Tuesday, June 10, 2025
Google search engine
Homeರಾಜ್ಯ"""ಶಿವಮೊಗ್ಗ ಗ್ರಾಮಾಂತರ ಶಾಸಕರ ವಿರುದ್ಧ ಆಯನೂರು ಮಂಜಣ್ಣ ಹಾಗೂ ಮಾಜಿ ಶಾಸಕರಾದ ಕೆ ಜಿ ಕುಮಾರಸ್ವಾಮಿ...

“””ಶಿವಮೊಗ್ಗ ಗ್ರಾಮಾಂತರ ಶಾಸಕರ ವಿರುದ್ಧ ಆಯನೂರು ಮಂಜಣ್ಣ ಹಾಗೂ ಮಾಜಿ ಶಾಸಕರಾದ ಕೆ ಜಿ ಕುಮಾರಸ್ವಾಮಿ ಎದುರಿನಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಕಾರ್ಯಕರ್ತರು”””ಸೋಮಿನಕೊಪ್ಪದಲ್ಲಿ ನರಸಿಂಹಪ್ಪ ರವರ ನೇತೃತ್ವದಲ್ಲಿ ನಡೆದ ಶಿವಾಚಾರ್ಯ ವಿಶ್ವೇಶ್ವರ ಹಾಲಸ್ವಾಮಿ ಯವರ 2ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ನಡೆದ ಘಟನೆ.!!! ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವೇನು..?! ಕಾರ್ಯಕರ್ತರನ್ನು ಸಮಾಧಾನಪಡಿಸಿದ ಆಯನೂರು ಮಂಜಣ್ಣ ಹೇಳಿದ್ದೇನು..?! ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ ..?!

ಶಿವಮೊಗ್ಗ : ನಿನ್ನೆ ಸೋಮಿನಕೊಪ್ಪದಲ್ಲಿ ನಡೆದ ನರಸಿಂಹಪ್ಪ ರವರ ನೇತೃತ್ವದಲ್ಲಿ ನಡೆದ ಶಿವಾಚಾರ್ಯ ವಿಶ್ವೇಶ್ವರ ಹಾಲಸ್ವಾಮಿ ಯವರ 2ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ , ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರಾದ ಕೆಜಿ ಕುಮಾರಸ್ವಾಮಿ ಅವರು ಆಗಮಿಸಿದ್ದರು.


ರಾಜ್ಯ ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ ಮಹೇಂದ್ರಣ್ಣ ಸೋಮಿನಕೊಪ್ಪ ನರಸಿಂಹಪ್ಪ, ಬಿ ಟಿ ಈಶ್ವರಪ್ಪ, ಹರಮಘಟ್ಟ ಪ್ರಕಾಶ್,
ರಾಮರಾವ್ ಕೋರೆ,ಹೊಳಲೂರು ದೇವರಾಜ್,ಕೊಮ್ಮನಾಳ್ ಪಾಟೀಲ್
ಹಾರನಹಳ್ಳಿ ಮಂಜುನಾಥ್
ಚಂದ್ರಪ್ಪ ಉಪ್ಪಾರ್, ಕಸಟ್ಟಿ ಸುರೇಶ, ಮಂಜುನಾಥ್, hr ಹಾಲೇಶಪ್ಪ, ಪರುಶುರಾಮ್, ಸೀನಪ್ಪ, ಪ್ರಭು ಮಡಿವಾಳ, ರಾಜಕುಮಾರ್,

ಯೋಗೇದ್ರಚಾರ ದೊಡ್ಡಮತಲಿ, ಭೋಜರಾಜ್, ಸಿರಿಗೆರೆ ಕೇಣ ಜಯರಾಮ್ ನಾಯ್ಕ್ ಕೇಶವನಾಯಕ್, ಮಂಜಪ್ಪ ಕುಂಸಿ, ಗಂಗಯ್ಯ, ಪರಮೇಶಪ್ಪ, ಚಿದು ಮಲ್ಲಾಪುರ, ರಾಮನಗರ ಹನುಮಂತಪ್ಪ, ಶಾಂತ ಮುದ್ದಿಕೊಪ್ಪ,
ಕೊಮ್ಮನಾಳು ಹಾಲೇಶ್, ಸುತ್ತೆಕೋಟೆ ರವಿ,
ಪ್ರಭು ಹಾಗೂ ಇನ್ನಿತರೆ ಹಲವಾರು ಹಳೆಯ ಕಾರ್ಯಕರ್ತರು ಶಿವಮೊಗ್ಗ ಗ್ರಾಮಾಂತರದಿಂದ ಉಪಸ್ಥಿತರಿದ್ದರು.

ಸಭೆಯನ್ನ ಉದ್ದೇಶಿಸಿ ಹಲವಾರು ಪ್ರಮುಖರು ಗ್ರಾಮಾಂತರದ ಬಿಜೆಪಿ ಯ ಈಗಿನ ಪರಿಸ್ಥಿತಿ ಯ ಬಗ್ಗೆ, ಹಾಗೂ ಈಗಿನ ಶಾಸಕರು ಹಳೆಯ ಕಾರ್ಯಕರ್ತರನ್ನ ಕಡೆಗಣಿಸಿದರ ಬಗ್ಗೆ,ಹಾಗೂ ಶಾಸಕರ ನಾಮಿನೇಟ್ ವಿಚಾರದ ಬಗ್ಗೆ, ಬೇರುಗಳನ್ನ ಬಿಟ್ಟು ಚಿಗರನ್ನ ಇಡಿದಿದ್ದಾರೆ, ಈಗೆ ನಾನಾ ರೀತಿಯಲ್ಲಿ ಶಾಸಕರ ಮೇಲೆ ಅಸಮಾಧಾನದ ಮಾತುಗಳನ್ನು ಬಿಂಬಿಸಿದರು, ಪಕ್ಷದ ಜವಾಬ್ದಾರಿ ವಿಚಾರದಲ್ಲೂ ಅಸಮಾಧಾನ ವ್ಯಕ್ತಪಡಿಸಿದರು ದೇವರಾಜ್ ಅಧ್ಯಕ್ಷರ ವಿಚಾರದಲ್ಲಿ ಶಾಸಕರು ವಿರೋಧಿಸಿದರು ಎಂದು ಹೇಳಿದರು ಹೀಗೆ ಹಲವಾರು ವಿಚಾರಗಳನ್ನು ಪ್ರಮುಖ ಕಾರ್ಯಕರ್ತರು ಮಂಜಣ್ಣ ಅವರ ಗಮನಕ್ಕೆ ತಂದರು ಮುಂದಿನ ಶಿವಮೊಗ್ಗ ಗ್ರಾಮಾಂತರದ ಉಸ್ತುವಾರಿ ಯನ್ನ ಆಯನೂರು ಮಂಜಣ್ಣ ಅವರು ಹೆಗಲಿಗೆ ವಹಿಸಿದರೆ ಮಾತ್ರ ನಾವು ಬಿಜೆಪಿ ಯಲ್ಲಿ ಇರ್ತೀವಿ ಇಲ್ಲಾ ಅಂದ್ರೆ ನಮ್ಮ ಪಾಡಿಗೆ ಬಿಟ್ಬಿಡಿ ಎಂದರು .

ಇದಕ್ಕೆಲ್ಲ ಉತ್ತರಿಸಿದ ಆಯನೂರು ಮಂಜುನಾಥ ಅವರು ಎಲ್ಲಾ ನೊಂದ ಪ್ರಮುಖ ಕಾರ್ಯಕರ್ತರಿಗೆ ಸಮಾಧಾನದ ಮಾತುಗಳನ್ನ ಹೇಳಿ ಶಿವಮೊಗ್ಗ ಗ್ರಾಮಾಂತರ ನನ್ನ ಸ್ಥಳೀಯ ಕ್ಷೇತ್ರ ಬೇರೆಯವರು ಹೊರಗಿನಿಂದ ಬಂದವರು ಇಲ್ಲಿ ಬಿಜೆಪಿ ಹಿನ್ನಡೆ ಆಗುವುದಕ್ಕೆ ಬಿಡೋದಿಲ್ಲ ಮುಂದಿನ ದಿನಗಳಲ್ಲಿ ಇಡೀ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಭೇಟಿ ಮಾಡಿ ಪಕ್ಷದ ಈ ತರಹದ ಗೊಂದಲವನ್ನ ಬಗೆಹರಿಸುತ್ತೆನೆ ಎಂದರು.

ಬಿಜೆಪಿ ಕಾರ್ಯಕರ್ತರಿಗೆ 3ದಿವಸ ತಿರಂಗ ಧ್ವಜವನ್ನು ಆಗಸ್ಟ್ 14 ಕ್ಕೆ ಎಲ್ಲರ ಮನೆಯ ಮೇಲೆ ಹಾರಿಸಿ ಎಂದು ಹಾಗೂ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿ ಎಂದು ಹಿತವಚನ ಹೇಳಿದರು ನನ್ನ ಜೊತೆ ಕೈ ಜೋಡಿಸಿದ್ದೀರಿ ಧನ್ಯವಾದಗಳು ಎಂದು ತಿಳಿಸಿದರು…

ರಘುರಾಜ್ ಹೆಚ್ ‌‌ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --! ದಾಖಲಾತಿಗಳಿಲ್ಲದ NOT FOR SALE ಔಷಧಿ ಮೆಗ್ಗಾನ್ ದಾಸ್ತಾನಿನಲ್ಲಿ ಪತ್ತೆ..! ಮುಂದುವರಿದ ಲೋಕಾಯುಕ್ತ ತನಿಖೆ..! ಕುವೆಂಪು ನಗರ ಬಡಾವಣೆಗೆ ಶಾಸಕ ಚೆನ್ನಬಸಪ್ಪ ಭೇಟಿ..! ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ..! ಸರ್ಕಾರದ ವಿರುದ್ಧ ತಿರುಗಿಬಿದ್ದ ಮದ್ಯ ಮಾರಾಟಗಾರರು ಇಂದಿನಿಂದ ಪರ್ಮಿಟ್ ಚಳುವಳಿ..! 22ಕ್ಕೆ ಮದ್ಯ ಮಾರಾಟ ಬಂದ್...!...