Tuesday, June 10, 2025
Google search engine
Homeರಾಜ್ಯಅರಣ್ಯ ಇಲಾಖೆ ಧೋರಣೆ ಖಂಡಿಸಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ರೈತರು..!!! ಯಶಸ್ವಿಯಾಗಿ ನಡೆದ ಪಾದಯಾತ್ರೆಯ ಪೂರ್ವಭಾವಿ ಸಭೆ..!!

ಅರಣ್ಯ ಇಲಾಖೆ ಧೋರಣೆ ಖಂಡಿಸಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ರೈತರು..!!! ಯಶಸ್ವಿಯಾಗಿ ನಡೆದ ಪಾದಯಾತ್ರೆಯ ಪೂರ್ವಭಾವಿ ಸಭೆ..!!

ಅರಣ್ಯ ಇಲಾಖೆ ಧೋರಣೆ ಖಂಡಿಸಿ ಬಿಳಿಗಾರು ಕಾರ್ಗಲ್ ಪಾದಯಾತ್ರೆಗೆ ಕರೂರು ಹೋಬಳಿಯ ಪ್ರತಿ ಪಂಚಾಯತಿಯಿಂದ ನೂರಾರು ರೈತರು ಪಾಲ್ಗೊಳ್ಳುವ ಮೂಲಕ ಬೆಂಬಲ ನೀಡುವುದಾಗಿ ತಾ ಪಂ ಮಾಜಿ ಅಧ್ಯಕ್ಷ ಎಸ್ ಎಲ್ ನಾಗರಾಜ್ ಜೈನ್ ತಿಳಿಸಿದರು.

ಬ್ಯಾಕೋಡಿನಲ್ಲಿ ಸೋಮವಾರ ನಡೆದ ಪಾದಯಾತ್ರೆ ಪೂರ್ವಬಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು…

ಕರೂರು ಮತ್ತು ಬಾರಂಗಿ ಹೋಬಳಿಗಳು ಶರಾವತಿ ಸಂತ್ರಸ್ತ ಅವಳಿ ಹೋಬಳಿಗಳಾಗಿದ್ದು ಅರಣ್ಯ ಇಲಾಖೆಯು ನೂರಾರು ರೈತರ ಮೇಲೆ ಕೇಸ್ ದಾಖಲು ಮಾಡಿದೆ. ಇದರಿಂದ ರೈತರು ಬೆಂಗಳೂರು ಅಲೆಯುತ್ತಾ ಇದ್ದು ಪಾದಯಾತ್ರೆ ಮೂಲಕ ನಮ್ಮ ವಿರೋಧ ದಾಖಲು ಮಾಡುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ್ ಸಸಿಗೊಳ್ಳಿ ಮಾತನಾಡಿ ಅರಣ್ಯ ಇಲಾಖೆ ನೌಕರರು ರೈತರ ವಿಚಾರದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಯುವಕ ಸಂಘಟನೆಯ ಪ್ರಮುಖರಾದ ರವಿ ಅಳುರು ಮಾತನಾಡಿ ಉರುಳಗಲ್ಲು ಘಟನೆಯಲ್ಲಿ ಮುಳುಗಡೆ ಸಂತ್ರಸ್ತರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಈ ವಿಚಾರದಲ್ಲಿ ಇಡಿ ಕರೂರು ಹೋಬಳಿ ಜನರು ಒಕ್ಕೊರಲಿನಿಂದ ಖಂಡಿಸಿ ಪಾದಯಾತ್ರೆ ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಿತವಾಗೀ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸಾಗರದಿಂದ ಆಗಮಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ ಪಾದಯಾತ್ರೆ ಯನ್ನ ಉದ್ಘಾಟಿಸಲು ಹಿರಿಯ ಸಾಹಿತಿ ನಾ ಡಿಸೋಜ ಅವರನ್ನು ಆಹ್ವಾನಿಸಲಾಗುವುದು. ಕಾಗೋಡು ತಿಮ್ಮಪ್ಪನವರು ಸೇರಿ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದು ರೈತ ಸಂಘಟನೆಗಳು, ದಲಿತ, ಮಹಿಳಾ ಸಂಘಟನೆಗಳ ಪ್ರಮುಖರು ಬೆಂಬಲ ಸೂಚಿಸಿದ್ದಾರೆ. ಜನಾಂದೊಲನವಾಗಿ ಇಡಿ ಪಾದಯಾತ್ರೆ ನಡೆಯಲಿದೆ ಎಂದರು.

ಸಭೆಯಲ್ಲಿ ಪ್ರಮುಖರಾದ ಸತ್ಯನಾರಾಯಣ ಜಿ ಟಿ, ಗಣೇಶ್ ತುಮರಿ, ಮಾಜಿ ಅಧ್ಯಕ್ಷ ಮಂಜಪ್ಪ, ವಿಜಯ ಅಡಗಳಲೆ, ವಿಜಯ್ ಬರಗಲು, ದೇವರಾಜ್, ಹಾಬಿಗೆ ರಾಮಚಂದ್ರ, ಆನಂದ್ ಬಾಳ, ಸುರೇಶ್ ಮಲುರು, ಅರುಣ ಹಕ್ರೆ, ಪೀ ಕೆ ನಾರಾಯಣ್ ಓಂಕಾರ್ ಜೈನ ಇತ್ಯಾದಿ ಹಾಜರಿದ್ದರು

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --! ದಾಖಲಾತಿಗಳಿಲ್ಲದ NOT FOR SALE ಔಷಧಿ ಮೆಗ್ಗಾನ್ ದಾಸ್ತಾನಿನಲ್ಲಿ ಪತ್ತೆ..! ಮುಂದುವರಿದ ಲೋಕಾಯುಕ್ತ ತನಿಖೆ..! ಕುವೆಂಪು ನಗರ ಬಡಾವಣೆಗೆ ಶಾಸಕ ಚೆನ್ನಬಸಪ್ಪ ಭೇಟಿ..! ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ..! ಸರ್ಕಾರದ ವಿರುದ್ಧ ತಿರುಗಿಬಿದ್ದ ಮದ್ಯ ಮಾರಾಟಗಾರರು ಇಂದಿನಿಂದ ಪರ್ಮಿಟ್ ಚಳುವಳಿ..! 22ಕ್ಕೆ ಮದ್ಯ ಮಾರಾಟ ಬಂದ್...!...