
ಅರಣ್ಯ ಇಲಾಖೆ ಧೋರಣೆ ಖಂಡಿಸಿ ಬಿಳಿಗಾರು ಕಾರ್ಗಲ್ ಪಾದಯಾತ್ರೆಗೆ ಕರೂರು ಹೋಬಳಿಯ ಪ್ರತಿ ಪಂಚಾಯತಿಯಿಂದ ನೂರಾರು ರೈತರು ಪಾಲ್ಗೊಳ್ಳುವ ಮೂಲಕ ಬೆಂಬಲ ನೀಡುವುದಾಗಿ ತಾ ಪಂ ಮಾಜಿ ಅಧ್ಯಕ್ಷ ಎಸ್ ಎಲ್ ನಾಗರಾಜ್ ಜೈನ್ ತಿಳಿಸಿದರು.
ಬ್ಯಾಕೋಡಿನಲ್ಲಿ ಸೋಮವಾರ ನಡೆದ ಪಾದಯಾತ್ರೆ ಪೂರ್ವಬಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು…
ಕರೂರು ಮತ್ತು ಬಾರಂಗಿ ಹೋಬಳಿಗಳು ಶರಾವತಿ ಸಂತ್ರಸ್ತ ಅವಳಿ ಹೋಬಳಿಗಳಾಗಿದ್ದು ಅರಣ್ಯ ಇಲಾಖೆಯು ನೂರಾರು ರೈತರ ಮೇಲೆ ಕೇಸ್ ದಾಖಲು ಮಾಡಿದೆ. ಇದರಿಂದ ರೈತರು ಬೆಂಗಳೂರು ಅಲೆಯುತ್ತಾ ಇದ್ದು ಪಾದಯಾತ್ರೆ ಮೂಲಕ ನಮ್ಮ ವಿರೋಧ ದಾಖಲು ಮಾಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ್ ಸಸಿಗೊಳ್ಳಿ ಮಾತನಾಡಿ ಅರಣ್ಯ ಇಲಾಖೆ ನೌಕರರು ರೈತರ ವಿಚಾರದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಯುವಕ ಸಂಘಟನೆಯ ಪ್ರಮುಖರಾದ ರವಿ ಅಳುರು ಮಾತನಾಡಿ ಉರುಳಗಲ್ಲು ಘಟನೆಯಲ್ಲಿ ಮುಳುಗಡೆ ಸಂತ್ರಸ್ತರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಈ ವಿಚಾರದಲ್ಲಿ ಇಡಿ ಕರೂರು ಹೋಬಳಿ ಜನರು ಒಕ್ಕೊರಲಿನಿಂದ ಖಂಡಿಸಿ ಪಾದಯಾತ್ರೆ ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಿತವಾಗೀ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಸಾಗರದಿಂದ ಆಗಮಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ ಪಾದಯಾತ್ರೆ ಯನ್ನ ಉದ್ಘಾಟಿಸಲು ಹಿರಿಯ ಸಾಹಿತಿ ನಾ ಡಿಸೋಜ ಅವರನ್ನು ಆಹ್ವಾನಿಸಲಾಗುವುದು. ಕಾಗೋಡು ತಿಮ್ಮಪ್ಪನವರು ಸೇರಿ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದು ರೈತ ಸಂಘಟನೆಗಳು, ದಲಿತ, ಮಹಿಳಾ ಸಂಘಟನೆಗಳ ಪ್ರಮುಖರು ಬೆಂಬಲ ಸೂಚಿಸಿದ್ದಾರೆ. ಜನಾಂದೊಲನವಾಗಿ ಇಡಿ ಪಾದಯಾತ್ರೆ ನಡೆಯಲಿದೆ ಎಂದರು.
ಸಭೆಯಲ್ಲಿ ಪ್ರಮುಖರಾದ ಸತ್ಯನಾರಾಯಣ ಜಿ ಟಿ, ಗಣೇಶ್ ತುಮರಿ, ಮಾಜಿ ಅಧ್ಯಕ್ಷ ಮಂಜಪ್ಪ, ವಿಜಯ ಅಡಗಳಲೆ, ವಿಜಯ್ ಬರಗಲು, ದೇವರಾಜ್, ಹಾಬಿಗೆ ರಾಮಚಂದ್ರ, ಆನಂದ್ ಬಾಳ, ಸುರೇಶ್ ಮಲುರು, ಅರುಣ ಹಕ್ರೆ, ಪೀ ಕೆ ನಾರಾಯಣ್ ಓಂಕಾರ್ ಜೈನ ಇತ್ಯಾದಿ ಹಾಜರಿದ್ದರು…
ರಘುರಾಜ್ ಹೆಚ್.ಕೆ…9449553305…