
ತೀರ್ಥಹಳ್ಳಿ : ತಾಲೂಕಿನ ಗುಡ್ಡೇಕೇರಿ ಹೊಸೂರು ವ್ಯಾಪ್ತಿಗೆ ಒಳಪಡುವ ತಾಲೂಕಿನಲ್ಲಿಯೇ ಉತ್ತಮ ಶಾಲೆ ಎಂದು ಗುರುತಿಸಲ್ಪಟ್ಟಿರುವ , ಉತ್ತಮ ಮುಖ್ಯ ಶಿಕ್ಷಕರು, ಉತ್ತಮ ಶಿಕ್ಷಕ ವೃಂದ, ವ್ಯವಸ್ಥಿತವಾದ ಎಸ್ ಡಿ ಎಂ ಸಿ ಆಡಳಿತ ಮಂಡಳಿ ಹೊಂದಿರುವ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಲುಗಳಿಗೆ ಎರಿಸಿಕೊಂಡಿರುವ ಪ್ರತಿಷ್ಠಿತ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ವಿಚಾರದಲ್ಲಿ ಸತತವಾಗಿ ಮೂರು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಕ್ಸುದ್ ಎಂಬ 27 ವರ್ಷದ ಹೊಸೂರು ಯುವಕನಿಗೆ 20 ವರ್ಷದ ಶಿಕ್ಷೆ ಆಗಿದೆ. ಇನ್ನೊಂದು ಪ್ರಕರಣ ನ್ಯಾಯಾಲಯದಲ್ಲಿದೆ. ಈ ಎರಡು ಪ್ರಕರಣಗಳ ನಂತರ ಮತ್ತೊಂದು ಪ್ರಕರಣ ಬಯಲಿಗೆ ಬಂದಿರುವುದು ಬೇಸರದ ಸಂಗತಿ ಎನ್ನಬಹುದು…..
ಏನಿದು ಘಟನೆ…?!
ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಹೊಸೂರು ನಿವಾಸಿ 25 ವರ್ಷದ ಶಾಬೀತ್ ಎಂಬ ಯುವಕ ಸುಮಾರು ಎರಡು ತಿಂಗಳ ಹಿಂದೆ ಪರಿಚಯವಾಗುತ್ತಾನೆ. ಆ ಪರಿಚಯದ ನಂತರ ಇಬ್ಬರ ನಡುವೆ ಮೊಬೈಲ್ ನಂಬರ್ ಎಕ್ಸ್ಚೇಂಜ್ ನಡೆಯುತ್ತದೆ. ನಂತರ ಶಾಬೀತ್ ನಿರಂತರವಾಗಿ ವಿದ್ಯಾರ್ಥಿನಿಗೆ ಮೊಬೈಲ್ ನಲ್ಲಿ ಚಾಟಿಂಗ್ ಮಾಡಲು ಶುರು ಮಾಡುತ್ತಾನೆ. ಎಳೆ ವಯಸ್ಸಿನ ಯುವತಿ ಆದ್ದರಿಂದ ಆಕೆಯ ಮನಸ್ಸಿನಲ್ಲಿ ಇಲ್ಲ ಸಲ್ಲದ ಆಸೆಗಳನ್ನು ಹುಟ್ಟಿಸಿ ಮೊಬೈಲ್ ನಲ್ಲಿ ಮೆಸೇಜ್ ಕಳಿಸಲು ಶುರು ಮಾಡುತ್ತಾನೆ. ಮೊದಲ ಮೊದಲು ಹಾಯ್, ಬಾಯ್, ಗುಡ್ ಮಾರ್ನಿಂಗ್, ಗುಡ್ ನೈಟ್, ಊಟ ಆಯ್ತಾ? ತಿಂಡಿ ಆಯ್ತಾ? ಎಂದು ಇರುತ್ತಿದ್ದ ಮೆಸೇಜ್ ಗಳು ನಂತರ ಅಶ್ಲೀಲ ಮೆಸೇಜ್ ಗಳಾಗಿ ಪರಿವರ್ತನೆಯಾಗುತ್ತವೆ. ಇದು ಅತಿರೇಕಕ್ಕೆ ಹೋಗುತ್ತಿದೆ ಎಂದು ಎನಿಸಿದಾಗ ಆ ವಿದ್ಯಾರ್ಥಿನಿ ಭಯಪಟ್ಟು ಪೋಷಕರಿಗೆ ಈ ವಿಷಯವನ್ನು ತಿಳಿಸುತ್ತಾಳೆ.
ಭಯಗೊಂಡ ಪೋಷಕರಿಂದ ಪೊಲೀಸ್ ಠಾಣೆಗೆ ದೂರು :
ಆರೋಪಿ ಶಾಬೀತ್ ನಿಂದ ನಿರಂತರವಾಗಿ ಅಶ್ಲೀಲ ಮೆಸೇಜ್ ಗಳು ಮಗಳಿಗೆ ಬರಲು ಶುರುವಾದಾಗ ಭಯಗೊಂಡ ಆಕೆಯ ಪೋಷಕರು ಹತ್ತಿರದ ಆಗುಂಬೆ ಠಾಣೆಗೆ ದೂರು ನೀಡುತ್ತಾರೆ.
ದೂರಿನ ಮೇರೆಗೆ ಕಾರ್ಯಾಚರಣೆಗಳಿಂದ ಆಗುಂಬೆಯ ದಕ್ಷ ಪೊಲೀಸ್ ಅಧಿಕಾರಿ ಶಿವಕುಮಾರ್:
ಪೋಷಕರು ನೀಡಿದ ದೂರಿನ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್, ಡಿ ವೈ ಎಸ್ ಪಿ ಶಾಂತವೀರ ಅವರ ಮಾರ್ಗದರ್ಶನದಲ್ಲಿ ದಕ್ಷ ಅಧಿಕಾರಿ ಶಿವಕುಮಾರ್ ಬಂಧನಕ್ಕೆ ಸಜ್ಜಾದರು. ಯಾವಾಗ ಯುವತಿ ಹಾಗೂ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಸ್ಕೇಪ್ ಆದ ಆರೋಪಿ ಶಾಬೀತ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಶುರು ಮಾಡಿದ. ಆದರೆ ಇಂಥ ಅದೆಷ್ಟೋ ಕಿಲಾಡಿಗಳನ್ನು ನೋಡಿದ ಶಿವಕುಮಾರ್ ಮತ್ತು ಅವರ ತಂಡ ಪ್ರಯತ್ನಪಟ್ಟು ಕೊನೆಗೂ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.
ಬಂಧಿಸಿ ಪೋಕ್ಸೋ ಕಾಯ್ದೆ ಅಡಿ ಜೈಲಿಗೆ ಕಳುಹಿಸಲಾಗಿದೆ :
ಆರೋಪಿಯನ್ನು ಬಂಧಿಸಿದ ಪೊಲೀಸರು ಅಶ್ಲೀಲ ಚಾಟ್ ಗಳನ್ನು ಮಾಡುವುದರ ಮುಖಾಂತರ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಎನ್ನುವ ಆರೋಪದ ಮೇರಿಗೆ ಅಪ್ರಾಪ್ತ ವಯಸ್ಸಲ್ಲಿದ್ದರಿಂದ ಆತನಿಗೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ…
ಇನ್ನೊಂದು ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು ಇದು ಎಚ್ಚರಿಕೆಯ ಗಂಟೆ ಆಗಬೇಕು :
ಹೊಸೂರು ಗುಡ್ಡೆಕೇರಿ ಪ್ರೌಢಶಾಲೆಗೆ ತನ್ನದೇ ಆದ ಹೆಸರಿದೆ ಇಲ್ಲಿನ ಮುಖ್ಯ ಶಿಕ್ಷಕರ ,ಎಸ್ ಡಿ ಎಂ ಸಿ ಅಧ್ಯಕ್ಷರ , ಸದಸ್ಯರ ಪೋಷಕರ ಸಾರ್ವಜನಿಕರ, ಸ್ಥಳೀಯರ, ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದ ರೀತಿಯಲ್ಲಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳು ಸಹ ಆಟದಲ್ಲಿ ,ಓದಿನಲ್ಲಿ ಯಾರಿಗೂ ಕಮ್ಮಿ ಇಲ್ಲದ ರೀತಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದುಕೊಂಡು ಹೋಗಬೇಕು ಶಾಲೆಯ ವಾತಾವರಣ ಹೀಗೆ ಚೆನ್ನಾಗಿರಬೇಕು ಎಂದರೆ ಇಂತಹ ಘಟನೆಗಳು ಮರುಕಳಿಸಬಾರದು ಅನವಶ್ಯಕ ವ್ಯಕ್ತಿಗಳನ್ನು ಶಾಲೆಯ ವಾತಾವರಣ ದೊಳಗೆ ಬಿಟ್ಟುಕೊಳ್ಳದಿರುವುದು ಒಳಿತು … ಹಾಗೆಯೇ ವಿದ್ಯಾರ್ಥಿನಿಯರು ಕೂಡ ಇಂತಹ ಕಾಮುಕರ ಬಲೆಗೆ ಬೀಳಬಾರದು ಒಂದು ವೇಳೆ ಆತರದ ಪ್ರಚೋದನೆ ಕಂಡು ಬಂದರೆ ಕೂಡಲೇ ಪೋಷಕರಿಗೆ ಶಾಲೆಯ ಮುಖ್ಯಸ್ಥರಿಗೆ ತಿಳಿಸಬೇಕು…
ಸಮಾಜದಲ್ಲಿ ಸಾಮರಸ್ಯ ಮೂಡಲು ಧಾರ್ಮಿಕ ಮುಖಂಡರು ಇಂತಹ ಕಿಡಿಗೇಡಿಗಳಿಗೆ ಬುದ್ಧಿ ಹೇಳಬೇಕು :
ಇತ್ತೀಚಿಗೆ ಲವ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣರಾಗುವ ಕೆಲವು ಕಿಡಿಗೇಡಿಗಳಿಂದ ಕಾಮುಕರಿಂದ ಇಡೀ ಸಮಾಜವೇ ಹಾಳಾಗುತ್ತಿದೆ. ಕೋಮು ಸಂಘರ್ಷ ಹೆಚ್ಚಾಗಲು ಕಾರಣವಾಗುತ್ತಿದೆ. ಧಾರ್ಮಿಕ ಮುಖಂಡರುಗಳು ಇಂತಹ ಕಿಡಿಗೇಡಿಗಳಿಗೆ ಕಾಮುಕರಿಗೆ ಬುದ್ಧಿ ಹೇಳಬೇಕು. ಈ ತರಹದ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಲು ಸಹಕಾರ ನೀಡಬೇಕು ಎನ್ನುವುದು ಪತ್ರಿಕೆಯ ಆಶಯ…
ರಘುರಾಜ್ ಹೆಚ್.ಕೆ…9449553305….