

ದಿವಂಗತ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ …!!!
ಶಿವಮೊಗ್ಗ : ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆ ಅಂದರೆ ಭಾನುವಾರ 10:30 ಕ್ಕೆ ಸರಿಯಾಗಿ A.Z .MARTIAL ARTS ACADEMY ವತಿಯಿಂದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಆಯೋಜನೆ..
ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳ ಆಗಮನ :
ದೇಶದ ನಾನಾ ಭಾಗಗಳಿಂದ ಕರಾಟೆಯ ಕ್ರೀಡಾಪಟುಗಳು ಆಗಮಿಸುತ್ತಿದ್ದು. ಅವರಿಗೆ ಎಲ್ಲಾ ರೀತಿಯ ಊಟದ, ವಸತಿಯ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ.
ಕಾರ್ಯಕ್ರಮಕ್ಕೆ ಗಣ್ಯರ ಆಗಮನ :
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಶಾಸಕರಾದ ಕೆ ಎಸ್ ಈಶ್ವರಪ್ಪನವರು ಮಾಡಲಿದ್ದು.ಅಧ್ಯಕ್ಷತೆಯನ್ನು ಡಿಎಸ್ ಅರುಣ್ ವಿಧಾನಪರಿಷತ್ ಸದಸ್ಯರು ವಹಿಸಲಿದ್ದು. ಗೌರವ ಅಧ್ಯಕ್ಷತೆಯನ್ನು ಶ್ರೀಯುತ ಎಂ ಪಿ ರೇಣುಕಾಚಾರ್ಯ ಹೊನ್ನಾಳಿ ನ್ಯಾಮತಿ ಕ್ಷೇತ್ರದ ಶಾಸಕರು ವಹಿಸಲಿದ್ದು. ಉಳಿದಂತೆ ಶಾಸಕರಾದ ಅಶೋಕ್ ನಾಯ್ಕ್, ರುದ್ರೇಗೌಡರು, ಆಗಮಿಸಲಿದ್ದು. ಕರ್ನಾಟಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿಯವರು, ಮಹಾಪೌರರಾದ ಸುನಿತಾ ಅಣ್ಣಪ್ಪನವರು, ಸೂಡ ಅಧ್ಯಕ್ಷರಾದ ನಾಗರಾಜ್ ಅವರು ,ಮಾಜಿ ಸೂಡ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಅವರು, ಇಕ್ಬಾಲ್ ಅಬೀಬ್ ಅವರು, ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ಅವರು. ಸರ್ಜಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಧನಂಜಯ್ ಸರ್ಜಿ ಅವರು, ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ನಾಗರಾಜ್ ಅವರು, ರೈತ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ್ ಅವರು, ರಾಜ್ಯಾಧ್ಯಕ್ಷರು ಕಿಸಾನ್ ಜಾಗೃತಿ ವಿಕಾಸ ಸಂಘದ ಡಾ. ರಫೀಕ್ ಅವರು, ರಾಷ್ಟ್ರೀಯ ಅಧ್ಯಕ್ಷರು ಭಾರತೀಯ ಮಾನವ ಹಕ್ಕುಗಳ ಮಂಡಳಿ ವೆಂಕಟಮನಿಯವರು, ರಾಷ್ಟ್ರೀಯ ಕಾರ್ಯದರ್ಶಿ ಭಾರತೀಯ ಮಾನವ ಹಕ್ಕುಗಳ ಮಂಡಳಿ ಪರಶುರಾಮ್ ಅವರು, ಕೆಎಚ್ ಗ್ರೂಪ್ ಸಿರಸಿ ವ್ಯವಸ್ಥಾಪಕರು ಅಬ್ದುಲ್ ಕಲೀ ಕರಿಮ್ ಅವರು ,ಸಂಸ್ಥಾಪಕರು ಶಿವಮೊಗ್ಗ ಫೀಸ್ ಆರ್ಗನೈಜೇಷನ್ ರಿಯಾಜ್ ಅಹ್ಮದ್ ಅವರು, ಮಹಿಳಾ ಅಧ್ಯಕ್ಷರು ಭಾರತೀಯ ಮಹಿಳಾ ಹಕ್ಕುಗಳ ಮಂಡಳಿ ಸಂಗೀತ ಪ್ರಿಯ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮಹಮ್ಮದ್ ಅವರು ಮಹಾನಗರ ಪಾಲಿಕೆಯ ಸದಸ್ಯರಾದ ವಿಶ್ವಾಸ್ ಅವರು, ಆರತಿ ಪ್ರಕಾಶ್ ಅವರು, ಮೀನಾ ಗೋವಿಂದರಾಜ್ ಅವರು, ಹರಿಕೃಷ್ಣ ಅಧ್ಯಕ್ಷರು ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ, ಮಾಜಿ ನಗರಸಭಾ ಅಧ್ಯಕ್ಷರು ಶಂಕರ್ ಅವರು, ನಾಗರಾಜ್ ಕಂಕಾರಿ ಅವರು, ಸದಸ್ಯರು ಮಾಜಿ ಮಹಾಪೌರರು ಮಹಾನಗರ ಪಾಲಿಕೆ .ಶ್ರೀಯುತ ರೇಖಾ ರಂಗನಾಥ್ ವಿರೋಧ ಪಕ್ಷದ ನಾಯಕರು ಮಹಾನಗರ ಪಾಲಿಕೆ. ಜಿ ವಿರೂಪಾಕ್ಷಪ್ಪ ನಿರ್ದೇಶಕರು ಮಾಮ್ ಕೋಸ್ ಶಿವಮೊಗ್ಗ . ಬಳ್ಳಕೆರೆ ಸಂತೋಷ್ಅಧ್ಯಕ್ಷರು ನರೇಂದ್ರ ಮೋದಿ ವಿಚಾರ ಮಂಚ್. ಇವರುಗಳು ಆಗಮಿಸಲಿದ್ದು ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವ ಮಣಿ ಅವರು ಜಿಲ್ಲಾ ರಕ್ಷಣಾಧಿಕಾರಿಯಾದ ಬಿಎಂ ಲಕ್ಷ್ಮೀಪ್ರಸಾದ್ ಅವರು ೆಚ್ಚುವರಿ ಜಿಲ್ಲಾಧಿಕಾರಿಗಳಾದ ನಾಗೇಂದ್ರ ಹೊನ್ನಾಳಿಯವರು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿಗಳಾದ ಎನ್ಡಿ ಪ್ರಕಾಶ್ ಅವರು, ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ನಾಗರಾಜ ಅವರು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಪರಮೇಶ್ವರಪ್ಪನವರು, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು, ಸಹಾಯಕ ನಿರ್ದೇಶಕರು ಮಂಜುನಾಥ್ ಅವರು ,ಉಲ್ಲಾಸ್ ಕೆಟಿಕೆ ಜಿಲ್ಲಾ ಯುವ ಅಧಿಕಾರಿ ನೆಹರು ಯುವ ಕೇಂದ್ರ ಶಿವಮೊಗ್ಗ ಜಿಲ್ಲೆ ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರು :
*)ಬಾಲರಾಜ್ ಪೊಲೀಸ್ ಉಪ ಅಧೀಕ್ಷಕರು ಶಿವಮೊಗ್ಗ ಉಪ ವಿಭಾಗ. (Dysp)….
*)ಶಿವಮೊಗ್ಗ ಜಿಲ್ಲಾ ವೈದ್ಯಾಧಿಕಾರಿಗಳು ರಾಜೇಶ್ ಸುರಗಿಹಳ್ಳಿ.
*) ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ಎನ್ .ಮಾಲತೇಶ್ .
*) ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕರು ಹಾಗೂ ಪತ್ರಕರ್ತರಾದ ರಘುರಾಜ್ ಹೆಚ್. ಕೆ…
ದಿವಂಗತ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಸ್ಮರಣಾರ್ಥ ನಡೆಸುತ್ತಿರುವ ಈ ರಾಷ್ಟ್ರೀಯ ಕರಾಟೆ ಕ್ರೀಡಾಕೂಟಕ್ಕೆ ತಾವೆಲ್ಲರೂ ಬಂದು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿಕೊಳ್ಳಬೇಕಾಗಿ ಸಂಘಟಕರು ಮನವಿ ಮಾಡಿದ್ದಾರೆ…