟ್ ಸಿಟಿ ಕಚೇರಿ ಬಂದ್ ಮಾಡಿಸಬೇಕು.
ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿ ತೋರಿಸಲು ಸಿದ್ಧನಿದ್ದೇನೆ ಎಂದ ಶ್ಯಾಮ್ ಸುಂದರ್..!
ಹೊಸಮನೆ ಶರಾವತಿ ನಗರದಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಯ ಗುಂಡಿಗಳನ್ನು ನಾನು ತೋರಿಸಲು ಸಿದ್ಧನಿದ್ದೇನೆ. ಇದರಲ್ಲಿ ನಡೆದಿರುವ ಸಮಗ್ರ ಭ್ರಷ್ಟಾಚಾರವನ್ನು ತನಿಖೆ ಮಾಡಿಸಿ ನಿವೃತ್ತಿಯಾಗಿರುವ ಈ ಮೂವರು ಅಧಿಕಾರಿಗಳಿಂದ ದುರುಪಯೋಗ ಆಗಿರುವ ಹಣವನ್ನ ವಸೂಲಿ ಮಾಡಬೇಕು. ಇವರ ಮೇಲೆ ಕ್ರಮ ಕೈಗೊಳ್ಳಬೇಕು.ಎಂದು ಒತ್ತಾಯಿಸುತ್ತೇನೆ. ಜಿಲ್ಲಾ ಸಚಿವರನ್ನು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿ ಆಡಳಿತ ಪಕ್ಷದ ಮಾಜಿ ನಗರಸಭಾ ಸದಸ್ಯರು ಜಿಲ್ಲಾ ಕಾಂಗ್ರೆಸ್ ನ ಪಧಾನ ಕಾರ್ಯದರ್ಶಿಗಳು ಆದ ಎನ್ ಕೆ ಶ್ಯಾಮ್ ಸುಂದರ್ ವಿನಂತಿಸಿದ್ದಾರೆ.