
ಶಿವಮೊಗ್ಗ : ನಗರದ ಸಾಗರ ರಸ್ತೆಯ ಗಂಧರ್ವ ಬಾರ್ ಅಂಡ್ ರೆಸ್ಟೋರೆಂಟ್ ಹಿಂಭಾಗದಲ್ಲಿ ಹೊಸ ಮನೆಯ ನಿವಾಸಿ ಕಿರಣ ಆಲಿಯಾಸ್ ಹುಚ್ಚಿ ಕಿರಣ ಎಂಬ ರೌಡಿಶೀಟರ್ ನನ್ನು ಹೂಸಮನೆಯ ನಿವಾಸಿ ಪ್ರಜ್ವಲ್ ಮತ್ತು ಗಾಡಿಕೊಪ್ಪ ನಿವಾಸಿ ಕಾರ್ತಿಕ್ ಎಂಬ ಕಾಲೇಜ್ ವಿದ್ಯಾರ್ಥಿಗಳು ನಿನ್ನೆ ತಡ ರಾತ್ರಿ, ಮುಂಜಾನೆ ಸುಮಾರು 3:00 ಗಂಟೆಗೆ ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ…
ಪಾರ್ಟಿ ದುಡ್ಡಿಗೋಸ್ಕರ ನಡಿತಾ ಹುಚ್ಚಿ ಕಿರಣನ ಮರ್ಡರ್ :
ಪಾರ್ಟಿಗೋಸ್ಕರ ಪದೇ ಪದೇ ಕಾಡುತ್ತಿದ್ದ ಹುಚ್ಚಿ ಕಿರಣ, ಹಾಗೂ 2,000 ದುಡ್ಡು ಕೇಳಿದ್ದ ಕೊಡದಿದ್ದರೆ ತನ್ನ ಹತ್ತಿರ ಇರುವ ಡ್ರ್ಯಾಗನ್ ನಿಂದ ಚುಚ್ಚುತ್ತೇನೆ ಎಂದು ಎದುರಿಸುತ್ತಿದ್ದ ಇದರಿಂದ ಕುಪಿತಗೊಂಡ ಹುಡುಗರು ಇವನ ಕಾಟ ತಾಳಲಾರದೆ ಅದೇ ಡ್ರಾಗನ್ ನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ…
ರೌಡಿಶೀಟರ್ ಹೊಸಮನೆಯ ಕಿರಣ್ :
ಹೊಸ ಮನೆಯ ನಿವಾಸಿಯಾದ ಕಿರಣ್ ಅಲಿಯಾಸ್ ಹುಚ್ಚಿಕಿರಣ್ ರೌಡಿಶೀಟರ್ ಆಗಿದ್ದು ಈತನ ಮೇಲೆ ಹಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ…
ಮೀಸೆ ಚಿಗುರುದ ಹುಡುಗರಿಂದ ಮರ್ಡರ್ :
ಇನ್ನು ಕಾಲೇಜು ಓದುತ್ತಿರುವ ಯುವಕರಿಂದ ಕಿರಣ್ ಅಲಿಯಾಸ್ ಹುಚ್ಚಿ ಕಿರಣ್ @ ಪುಚ್ಚಿಕಿರಣ್ ನನ್ನು ಕೊಲೆ ಮಾಡಿದ್ದಾರೆ…. ಯುವಕರಿಗೆ ಪೊಲೀಸ್ ಇಲಾಖೆ ಮೇಲೆ ಭಯ ಇಲ್ಲದಾಗಿದೆ.. ಮನೆಯಲ್ಲೂ ಕೂಡ ಯುವಕರಿಗೆ ಭಯ ಕಡಿಮೆಯಾಗಿದೆ…
ಮೇಲ್ನೋಟಕ್ಕೆ ಪಾರ್ಟಿಗೋಸ್ಕರ ದುಡ್ಡಿಗೋಸ್ಕರ ನಡೆದ ಮರ್ಡರ್ ಎಂದು ಕಾಣಿಸುತ್ತಿದ್ದರು ಪೊಲೀಸ್ ಇಲಾಖೆಯ ಸಮಗ್ರ ತನಿಖೆಯಿಂದ ಈ ಕೊಲೆಯ ಹಿಂದಿನ ಉದ್ದೇಶ ಬೇರೆ ಇದೆಯಾ ಎನ್ನುವುದು ಬಹಿರಂಗವಾಗಬೇಕಾಗಿದೆ…
ರಘುರಾಜ್ ಹೆಚ್. ಕೆ …9449553305…