Wednesday, April 30, 2025
Google search engine
Homeಶಿವಮೊಗ್ಗಆರೋಗ್ಯಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಶೌಚಾಲಯ ಗಬ್ಬೆದು ನಾರುತ್ತಿದ್ದೂ ತುರ್ತು ನಿಗಾ ಘಟಕದಲ್ಲಿದೆ - ...

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಶೌಚಾಲಯ ಗಬ್ಬೆದು ನಾರುತ್ತಿದ್ದೂ ತುರ್ತು ನಿಗಾ ಘಟಕದಲ್ಲಿದೆ – ಕುಡುಕರ ತಾಣವಾಗಿದೆ..!! ಡಾ// ಶ್ರೀಧರ್ ಇದ್ದರು ಯಾಕೆ ಈ ಪರಿಸ್ಥಿತಿ..?

ಶಿವಮೊಗ್ಗ:- ಜಿಲ್ಲೆಯ ಬಹುದೊಡ್ಡ ಸರ್ಕಾರಿ ಆಸ್ಪತ್ರೆಯಾದ ಮೇಗನ್ ಆಸ್ಪತ್ರೆಗೆ ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಂಗಳೂರು ,ಜಿಲ್ಲೆಗಳಿಂದಲೂ ಸಾಕಷ್ಟು ಜನ ರೋಗಿಗಳು ಬರುತ್ತಾರೆ .

ಸದಾ ಸುದ್ದಿಯಲ್ಲಿರುವ ಮೇಗನ್ ಆಸ್ಪತ್ರೆ:

ಸದಾ ಒಂದಿಲ್ಲೊಂದು ಸುದ್ದಿಗಳಿಂದ ಪ್ರಚಾರದಲ್ಲಿರುವ ಮೇಗನ್ ಆಸ್ಪತ್ರೆಯ ಅಧೀಕ್ಷಕರಾಗಿ ಡಾ/ಶ್ರೀಧರ್ ಬಂದಮೇಲೆ ಒಂದಷ್ಟು ಸುಧಾರಣೆಗೆ ಬಂದಿತ್ತು.

ಮೇಗನ್ ಆಸ್ಪತ್ರೆಯ ನಿರ್ದೇಶಕರು ಆಟಕ್ಕುಂಟು ಲೆಕ್ಕಕ್ಕಿಲ್ಲ:

ಮೇಗನ್ ಆಸ್ಪತ್ರೆಯ ನಿರ್ದೇಶಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅವರಿಗೂ ಹಾಗೂ ಅಧೀಕ್ಷಕರಿಗೆ ಸಮನ್ವಯದ ಕೊರತೆಯಿದೆ ಅಧೀಕ್ಷಕರಾದ ಶ್ರೀಧರ್ ಒಂದಷ್ಟು ಕಾಳಜಿಯಿಂದ ಲವಲವಿಕೆಯಿಂದ ಓಡಾಡಿಕೊಂಡು ಒತ್ತಡದ ನಡುವೆಯೂ ಕಾರ್ಯನಿರ್ವಹಿಸುತ್ತಾರೆ.ಆದರೆ ಆಸ್ಪತ್ರೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಕರು ಹಿಂದೇಟು ಹಾಕುತ್ತಾರೆ . ಆದ್ದರಿಂದ ವಿಶಾಲವಾದ ಆಸ್ಪತ್ರೆಯಾದರೂ ಸಮರ್ಪಕವಾದ ಸೇವೆ ಜನರಿಗೆ ಲಭ್ಯವಾಗುತ್ತಿಲ್ಲ.

ಆಸ್ಪತ್ರೆಯ ಶೌಚಲಯ ಗಬ್ಬೆದ್ದು ನಾರುತ್ತಿದೆ :

ಮೆಗ್ಗಾನ್ ಆಸ್ಪತ್ರೆಯ ಶೌಚಾಲಯವೂ ಗಬ್ಬೆದು ಹೋಗಿದ್ದೂ, ಕುಡುಕರು ಮಧ್ಯ ಬಾಟಲಿ & ಮಧ್ಯ ಪೌಚ್ಯಿಂದ ಕೂಡಿದ್ದೂ, ಗುಟ್ಕಾ ಉಗುಳಿರುವುದು ಸಭ್ಯರಿಗೆ ಶೌಚಾಲಯ ಬಳಸಲು ಅಸಭ್ಯವಾಗಿದ್ದು ಬಾಗಿಲಿಗೆ ಸರಿಯಾದ ಲಾಕ್ ವ್ಯವಸ್ಥೆಯಿಲ್ಲದೇ ಪರದಾಟ ನೆಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಿಮ್ಸ್ ಆಡಳಿತ ಮಂಡಳಿ ಮೆಗ್ಗಾನ್ ಆಸ್ಪತ್ರೆಯ ಶೌಚಾಲಯ ಶುಚಿತ್ವ ಕಾಪಾಡುವಂತೆ ರೋಗಿಗಳು ಹಾಗೂ ರೋಗಿಗಳ ಪೋಷಕರು ಕೋರಿದ್ದಾರೆ.

ರೋಗಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ :

ರೋಗಿಗಳಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ ಚೇರ್ ಗಳನ್ನು ಹಾಕಿಲ್ಲ ನೆಲದಲ್ಲಿ ಕೆಲವರು ಕುಳಿತುಕೊಂಡರೆ, ಕೆಲವರು ಅಲ್ಲೇ ಮಲಗಿರುತ್ತಾರೆ. ರೋಗಿಗಳಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳನ್ನು ಕಲ್ಪಿಸಿ… ನಿತ್ಯ ಗೋಳಾಡುವ ರೋಗಿಗಳ ಗೋಳಾಟವನ್ನು ತಪ್ಪಿಸಿ… ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರುಗಳು ಸರಿಯಾದ ಸಮಯಕ್ಕೆ ಲಭ್ಯ ಇರುವುದಿಲ್ಲ…ಆದರ ಬಗ್ಗೆ ಗಮನಹರಿಸಿ… ಎಲ್ಲಾ ಇದ್ದು ಏನೂ ಇಲ್ಲದಂತೆ ಆಗಿರುವ ಆಸ್ಪತ್ರೆಗೆ ಡಾಕ್ಟರ್ ಶ್ರೀಧರ್ ಬಂದ ಮೇಲೆ ಒಂದು ನಂಬಿಕೆ ಬಂದಿತ್ತು. ಅದು ಹಾಗೆ ಮುಂದುವರೆಯಲಿ ಎನ್ನುವ ವಿಶ್ವಾಸ ಪತ್ರಿಕೆಯದು….

ಓಂಕಾರ ಎಸ್. ವಿ. ತಾಳಗುಪ್ಪ

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...