Wednesday, April 30, 2025
Google search engine
Homeಶಿವಮೊಗ್ಗಕೆಸರುಮಯವಾದ ಸಾಗರದ ನಗರಸಭೆಯ ವಾರದ ಸಂತೆ - ಸಾಗರ ನಗರಸಭೆಯ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ..!!

ಕೆಸರುಮಯವಾದ ಸಾಗರದ ನಗರಸಭೆಯ ವಾರದ ಸಂತೆ – ಸಾಗರ ನಗರಸಭೆಯ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ..!!

ಸಾಗರ:- ಕೇಂದ್ರ, ರಾಜ್ಯ, ಸ್ಥಳೀಯ ಆಡಳಿತವೂ ಬಿಜೆಪಿ ಸರ್ಕಾರ ಸರ್ಕಾರ ಆಡಳಿತ ವ್ಯವಸ್ಥೆ ಇದ್ದರೂ ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ದುರಾಡಳಿತಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಪ್ರತಿ ಗುರುವಾರ ನೆಡೆಯುವ ಸಂತೆ ಕೆಸರುಮಯವಾಗಿದ್ದೂ ತರಕಾರಿ ಹಾಗೂ ಜನುಪಯೋಗಿ ಸರಕು ಸಾಮಗ್ರಿಗಳನ್ನೂ ಮಾರುವವರ ಕೊಳ್ಳುವವರ ಸ್ಥಿತಿ ನರಕ ಸದೃಶವಾಗಿದ್ದೂ, ನಗರಸಭೆಯ ಆಡಳಿತರೂಢರ ವಿರುದ್ಧ ಹಿಡಿಶಾಪ ಹಾಕುತ್ತಿದ್ದೂ, ಪ್ರತಿ ವರ್ಷ ಕೋಟ್ಯಂತರ ರೂ ಆದಾಯವಿರುವ ಸಾಗರ ನಗರಸಭೆಯ ಆಡಳಿತಕ್ಕೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ.

ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ಸನಿಹದಲ್ಲೇ ಕೋಟ್ಯಂತರ ರೂ ಸಾರ್ವಜನಿಕ ತೆರಿಗೆ ಹಣ ಬಳಸಿ ಸುಸಜ್ಜಿತ ಸಂತೆ ಮೈದಾನ ಕಟ್ಟಡವೂ ನಿರ್ಮಿಸಿ ಹಲವು ವಸಂತಗಳೇ ಉರುಳಿದರೂ ಇನ್ನೂ ಉದ್ಘಾಟನೆಯಾಗದೇ ಇರುವುದು, ಸಾಗರ ನಗರಸಭೆಯು ಸಂತೆ ನೆಡೆಸುವ ಕಟ್ಟಡ ಮೂಲ ಉದ್ದೇಶವನ್ನೇ ಮರೆತಂತಿದೆ. ಈ ಸಂತೆ ಮೈದಾನವನ್ನೂ ಮದುವೆ, ಅರತಕ್ಷತೆ, ಕೆರೆಹಬ್ಬ ಇನ್ನಿತರ ಸಭಾ ಕಾರ್ಯಕ್ರಮಕ್ಕೆ ಮೀಸಲಿಟ್ಟಿರುವ ಸಾಗರ ನಗರಸಭೆಯ ಆಡಳಿತ ವಿರುದ್ಧ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇಂದಿರಾ ಗಾಂಧಿ ಮಹಿಳಾ ಕಾಲೇಜು ಹತ್ತಿರದಲ್ಲಿರುವ ಸುಸಜ್ಜಿತ ಕಟ್ಟಡಗಳನ್ನೂ ಹೊಂದಿದ ಸಂತೆ ಮೈದಾನವನ್ನೂ ತ್ವರಿತವಾಗಿ ಸಾರ್ವಜನಿಕರಿಗೆ ಸದುಪಯೋಗದತ್ತ ಸೂಕ್ತ ಕ್ರಮಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಸಾಗರದ ನಗರಸಭೆಯ ಆಡಳಿತರೂಢರಿಗೆ ಮನವಿ ಮಾಡಿದ್ದಾರೆ

✒️ ಓಂಕಾರ ಎಸ್. ವಿ. ತಾಳಗುಪ್ಪ..

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...