Wednesday, April 30, 2025
Google search engine
Homeರಾಜ್ಯಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಿಂದ ಆಯುಕ್ತರಿಗೆ ಮನವಿ!!

ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಿಂದ ಆಯುಕ್ತರಿಗೆ ಮನವಿ!!

30/7/21 ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಕುರಿತು. ರಾಷ್ಟ್ರೀಯ ನಗರ ಸಂರಕ್ಷಣೆ ಜೀವನೋಪಾಯ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ- 2014 ರ ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ- 2019 ರ ಕುರಿತು.

ಪಟ್ಟಣ ವ್ಯಾಪಾರ ಸಮಿತಿ (ಟಿವಿಸಿ) ಕಾನೂನಾತ್ಮಕವಾಗಿ ರಚನೆಯಾಗಬೇಕು. ಟಿವಿಸಿ ಸಭೆಯ ಮುಖಾಂತರ ನಡವಳಿಕೆಗಳು ಸರಿಯಾಗಿ ರಚನೆಯಾಗಬೇಕು,

ಟಿವಿಸಿ ಸದಸ್ಯರುಗಳಿಗೆ 7 ದಿನ ಮುಂಚಿತವಾಗಿ ನೋಟಿಸನ್ನು ನೀಡಬೇಕು, ಪಟ್ಟಣ ವ್ಯಾಪಾರ ಸಮಿತಿ 100% ರಷ್ಟು ರಚನೆಯಾಗಬೇಕು, ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಟಿವಿಸಿಯಲ್ಲಿ ಆಯ್ಕೆಯಾದ ಸದಸ್ಯರುಗಳು ಇವರು ಮಾತ್ರ ಭಾಗಿಯಾಗಿರುತ್ತಾರೆ. ಇನ್ನು 60% ರಷ್ಟು ಯಾವುದೇ ಇಲಾಖೆ ವತಿಯಿಂದ ಟಿವಿಸಿ ಸಭೆಯಲ್ಲಿ ಯಾರು ಇದುವರೆಗೆ ಭಾಗಿಯಾಗಿರುವುದಿಲ್ಲ.

ಟಿವಿಸಿ ಮುಖಾಂತರ ಬೀದಿಬದಿ ವ್ಯಾಪಾರಿಗಳಿಗೆ ಸಮೀಕ್ಷೆಯಾಗಬೇಕು. ಟೈಲರಿಂಗ್ ಟೀಚರ್ ಗಣತಿದಾರರು ಬೀದಿ ಬೀದಿ ವ್ಯಾಪಾರಿಗಳ ಹೆಸರಿನಲ್ಲಿ ಬೇರೆಯವರಿಗೆ ಸಮೀಕ್ಷೆ ಮಾಡುತ್ತಿದ್ದಾರೆ. ಹಾಗೂ ಟೈಲರಿಂಗ್ ಟೀಚರ್ ಗಣತಿದಾರರು ಇವರು ಸರಿಯಾಗಿ ಟಿವಿಸಿ ಮುಖಾಂತರ ಸಮೀಕ್ಷೆ ಮಾಡುತ್ತಿಲ್ಲ. ಟಿವಿಸಿ ಮುಖಾಂತರ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ನೀಡಬೇಕು.

ಟಿವಿಸಿ ಮುಖಾಂತರ ಬೀದಿಬದಿ ವ್ಯಾಪಾರಿಗಳಿಗೆ ವೆಂಡ್ಡಿಂಗ್ ಝೊನ್ ಮಾಡಬೇಕು. ಟಿವಿಸಿ ಸದಸ್ಯರುಗಳಿಗೆ ಭತ್ಯೆ ನೀಡಬೇಕು. ಬೀದಿಬದಿ ವ್ಯಾಪಾರಿಗಳನ್ನು ಪೊಲೀಸ್ ಇಲಾಖೆ ವತಿಯಿಂದ ತೆರವುಗೊಳಿಸುತ್ತಾರೆ. ನಮ್ಮ ವಲಯ ಟಿವಿಸಿ ಸಭೆಯಲ್ಲಿ ಇದರ ಬಗ್ಗೆ ಯಾವುದೇ ಚರ್ಚೆಯಾಗಿರುದಿಲ್ಲ. ನಮ್ಮ ವಲಯದ ಯಾವುದೇ ಜಾಗದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವಂತಿಲ್ಲ.

ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ವಾಹನ ಮೋಟರ್ ಪರವಾನಗಿ, ಗುರುತಿಸಿ ಚೀಟಿಯನ್ನು ಪಡೆದಿರುವುದಿಲ್ಲ, ಹಾಗೂ ವಾಹನ ಮೋಟಾರ್ ಗಾಡಿಗಳು ಹಾಗೂ ಧ್ವನಿವರ್ಧಕ ಬಳಸಿಕೊಂಡು ವ್ಯಾಪಾರ ಮಾಡುವಂತಿಲ್ಲ, ಅಂತಹ ವಾಹನ ಮೋಟರ್ ಗಳನ್ನು ರದ್ದು ಪಡಿಸಬೇಕು ಟಿವಿಸಿ ಅಧ್ಯಕ್ಷರು.

ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಸಂಸ್ಥೆಯವರು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಅಧ್ಯಕ್ಷರು ಟಿವಿಸಿ ಮುಖಾಂತರ ನಿರ್ಬಂಧಿಸಬೇಕು. ಕಾನೂನಾತ್ಮಕವಾಗಿ ಬೀದಿಬದಿ ವ್ಯಾಪಾರಿಗಳಿಗೆ ಟಿವಿಸಿ ಮುಖಾಂತರ ಪರಿಹಾರವಾಗಿಬೇಕು.

ಟಿವಿಸಿ ಅಧ್ಯಕ್ಷರುಗಳಿಂದ ಆಯ್ಕೆಯಾದ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳಿಗೆ ಸರಿಯಾದ ರೀತಿಯಲ್ಲಿ ಗೌರವ ದೊರೆಯುತ್ತಿಲ್ಲ.

ಪಟ್ಟಣ ವ್ಯಾಪಾರ ಸಮಿತಿಯ ಅಧ್ಯಕ್ಷರು 100% ರಷ್ಟು ಸಮಿತಿ ರಚನೆ ಮಾಡಬೇಕು. ಪಟ್ಟಣ ವ್ಯಾಪಾರ ಸಮಿತಿಯಲ್ಲಿ 60% ರಷ್ಟು ಎಲ್ಲಾ ಇಲಾಖೆ ವತಿಯಿಂದ ಇರಬೇಕು.ಪಟ್ಟಣ ವ್ಯಾಪಾರ ಸಮಿತಿಯಲ್ಲಿ 40% ರಷ್ಟು ಆಯ್ಕೆಯಾದ ಸದಸ್ಯರಗಳು ಇರಬೇಕು.

ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಆಯುಕ್ತರಾದ ಚಿದಾನಂದ ವಟಾರೆ ರವರಿಗೆ ಮನವಿ ಮಾಡಿದರು.

ಈ ವೇಳೆ ಸವಳಂಗ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು ನಾವು ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವೆವೂ ನಮ್ಮ ಬಳಿ ಬೀದಿ ಬದಿ ಗುರುತಿನ ಚೀಟಿ ಇದೆ, ವೆಂಡಿಂಗ್ ಝೂನ ನಾನ್ ವೆಂಡಿಂಗ್ ಝೂನ ನಿರ್ಮಾಣ ಮಾಡಿ ನಮಗೂ ವೆಂಡಿಂಗ್ ಝೂನ ನಲ್ಲಿ ಅವಕಾಶ ಕಲ್ಪಿಸಬೇಕು ಗುರುತಿಸಿ ಚೀಟಿ ಇಲ್ಲದವರಿಗೆ ಹಾಗೂ ಬೇರೆಯವರಿಗೆ ವೆಂಡಿಂಗ್ ಝೂನ ನಲ್ಲಿ ಅವಕಾಶ ಮಾಡಬೇಡಿ ಎಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಮೂಖಾಂತರ ಆಯುಕ್ತರಿಗೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ನಾರಾಯಣ ಎಂ.ಎಸ್ ವಿನಾಯಕ.
ಶೇಷಯ್ಯ, ಸವಳಂಗ ರಸ್ತೆಯ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ.. ರಘುರಾಜ್ ಹೆಚ್ .ಕೆ….

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...