
ಬಿಜೆಪಿ ಈ ಸಲ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಹಾಲಿ ಕೇಂದ್ರ ಸಚಿವರಾಗಿರುವ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಇವರ ಜೊತೆಗೆ ಎಂಟು ಜನ ಉಪಮುಖ್ಯಮಂತ್ರಿಯನ್ನು ಮಾಡಿ ಎಲ್ಲರನ್ನೂ ಸಮಾಧಾನ ಮಾಡುವ ಒಂದು ಪೂರ್ವಸಿದ್ಧತೆಯ ಪ್ಲಾನ್ ಈಗಾಗಲೇ ತಯಾರಿ ನಡೆದಿದ್ದು..
ಶೃಂಗೇರಿ ಮಠವನ್ನು ಒಡೆದ ಬ್ರಾಹ್ಮಣರನ್ನು ನೀವು ಗೆಲ್ಲಿಸುತ್ತೀರಾ..?! ನೀವೇ ನಿರ್ಧರಿಸಿ ಎಂದು ಹೇಳುವುದರ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ಒಂದನ್ನು ನೀಡಿದ್ದು ಚುನಾವಣೆ ಹೊತ್ತಿನಲ್ಲಿ ಈ ಹೇಳಿಕೆ ಹಲವು ರೀತಿಯ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಟ್ಟಿದೆ.
ತಮ್ಮ ಕುಟುಂಬದ ವಿರುದ್ಧ ಪ್ರಹ್ಲಾದ್ ಜೋಶಿ ನಿನ್ನೆ ಮಾಡಿದ ಆರೋಪಕ್ಕೆ ಇಂದು ಟಾಂಗ್ ನೀಡಿದ್ರಾ ಮಾಜಿ ಸಿಎಂ..?!
ನಿನ್ನೆ ಬಿಜೆಪಿಯ ಸಮಾವೇಶದಲ್ಲಿ ಮಾತನಾಡುತ್ತಾ ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು ಅವರ ಹೆಂಡತಿಯರು ಅವರ ಮಕ್ಕಳು ಸೇರಿದಂತೆ ಎಲ್ಲರೂ ಚುನಾವಣೆ ರಾಜಕೀಯ ರಂಗದಲ್ಲಿ ಇರುವುದರಿಂದ ಇದನ್ನು ಪಂಚರಥಯಾತ್ರೆ ಮಾಡುವ ಬದಲು ನವಗ್ರಹ ಯಾತ್ರೆ ಮಾಡಬೇಕಿತ್ತು ಎಂದು ಹಾಸ್ಯದ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜೊತೆಗೆ ಮುಂದುವರೆದು ಹೈಕಮಾಂಡ್ ಉತ್ತರ ನೀಡುತ್ತದೆ ಎಂದು ಹೇಳುತ್ತಾರೆ ಇವರ ಹೈಕಮಾಂಡ್ ಎಂದರೆ ಇವರ ಮನೆಯ ಇವರ ಹೈಕಮಾಂಡ್ ಎಂದು ಹೇಳಿದ್ದರು ಇವರ ಈ ಹೇಳಿಕೆಯ ಬೆನ್ನಲ್ಲೇ ಇಂದು ಕುಮಾರಸ್ವಾಮಿ ಮುಂದಿನ ಸಲ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿಯಾಗುತ್ತಾರೆ ಹುಷಾರ್ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗಲು ಬಿಡಬೇಡಿ ಇವರು ಶೃಂಗೇರಿ ಮಠವನ್ನು ಒಡೆದ ಬ್ರಾಹ್ಮಣರು ಎಂದು ಹೇಳುವುದರ ಮೂಲಕ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ.
ರಘುರಾಜ್ ಹೆಚ್.ಕೆ…9449553305…


1 comment
**mitolyn official**
Mitolyn is a carefully developed, plant-based formula created to help support metabolic efficiency and encourage healthy, lasting weight management.