Wednesday, April 30, 2025
Google search engine
Homeಶಿವಮೊಗ್ಗಗಾಂಧಿ ನಾಡಿನಲ್ಲಿ ಗಾಂಧಿ ಪ್ರತಿಮೆಗೆ ರಕ್ಷಣೆಯಿಲ್ಲ..! ಮಕ್ಕಳು ಆಟಕ್ಕೆ ಹೋದರೆ ಪ್ರಾಣಕ್ಕೆ ಕುತ್ತು ತಪ್ಪಿದ್ದಲ್ಲ..!...

ಗಾಂಧಿ ನಾಡಿನಲ್ಲಿ ಗಾಂಧಿ ಪ್ರತಿಮೆಗೆ ರಕ್ಷಣೆಯಿಲ್ಲ..! ಮಕ್ಕಳು ಆಟಕ್ಕೆ ಹೋದರೆ ಪ್ರಾಣಕ್ಕೆ ಕುತ್ತು ತಪ್ಪಿದ್ದಲ್ಲ..! ಶೌಚಾಲಯಗಳು ಮನುಷ್ಯರು ಉಪಯೋಗಿಸುವ ಸ್ಥಿತಿಯಲ್ಲಿಲ್ಲ..! ಕುಡಿಯುವ ನೀರಿನ ವ್ಯವಸ್ಥೆ ಇಲ್ಲ..! ಈಜುಕೊಳ ಇದೆ ಉಪಯೋಗಿಸುವಂತಿಲ್ಲ..! ವಿದ್ಯುತ್ ದೀಪಗಳಿವೆ ಬೆಳಕು ಬರಲ್ಲ..! ಅಕ್ರಮ ಅನೈತಿಕ ಚಟುವಟಿಕೆಗಳ ತಾಣವಾಗಿದೆ..! ಇದು ನಮ್ಮ ಶಿವಮೊಗ್ಗ ಸ್ಮಾರ್ಟ್ ಸಿಟಿ ಉದ್ಯಾನವನದ ಅವ್ಯವಸ್ಥೆ ..!ಇದೇನಾ ಸ್ವಚ್ಛ ಭಾರತ್..? ಫೋಟೋಗಳು ಇದೆ ವೀಕ್ಷಿಸಿ..! ಬೇಗ ಸಮಸ್ಯೆಗಳನ್ನು ಪರಿಹರಿಸಿ..!! ಭ್ರಷ್ಟರ ಪಿತಾಮಹ m.d. ಚಿದಾನಂದ ವಠಾರೆ ಇಲ್ಲಿಂದ ತೊಲಗುವ ವರೆಗೂ ಶಿವಮೊಗ್ಗಕ್ಕೆ ಉಳಿಗಾಲವಿಲ್ಲ..?

ಮಹಾತ್ಮ ಗಾಂಧೀಜಿ ಪ್ರತಿಮೆಗೆ ರಕ್ಷಣೆ ಇಲ್ಲ , ಈಜುಕೊಳ ಇದ್ದರು ಉಪಯೋಗ ಮಾಡುವಂತಿಲ್ಲ…

ಚಿಕ್ಕ ಮಕ್ಕಳು ಆಟವಾಡುವ ಆಟಿಕೆಗಳು ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಹಾಗಿದೆ… ಉಪಯೋಗಿಸುವಂತಿಲ್ಲ…

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿದೆ. ಆದರೆ ಗುಣಮಟ್ಟದ ಕಾಮಗಾರಿಗಳು ಆಗುತ್ತಿಲ್ಲ. ನಿರಂತರವಾಗಿ ಮಾಧ್ಯಮಗಳು ಹೋರಾಟಗಾರರು ಇದರ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಈ ಅಕ್ರಮಗಳ ಪಿತಾಮಹ ಎಂ ಡಿ ಚಿದಾನಂದ ವಠಾರೆಗೆ ಬುದ್ಧಿ ಬಂದಿಲ್ಲ.

ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಉದ್ಯಾನವನದ ಅವ್ಯವಸ್ಥೆ:

ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನದ ವ್ಯವಸ್ಥೆ ನೋಡಿ ನಾಗರಿಕರು ಚೀಮಾರಿ ಹಾಕುತ್ತಿದ್ದಾರೆ. ಕನಿಷ್ಠ ವಾರ್ಡ್ಗಳಲ್ಲಿ ಇರುವ ಉದ್ಯಾನವನದ ಸೌಲಭ್ಯಗಳು ಈ ಉದ್ಯಾನವನದಲ್ಲಿ ಇಲ್ಲ …

ಗಾಂಧಿ ಪ್ರತಿಮೆಗೆ ರಕ್ಷಣೆ ಇಲ್ಲ ಸ್ವಚ್ಛತೆಯಿಂದ ಕೂಡಿಲ್ಲ:

ಗಾಂಧಿ ನಾಡಿನಲ್ಲಿ ಗಾಂಧಿ ಪ್ರತಿಮೆಗೆ ರಕ್ಷಣೆ ಇಲ್ಲ ಇನ್ನೇನು ಬಿದ್ದುಹೋಗುವ ಸ್ಥಿತಿಯಲ್ಲಿದೆ ಪ್ರತಿಮೆ ಸ್ವಚ್ಛತೆಯಿಂದ ಕೂಡಿಲ್ಲ..

ಸ್ತ್ರೀ-ಪುರುಷರ ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ:

ಉದ್ಯಾನವನದಲ್ಲಿರುವ ಸ್ತ್ರೀ-ಪುರುಷರ ಶೌಚಾಲಯಗಳು ನಾಗರಿಕರು ಬಳಸಲು ಯೋಗ್ಯವಾಗಿಲ್ಲ ಅದಕ್ಕೋಸ್ಕರ ಪತ್ರಿಕೆ ಫೋಟೋವನ್ನು ಕೂಡ ಹಾಕಿಲ್ಲ..

ಅಕ್ರಮ ಅನೈತಿಕ ಚಟುವಟಿಕೆಗಳ ತಾಣವಾದ ಉದ್ಯಾನವನ:

ಅಕ್ರಮ ಅನೈತಿಕ ಚಟುವಟಿಕೆಗಳ ತಾಣವಾದ ಉದ್ಯಾನವನ ರಾತ್ರಿಯಾದರೆ ಸಾಕು ಎಲ್ಲಾ ಚಟುವಟಿಕೆಗಳು ಉದ್ಯಾನವನದಲ್ಲಿ ನಡೆಯುತ್ತವೆ. ಹಗಲು ಹೊತ್ತಿನಲ್ಲಿ ಜೂಜಿನ ಆಟಗಳು ನಡೆಯುತ್ತಿರುತ್ತವೆ. ಇಸ್ಪೀಟ್ ಓಸಿ ಆಟಗಳ ಲೆಕ್ಕಾಚಾರದಲ್ಲಿ ಜೂಜುಕೋರರು ನಿರತರಾಗಿರುತ್ತಾರೆ…

ವಿದ್ಯುದ್ದೀಪಗಳು ಇದ್ದರು ಬೆಳಕು ಬರುವುದಿಲ್ಲ:

ಉದ್ಯಾನವನದಲ್ಲಿರುವ ವಿದ್ಯುದ್ದೀಪಗಳು ಕೆಲವು ಕಡೆ ಒಡೆದು ಹೋಗಿದ್ದು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ.ದೀಪಗಳು ಇದ್ದರೂ ಬೆಳಕು ಮಾತ್ರ ಇಲ್ಲ ಕತ್ತಲಲ್ಲಿ ಅಕ್ರಮ ಚಟುವಟಿಕೆಗಳಿಗೆ ಉಪಯುಕ್ತ ಸ್ಥಳವಾಗಿದೆ..

ರಘುರಾಜ್ ಹೆಚ್. ಕೆ….

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...