ಮಂಜು ನವುಲೆ- ಶಾಮೀರ್ ಪಾಷ ಸ್ನೇಹಿತರಿಂದ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…
ಕಾಂಗ್ರೆಸ್ ಮುಖಂಡ, ಯುವ ನಾಯಕ , ಆಪತ್ಬಾಂಧವ ಹಲವು ಜನರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ನೆರವನ್ನು ನೀಡುತ್ತಿರುವ ಎಂ.ಶ್ರೀಕಾಂತ್ ಹುಟ್ಟು ಹಬ್ಬದ ಸಂಭ್ರಮ ಅವರ ಈ ಹುಟ್ಟಿದ ಹಬ್ಬವನ್ನು ಅಭಿಮಾನಿ ಬಳಗದಿಂದ ಇಂದು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಿ ವಿಶಿಷ್ಟವಾಗಿ ಆಚರಿಸಲಾಯಿತು.
ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ನವುಲೆ ಮಂಜು ಶಾಮೀರ್ ಪಾಷ ಕಸಬಾ ನಿರ್ದೇಶಕ ಸಂದೀಪ್, ಕಾಂಗ್ರೆಸ್ ಮುಖಂಡ ಹಿರಿಯ ಪತ್ರಕರ್ತ.ಜು.ಪಾಶ, ಮಾಜಿ ಉಪ ಮೇಯರ್ ಪಾಲಾಕ್ಷಿ, ಬಸವರಾಜ್, ಮಾಲತೇಶ್, ಕೃಷ್ಣ, ಸಂತೋಷ್, ಪ್ರವೀಣ್, ರಾಘು ಗೌಡ, ಸಂದೇಶ್, ಪ್ರಕಾಶ್, ದಯಾ,ಶಿವು ಉಪಸ್ಥಿತರಿದ್ದು, ವಿತರಿಸಿದರು.