
ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 2011 ರಿಂದ ನವೆಂಬರ್ 2021 ವರೆಗೆ ಕಾರ್ಯನಿರ್ವಹಿಸಿರುವ ಎ.ಹಾಲೇಶಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಅಂಗೀಕಾರವಾಗಿರುತ್ತದೆ.ಈ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾಗಿರುವ ಎಂ.ಹೆಚ್.ಸತ್ಯನಾರಾಯಣರವರಿಗೆ ಎ.ಹಾಲೇಶಪ್ಪನವರು ಸಂಘದ ದಾಖಲೆಗಳನ್ನು ಇಂದು ಹಸ್ತಾಂತರ ಮಾಡಿದರು.ನಿರ್ಧೇಶಕರಾದ ಜಿ.ಶೇಖರಪ್ಪ,ಕೆ.ಆರ್.ಮೇಘರಾಜ ಮತ್ತು ವಾರ್ಡನ್ ಹನುಮೇಶ ಹಾಜರಿದ್ದರು.2011 ರಿಂದ ನವೆಂಬರ್ 2021 ವರೆಗೆ ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ಯಶಸ್ವೀಯಾಗಿ ನಿರ್ವಹಿಸಲು ಸಹಕರಿಸಿದ ಸಂಘದ ಪದಾಧಿಕಾರಿಗಳಿಗೂ ಮತ್ತು ಜಿಲ್ಲೆಯ ಸಮಾಜ ಬಾಂಧವರಿಗೆ ಶ್ರೀ ಹಾಲೇಶಪ್ಪ ಅಧ್ಯಕ್ಷರು ಗಂಗಾಮತ ಸಮಾಜದ ಸಂಘಕ್ಕೆ ರಾಜೀನಾಮೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಹಾಲೇಶಪ್ಪನವರು ಗಂಗಾಮತ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದೂ ಹೀಗೇ… ಗಂಗಾಮತ ಜನಾಂಗವು ಸಮಾಜದಲ್ಲಿ ಅತೀ ಹಿಂದುಳಿದ ಜನಾಂಗವಾಗಿದ್ದೂ, ಸಮಾಜದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದೂ, ನಾನು ಅಧ್ಯಕ್ಷನಾದ ಸಮಯದಲ್ಲಿ ಸಾಕಷ್ಟು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ ನನಗಿದೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೂ, ಕೊನೆ ಉಸಿರು ಇರುವ ತನಕ ನನ್ನ ಸಮಾಜದ ಅಭಿವೃದ್ಧಿಯತ್ತ ಶ್ರಮಿಸುವುದಾಗಿ ತಿಳಿಸಿದರು. ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಗಂಗಾಮತ ಸಮಾಜದ ಬಾಂಧವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ..9449553305…