Wednesday, April 30, 2025
Google search engine
Homeಶಿವಮೊಗ್ಗತೀರ್ಥಹಳ್ಳಿಯಲ್ಲಿ ಗಾಂಜಾದ ಗಮ್ಮತ್ತು ಹೊಸೂರು ಹುಡುಗನಿಗೆ ಕೇಸ್ ಬಿತ್ತು...!

ತೀರ್ಥಹಳ್ಳಿಯಲ್ಲಿ ಗಾಂಜಾದ ಗಮ್ಮತ್ತು ಹೊಸೂರು ಹುಡುಗನಿಗೆ ಕೇಸ್ ಬಿತ್ತು…!

ಮಲೆನಾಡು ಎಂದರೆ ಸುಸಂಸ್ಕೃತರ, ಸಭ್ಯರ , ಬುದ್ದಿವಂತರ ತವರೂರು ಆದರೆ ಕೆಲವರು ಮಾಡುವ ಅನಾಚಾರಗಳಿಂದ ಆ ಹೆಸರಿಗೆ ಮಸಿಬಳಿಯುವಂತಹ ಪರಿಸ್ಥಿತಿ ಬಂದೊದಗಿದೆ.

ಅಕ್ರಮ ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಇದರ ಜೊತೆಗೆ ಗಾಂಜಾ ಮಾರಾಟ ಸೇವನೆ ವ್ಯಾಪಕವಾಗಿ ತಾಲೂಕಿನಾದ್ಯಂತ ಹರಡಿದ್ದು. ಇತ್ತೀಚೆಗೆ ಇದರ ವಿರುದ್ಧ ಪತ್ರಿಕಾ ಮಾಧ್ಯಮಗಳು ಕೂಡ ವ್ಯಾಪಕವಾಗಿ ವರದಿಗಳನ್ನು ಮಾಡುತ್ತಿವೆ.

ತೀರ್ಥಹಳ್ಳಿಯ ಹೊಸೂರಿನಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ:

ತೀರ್ಥಹಳ್ಳಿ ಸಮೀಪದ ಹೊಸೂರು ಗ್ರಾಮದ ನಿತಿನ್ ತಂದೆ ಮಂಜುನಾಥ್ 24 ವರ್ಷ ಈತ ಗಾಂಜಾ ಸೇವಿಸುತ್ತಿದ್ದು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಗಸ್ತಿನಲ್ಲಿದ್ದ ಆಗುಂಬೆ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಈತನನ್ನು ಬಂಧಿಸಿ ಶಿವಮೊಗ್ಗ ಮೇಗನ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಈತ ಗಾಂಜಾ ಸೇವನೆ ಮಾಡಿರುವುದು ಖಚಿತವಾದ ನಂತರ ಈತನ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳಿಸಿದ್ದಾರೆ.

ಗಾಂಜಾದ ಪೂರೈಕೆಯ ಮೂಲದ ಹಿಂದೆ ಬಿದ್ದ ತೀರ್ಥಹಳ್ಳಿ ಪೊಲೀಸರು:

ತೀರ್ಥಹಳ್ಳಿಯಲ್ಲಿ ಗಾಂಜಾ ಪೂರೈಕೆ ಹಾಗೂ ಸೇವನೆ ಆಘಾತಕಾರಿ ವಿಷಯವಾಗಿದ್ದು. ಇದನ್ನು ಪೂರೈಸುವವರ ಹಿಂದೆ ಪೊಲೀಸರು ವ್ಯವಸ್ಥಿತವಾಗಿ ಬಿದ್ದಿದ್ದು ಸದ್ಯದಲ್ಲೇ ಇನ್ನಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ.

ಗಾಂಜಾ ಪೂರೈಕೆ ಮಾಡುವವರಿಗೆ ಅಷ್ಟೇ ಅಲ್ಲ ಸೇವನೆ ಮಾಡುವವರಿಗೂ ಕೇಸ್ ಬೀಳುತ್ತೆ ಹುಷಾರ್:

ಮುಂಚೆ ಗಾಂಜಾ ಪೂರೈಕೆ ಮಾಡುವವರಿಗೆ ಹಾಗೂ ದಾಸ್ತಾನು ಇಟ್ಟುಕೊಂಡವರಿಗೆ ಮಾತ್ರ ಕೇಸ್ ಬೀಳುತ್ತಿತ್ತು. ಆದರೆ ಈಗ ಸೇವನೆ ಮಾಡುವವರಿಗೂ ಕೇಸ್ ಬೀಳುತ್ತೆ ಹುಷಾರ್. ಜೈಲು ಪಾಲಾಗುವುದು ಗ್ಯಾರಂಟಿ.

ಅಕ್ರಮ ಮದ್ಯ ಮಾರಾಟಗಾರರಿಗೂ ಎಚ್ಚರಿಕೆ ನೀಡಿದ ಪೊಲೀಸರು:

ತೀರ್ಥಹಳ್ಳಿಯಲ್ಲಿ ಅಂಗಡಿ ಮನೆಗಳಲ್ಲಿ ಯಥೇಚ್ಛವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ನಿರಂತರವಾಗಿ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸದ್ಯದಲ್ಲೇ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಹಾಗೂ ಅಲ್ಲಿ ಬಂದು ಅಂತಹ ಮದ್ಯವನ್ನು ಸೇವಿಸುವವರಿಗೂ ಸಹ ತಕ್ಕ ಶಿಕ್ಷೆ ನೀಡಲಾಗುವುದು ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ:9449553305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...