ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕು ಹಿಂದೆ ವಿ ಐ ಎಸ್ ಎಲ್ ಹಾಗೂ ಎಂಪಿಎಂ ನಂತಹ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದ್ದು ಉಕ್ಕಿನ ನಗರಿ ಎದ್ದು ಕೀರ್ತಿ ಪಡೆದಿತ್ತು ಹಲವು ಜನರಿಗೆ ಉದ್ಯೋಗ ಸಿಕ್ಕಿದ್ದು ರಾಜ್ಯದಲ್ಲಿಯೇ ಭದ್ರಾವತಿಗೆ ಉತ್ತಮ ಹೆಸರು ಇತ್ತು ಆಗ ಕೂಡ ಇಸ್ಪೀಟ್ ಓಸಿ ಅಂತಹ ದಂಧೆಗಳು ನಡೆಯುತ್ತಿದ್ದವು ಜೊತೆಗೆ ಅಪ್ಪಾಜಿ ಗೌಡ ವರ್ಸಸ್ ಸಂಗಮೇಶ್ ಹೋರಾಟ ನಿರಂತರವಾಗಿತ್ತು ಒಂದು ಚುನಾವಣೆಯಲ್ಲಿ ಸಂಗಮೇಶ್ ಗೆದ್ದರೆ ಮತ್ತೊಂದು ಚುನಾವಣೆಯಲ್ಲಿ ಅಪ್ಪಾಜಿ ಗೌಡ ಗೆಲ್ಲುತ್ತಿದ್ದರು ಈ ಹೋರಾಟಗಳು ನಿರಂತರವಾಗಿ ಇಬ್ಬರ ನಡುವೆ ನಡೆಯುತ್ತಿದ್ದವು .
ಈಗ ಏನಾಗಿದೆ ಭದ್ರಾವತಿಗೆ…?!
ಅದ್ದು ಇದ್ದ ಇಸ್ಪೀಟ್ ಓಸಿ ಮರಳು ಮಾಫಿಯಾ ದಂಧೆ ಇದ್ದು ವ್ಯಾಪಕವಾಗಿ ವಿಸ್ತಾರವಾಗಿದ್ದು ಇದನ್ನು ನಿಯಂತ್ರಿಸಬೇಕಾದ ಶಾಸಕರೇ ಮೌನವಾಗಿದ್ದಾರೆ..?! ಶಾಸಕರ ಪುತ್ರ ಬಸವೇಶ್ ಕೈಯಲ್ಲಿ ಇಡೀ ಭದ್ರಾವತಿ ತಾಲೂಕು ನಲುಗಿ ಹೋಗಿದೆ ಬಸವೇಶ್ ಅಂದರೆ ಸಾಕು ಅಧಿಕಾರಿಗಳ ವಲಯದಲ್ಲಿ ನಡುಕ ಶುರುವಾಗುತ್ತದೆ ಆ ಮಟ್ಟದ ಹಾವಳಿ ಶಾಸಕರ ಮುದ್ದಿನ ಪುತ್ರ ಬಸವೇಶ್ ಇಟ್ಟಿದ್ದಾನೆ.
ಅಧಿಕಾರಿಗಳಿಗೆ ಏಕವಚನದಲ್ಲೇ ವಾಗ್ದಾಳಿ..!
ಶಾಸಕ ಸಂಗಮೇಶ್ ಪುತ್ರ ಬಸವೇಶ್ ಯಾವ ಅಧಿಕಾರಿಗಳನ್ನು ಬಿಟ್ಟಿಲ್ಲ ಹೆಸರು ಹೇಳಲು ಇಚ್ಚಿಸಿದ ಕೆಲವು ಅಧಿಕಾರಿಗಳು ಮೌನವಹಿಸಿದ್ದಾರೆ ತಹೀಶೀಲ್ದಾರ್, ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳು, ಈತನ ಮಾತಿಗೆ ಎದುರು ಮಾತನಾಡುವುದಿಲ್ಲ ಒಂದು ವೇಳೆ ಮಾತನಾಡಿದರೆ ಅವರಿಗೂ ಸಂಸ್ಕೃತ ಪದಗಳು ಗ್ಯಾರಂಟಿ, ಒಂದು ವೇಳೆ ಈ ತರ ಅಕ್ರಮ ದಂಧೆ ನಡೆಯುವ ಜಾಗಕ್ಕೆ ಗೊತ್ತಿಲ್ಲದೆ ಅಪ್ಪಿ ತಪ್ಪಿ ಯಾವುದಾದರೂ ಅಧಿಕಾರಿ ಹೋದರಂತೂ ಅವರ ಕಥೆ ಮುಗಿಯಿತು ಬಿಡಿ ಅವರ ಇಡೀ ಕುಟುಂಬ ಈ ತರಹ ಸಂಸ್ಕೃತ ಭಾಷೆಯಲ್ಲಿ ಬಂದುಬಿಡುತ್ತಾರೆ.
ಗಣಿ ಇಲಾಖೆಯ ವಿಜ್ಞಾನಿಯ ಮೇಲೆ ಏಕವಚನದಲ್ಲಿ ವಾಗ್ದಾಳಿ..!
ಗಣಿ ಇಲಾಖೆಯ ವಿಜ್ಞಾನಿಜ್ಯೋತಿ, ಪ್ರಿಯಾ ದೊಡ್ಡ ಗೌಡರ್ ಅವರನ್ನು ಒಳಗೊಂಡ ತಂಡ ಮೊನ್ನೆ ಭದ್ರಾವತಿಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ತಡರಾತ್ರಿ ತಾಳಿ ನಡೆಸಿದ್ದರು ಆ ಸಮಯದಲ್ಲಿ ಶಾಸಕಸಂಗಮೇಶ್ ಪುತ್ರನ ಎಂಟ್ರಿ ಆಗುತ್ತದೆ ಆಗ ನೋಡಿ ಶುರುವಾಗುತ್ತದೆ ಸಂಸ್ಕೃತ ಬಸವೇಶ್ ನ ಬಾಯಿಂದ ….
ಹೇ ಕೊಡೋ ಅವಳಿಗೆ ಫೋನನ್ನು ಫೋನ್ ಮಾಡಿದ್ರೆ ಫೋನ್ ಎತ್ತಕ್ಕಾಗಲ್ವಾ…?! ಆ ಕಡೆಯಿಂದ ಅಧಿಕಾರಿ ಜ್ಯೋತಿ ಇಲ್ಲ ಸಾರ್ ಹೇಳಿ ಏನಾಗಬೇಕು…. ಬಸವೇಶ್ ಏನಾಗಬೇಕು ಅಂತ ಕೇಳ್ತೀಯಾ ನೀವೇನು ಅಲ್ಲಿ ದರೋಡೆ ಮಾಡಕ್ಕೆ ಬಂದಿದ್ದೀರಾ.. ಇಲ್ಲ ಸಾರ್ ನಾವ್ ರೈಡ್ ಮಾಡಕ್ ಬಂದಿದೀವಿ… ಬಸವೇಶ್ ತನ್ನ ಮನೆಯಲ್ಲೂ ತಾಯಿ ತಂಗಿ ಇದ್ದಾರೆ ಎನ್ನುವುದನ್ನು ಮರೆತು ಹೇಳಬಾರದ ಎಲ್ಲಾ ಶಬ್ದಗಳನ್ನು ಹೇಳಿ ಮುಗಿಸುತ್ತಾನೆ…. ಬೇ ಮುಂಡೇ…. ಸೂ ಮುಂಡೆ… ಎನ್ನುವ ಶಬ್ದಗಳಿಂದ ಶುರುವಾಗಿ ಕೊನೆಗೆ ಕೇಳಲಾರದ ಶಬ್ದಗಳಿಂದ ಮುಗಿಸುತ್ತಾನೆ… ಇವನ ಸಂಸ್ಕೃತ ಪದಗಳು ಇವರ ದುರಂಕಾರವನ್ನು ಎತ್ತಿ ತೋರಿಸುತ್ತದೆ..
ಶಿವಮೊಗ್ಗದ ರಾಜಕಾರಣಿಗಳ ಮಕ್ಕಳಿಗೆ ಇಲ್ಲದ ಅಹಂಕಾರ ಬಸವೇಶ್ ನಿಗೆ ಏಕೆ…?!
ಶಿವಮೊಗ್ಗದಲ್ಲಿ ಹಲವು ರಾಜಕಾರಣಿಗಳ ಮಕ್ಕಳು ಈಗಲೂ ಕೂಡ ಸಕ್ರಿಯವಾಗಿ ರಾಜಕಾರಣದಲ್ಲಿ ಇದ್ದಾರೆ ಆದರೆ ಅವರುಗಳು ಎಲ್ಲೂ ಕೂಡ ಈ ತರವಾದ ಕೀಳು ಮಟ್ಟದ ಶಬ್ದಗಳನ್ನು ಬಳಸಿಲ್ಲ ಹಾಗೆ ಈ ತರಹ ಅಕ್ರಮ ದಂಧೆಗಳಿಗೆ ಬೆಂಬಲ ಕೂಡ ನೀಡಿಲ್ಲ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರರಾದ ಬಿ ವೈ ವಿಜಯೇಂದ್ರ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರರಾದ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಪುತ್ರ ಕೆಇ ಕಾಂತೇಶ್, ಯೋಗೀಶ್, ಶರಣ್, ಸೇರಿದಂತೆ ಯಾರೊಬ್ಬರೂ ಈ ತರಹದ ಕೀಳು ಮಟ್ಟಕ್ಕೆ ಇಳಿದಿಲ್ಲ ಅವರಿಗೆ ಮನೆಯಲ್ಲಿ ಒಂದಷ್ಟು ಉತ್ತಮ ವಾತಾವರಣದಲ್ಲಿ ಬೆಳೆಸಿದ್ದಾರೆ ಆದರೆ ಶಾಸಕ ಸಂಗಮೇಶ್ ಪುತ್ರ ಬಸವೇಶನಿಗೆ ಇದ್ಯಾವುದು ಗೊತ್ತಿಲ್ಲ ತಾನು ಹೇಳಿದ್ದೆ ವೇದ ವಾಕ್ಯ… ಅಪ್ಪನ ಕಂಟ್ರೋಲಿಗೆ ಮಗ ಸಿಗುತ್ತಿಲ್ಲ… ಭದ್ರಾವತಿಯ ಶಾಸಕರ ಪುತ್ರನ ಕಾಟ ತಾಳಲಾರದೆ ಭದ್ರಾವತಿಯ ಜನರು ಸಂಗಮೇಶ್ ಹಟಾವೋ ಭದ್ರಾವತಿ ಬಚಾವೋ ಎನ್ನುತ್ತಿದ್ದಾರೆ…
ಇನ್ನೊಂದು ಬಿಹಾರ್ ಆಗದಿರಲಿ…!
ಭದ್ರಾವತಿ ತಾಲೂಕ್ ಇನ್ನೊಂದು ಬಿಹಾರ್ ರಾಜ್ಯವಾಗದಿರಲಿ ಎನ್ನುವುದು ಪ್ರಜ್ಞಾವಂತ ಶಿವಮೊಗ್ಗ ಜಿಲ್ಲೆಯ ನಾಗರಿಕರ ಆಗ್ರಹ ಏಕೆಂದರೆ ಬಿಹಾರ್ ರಾಜ್ಯದಲ್ಲಿ ಅಕ್ರಮ ಧಂದೆ ಕೋರರು ತಮ್ಮನ್ನು ತಡೆಯಲು ಬಂದ ಅಧಿಕಾರಿಗಳ ಮೇಲೆ ಗಾಡಿ ಹತ್ತಿಸಲು ಹೋಗುವುದು ಜನರನ್ನು ಸಾಯಿಸಿ ಅಲ್ಲೇ ಮುಚ್ಚಿ ಹಾಕುವುದು ಅಧಿಕಾರಿಗಳನ್ನು ಹೊಡೆದು ಸಾಯಿಸುವುದು ಮಾಡುತ್ತಿದ್ದರು ಇತ್ತೀಚಿನ ವರ್ಷಗಳಲ್ಲಿ ಅದು ನಿಯಂತ್ರಣಕ್ಕೆ ಬಂದಿದೆ ಆ ಮಾದರಿಯಲ್ಲಿ ಭದ್ರಾವತಿ ತಾಲೂಕ್ ಆಗದಿರಲಿ ಈಗಲೇ ಇದಕ್ಕೆ ನಿಯಂತ್ರಣ ಹಾಕಿ ಬಸವೇಶ್ ನನ್ನು ಬಂಧಿಸಿ ಎನ್ನುವುದು ಭದ್ರಾವತಿ ಜನರ ಆಗ್ರಹ…
ಲೋಕಾಯುಕ್ತರು ಇದರ ಬಗ್ಗೆ ಗಮನಹರಿಸುತ್ತಾರಾ…?!
ಈ ಘಟನೆ ನಡೆದ ಬಳಿಕ ಇಲ್ಲಿಯವರೆಗೆ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ದೂರು ಪ್ರತಿ ದೂರಿಗಳು ದಾಖಲು ಆಗಿಲ್ಲ ಪೊಲೀಸ್ ಇಲಾಖೆ ಕೂಡ ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಆದರೆ ಲೋಕಾಯುಕ್ತ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸುಮೊಟೊ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಾರಾ ಕಾದು ನೋಡಬೇಕು…
ರಘುರಾಜ್ ಹೆಚ್.ಕೆ..9449553305…