Wednesday, April 30, 2025
Google search engine
Homeರಾಜ್ಯಸ್ಕೂಲ್ ಡೇಸ್" ಚಿತ್ರೀಕರಣ ಪ್ರಾರಂಭ

ಸ್ಕೂಲ್ ಡೇಸ್” ಚಿತ್ರೀಕರಣ ಪ್ರಾರಂಭ


  • ಹಿರೇಬಾಗೇವಾಡಿ : ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ , ಕುಂದಾ ನಗರಿ ಡಿಂಪಲ್ ಕ್ವೀನ್ ಪ್ರೀಯಾ , ನಮ್ರತಾ ನಾಯಕಿ ನಟಿಯಾಗಿ ಅನೀಲ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ‘ಸ್ಕೂಲ್ ಡೇಸ್’ ಚಿತ್ರೀಕರಣಕ್ಕೆ ಇಲ್ಲಿನ ಕರ್ನಾಟಕ ಹೈಸ್ಕೂಲ್‌ನಲ್ಲಿ ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹಾಗೂ ಬಡೇಕೊಳ್ಳಮಠದ ನಾಗೇಂದ್ರಸ್ವಾಮೀಜಿ ಕ್ಯಾಮರಾ ಗುಂಡಿಯನ್ನು ಒತ್ತಿ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು.

  • ಜಿವಿವಿ ಸಂಘದ ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಆರ್ ಇಎಂಎಸ್ ಶಾಲೆಯ ಅಧ್ಯಕ್ಷ ಸುರೇಶ ಇಟಗಿ,ಸಂಯೋಜಕ ಆನಂದ ಕಳಸದ, ಪತ್ರಕರ್ತ ಸೋಮಶೇಖರ ಸೊಗಲದ ,ದಯಾನಂದ ಮುಪ್ಪೆನವರಮಠ ಮೊದಲಾದವರು ಆಗಮಿಸಿದ್ದರು. ಸುಮಾರು ಮೂವತ್ತು ದಿನಗಳ ಕಾಲ ಬೆಳಗಾವಿ, ಹಿರೇಬಾಗೇವಾಡಿ, ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವದಾಗಿ ಚಿತ್ರ ತಂಡ ಹೇಳಿದ್ದು , ಸ್ಕೂಲ್ ಡೇಸ್ ಚಿತ್ರದಲ್ಲಿ ಅನೀಲ ಹುದಲಿ, ನಾಯಕಿಯರಾಗಿ ಪ್ರೀಯಾ, ನಮ್ರತಾ , ಮಲ್ಲಿಕಾರ್ಜುನ, ಸಂದೀಪ, ದಾನೇಶ ಖಳನಾಯಕನಾಗಿ ವಿರಾಜ್, ಪ್ರಾಂಶುಪಾಲರಾಗಿ ಪತ್ರಕರ್ತ ಸೋಮಶೇಖರ ಸೊಗಲದ ಅಭಿನಯಿಸುತ್ತಿದ್ದಾರೆ. ಪಕ್ಕಾ ಹಾಸ್ಯ ಮತ್ತು ಮನೋರಂಜನೆಯ ಚಿತ್ರ ಇದಾಗಿದ್ದು ಎಲ್ಲರ ಮನವನ್ನು ಸೆಳೆಯುತ್ತದೆ. ಎಲ್ಲ ಅಂದು ಕೊಂಡಂತೆ ಆದರೆ ಈ ವರ್ಷದ ಕೊನೆಯೊಳಗೆ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ತರುವ ಯೋಚನೆ ಇದೆ ಎಂದು ನಿರ್ಮಾಪಕ ಉಮೇಶ್ ಹಿರೇಮಠ ಹೇಳುತ್ತಾರೆ.

  • ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ನಮ್ಮಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡಬೇಕು. ಇದರಲ್ಲಿ ಸಹಜ ರೀತಿಯಲ್ಲಿ ತುಂಬಾ ಉತ್ತಮವಾಗಿ ಅಭಿನಯಿಸುತ್ತಿದ್ದಾರೆ. ನಿಜಕ್ಕೂ ಖುಷಿಯಾಗುತ್ತಿದೆ ಎಂದು ನಿರ್ದೇಶಕ ಸಂಜಯ್ ಹೇಳುತ್ತಾರೆ.
    ತಾಂತ್ರಿಕ ವರ್ಗದಲ್ಲಿ ಕೃಷ್ಣ ಎ.ಆರ್.ಛಾಯಾಗ್ರಹಣ ಮತ್ತು ಸಂಕಲನ, ಮೇಕಪ್ ನಾಗೇಶ್, ಸಂಗೀತ ಬಿಜೆ ಸೂರ್ಯ, ರಾಮಕೃಷ್ಣ ಸಿ ಎಚ್, ಕೋರಿಯೋಗ್ರಫಿ ಖ್ಯಾತ ನೃತ್ಯ ನಿರ್ದೇಶಕರಾದ ಮದನ್ ಹರಿಣಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ, ಸಹಕಾರ ನಿರ್ದೇಶನ ರಂಜಿತ ತಿಗಡಿ, ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ಯುವ ಉತ್ಸಾಹಿ ನಿರ್ದೇಶಕ ಸಂಜಯ್ ಹಲಸಗಿ ಅವರದಿದ್ದು ನಿರ್ಮಾಪಕರು ಉಮೇಶ ಹಿರೇಮಠ ಆಗಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...