Wednesday, April 30, 2025
Google search engine
Homeರಾಜ್ಯಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆ: ರೋಟೇರಿಯನ್‌ ಸಹಕಾರ ರತ್ನ ಬಿ. ನಾಗರಾಜ್‌..!!

ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆ: ರೋಟೇರಿಯನ್‌ ಸಹಕಾರ ರತ್ನ ಬಿ. ನಾಗರಾಜ್‌..!!

..

ರೋಟರಿ ಬೆಂಗಳೂರು ರಾಜರಾಜೇಶ್ವರಿನಗರ ಸೆಂಟೇನಿಯಲ್‌ ಕ್ಲಬ್‌ ಅಧ್ಯಕ್ಷರಾಗಿ ಸಹಕಾರ ರತ್ನ ಬಿ. ನಾಗರಾಜ್‌ ಅಧಿಕಾರ ಸ್ವೀಕಾರ…

ಬೆಂಗಳೂರು ಜುಲೈ 11: ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆಸಲ್ಲಿಸುವುದಾಗಿ ಸಹಕಾರರತ್ನ ರೋಟರಿಯನ್ ಬಿ.ನಾಗರಾಜ ತಿಳಿಸಿದರು.

ರೋಟರಿ ಬೆಂಗಳೂರು ರಾಜರಾಜೇಶ್ವರಿನಗರ ಸೆಂಟೇನಿಯಲ್ ಕ್ಲಬ್‌ ಅಧ್ಯಕ್ಷರಾಗಿ ಸಹಕಾರರತ್ನ ರೋಟರಿಯನ್ ಬಿ.ನಾಗರಾಜ ಅವರು ಪದವಿ ಸ್ವೀಕರಿಸಿ ಮಾತನಾಡಿದರು, ರೋಟರಿ ಕ್ಲಬ್‌ ಸಮಾಜದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳ ಮೂಲಕ ತನ್ನದೇ ಅದ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ವರ್ಷದ ರೋಟರಿ ಇಂಟರ್‌ನ್ಯಾಷನಲ್‌ ಥೀಮ್‌ ಆಗಿರುವ “ಇಮ್ಯಾಜಿನ್‌ ರೋಟರಿ” ಯ ಅಡಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಆಡಳಿತ ಮಂಡಳಿಯ ಸದಸ್ಯರುಗಳು ಸ್ಟಾರ್‌ ವಾಕರ್ಸ್‌ಗಳಾಗಿ ಕಾರ್ಯನಿರ್ವಹಿಸಲಿದ್ದೇವೆ. ಅಲ್ಲದೇ, ರೋಟರಿ ಕ್ಲಬ್‌ ನ ಯೋಜನೆಗಳ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಶ್ರಮಿಸಲಿದ್ದೇವೆ ಎಂದು ಹೇಳಿದರು.

ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ 3190 ನೇ ಜಿಲ್ಲೆಯ ಜಿಲ್ಲಾರಾಜ್ಯಪಾಲಕರಾದ ರೋಟರಿಯನ್ ಜಿತೇಂದ್ರ ಅನೇಜಾರವರು ಪ್ರಮಾಣವಚನ ಭೋಧಿಸಿದರು.

ಆಡಳಿತ ಮಂಡಳಿ:


ವಿ.ಜಿ ಕಾಸಲ್ – ಮಾಜಿ ಅಧ್ಯಕ್ಷರು, ರಾಘವೇಂದ್ರ ಇನಾಂದಾರ್‌ -ಉಪಾಧ್ಯಕ್ಷರಾಗಿ, ರಘುಬನ್ನೂರು-ಕಾರ್ಯದರ್ಶಿ, ಎಂ.ಜೆ ಪ್ರಶಾಂತ್ – ಪಿ.ಈ, ಎಂ.ಸುಪ್ರೀತ್ – ಜಂಟಿಕಾರ್ಯದರ್ಶಿ, ಲತಾ ಅಡಿಕೆ-ಖಜಾಂಚಿ, ಶರ್ಮಿಳಾ ಗಣೇಶ್ – ಸಾರ್ಜೆಂಟ್
ನಿರ್ದೇಶಕರುಗಳಾಗಿ ಬೀನಾ ಶ್ರೀಹರಿ, ಎಆರ್‌ಸಿ ಸಿಂದ್ಯಾ, ಟಿ.ಎಂ. ಸೂರಜ್, ಸವಿತ ಇನಾಂದಾರ್, ವಿವೇಕ್‌ಚಂದ್ರ ಸುರೇಶ್‌ಮಾದವನ್ ಮತ್ತು ಸತ್ಯನಾರಾಯಣರವರು ಆಯ್ಕೆಯಾದರು.

ಸಹಾಯಕ ರಾಜ್ಯ ಪಾಲಕರಾದ ರವಿನರಸಿಂಹನ್ ರವರು ಕ್ಲಬ್‌ನ ಸವಿ ಸಂಚಿಕೆಯನ್ನು ಬಿಡುಗಡೆಮಾಡಿದರು. ವಲಯ ರಾಜ್ಯಪಾಲಕರಾದ ಶೋಭಾ ಮುರಳಿಯವರು ಜನರ ಸೇವೆಗಾಗಿ ಹಣ ಸಂಗ್ರಹ ಮಾಡುವ ಬಗ್ಗೆ ತಿಳಿಸಿದರು. ಐದು ವರ್ಷದ ಹೆಣ್ಣುಮಗುವಾದ ಕುಮಾರಿ ದ್ಯುತಿ ಹೃದಯ ಚಿಕಿತ್ಸೆಗಾಗಿ ರೊಟೇರಿಯನ್‌ ಶರ್ಮಿಲಾ ಗಣೇಶ್‌ರವರು 35000 ರೂಗಳನ್ನು ದೇಣಿಗೆ ನೀಡಿದರು ಮತ್ತು 3190 ನೇ ರೋಟರಿ ಜಿಲ್ಲೆಯವರು 95000/- ರೂಗಳನ್ನು ದೇಣಿಗೆ ನೀಡಲಿದ್ದಾರೆ.

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...