Sunday, June 15, 2025
Google search engine
Homeರಾಜ್ಯ"ನಕಲಿ ಬಂಗಾರ"ವನ್ನು ನೀಡಿ ವಂಚಿಸುತ್ತಾರೆ ಹುಷಾರ್..!!!!! ದಾವಣಗೆರೆ ಗ್ರಾಮಾಂತರ ಉಪ ವಿಭಾಗ ಪೊಲೀಸರ ಮಿಂಚಿನ ಕಾರ್ಯಾಚರಣೆ..!!...

“ನಕಲಿ ಬಂಗಾರ”ವನ್ನು ನೀಡಿ ವಂಚಿಸುತ್ತಾರೆ ಹುಷಾರ್..!!!!! ದಾವಣಗೆರೆ ಗ್ರಾಮಾಂತರ ಉಪ ವಿಭಾಗ ಪೊಲೀಸರ ಮಿಂಚಿನ ಕಾರ್ಯಾಚರಣೆ..!! “ನಕಲಿ ಬಂಗಾರದ ಬಿಲ್ಲೆ” ಗಳನ್ನು ನೀಡಿ ವಂಚಿಸುತ್ತಿದ್ದವರ ಬಂಧನ..!!!!

ದಾವಣಗೆರೆ : ಗ್ರಾಮಾಂತರ ಉಪ ವಿಭಾಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಆರು ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು.

ಗುನ್ನೆ ನಂಬರ್ 176 / 2022 ಕಲಂ 420 ರೆ/ವಿ 34 IPC ಪ್ರಕರಣದಲ್ಲಿ ಶ್ರೀಮತಿ ಕನ್ನಿಕಾ ಸಿಕ್ರಿವಾಲ್, ಸಹಾಯಕ ಪೊಲೀಸ್ ಅಧೀಕ್ಷಕರು ದಾವಣಗೆರೆ ಗ್ರಾಮಾಂತರ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್, ಸಿಬ್ಬಂದಿಗಳಾದ ಎಂ,ಎಸ್,ಐ, ಯಾಸಿನ್ ಉಲ್ಲಾ, ರಾಜಪ್ಪ ಎನ್ ಸಿ, ಸೈಯದ್ ಗಫಾರ್, ನಾಗರಾಜಯ್ಯ ಹನುಮಂತಪ್ಪ ಕೌಡಿ, ವಸಂತ್ ರೆಡ್ಡಿ ಹಾಗೂ ನೂರುಲ್ಲಾ ಇವರಗಳನ್ನು ಒಳಗೊಂಡ ತಂಡ ಪ್ರಕರಣದ ಆರೋಪಿತರಾದ ಸಾತ್ವಾಡಿ ಪ್ರಕಾಶ್ ತಂದೆ ನಾಗಪ್ಪ ಎಸ್ (30) ವರ್ಷ ಕೊರಚರ ಜನಾಂಗ, ಜಿರಾಯ್ತಿ ಕೆಲಸ, ವಾಸ ಮಾಚನಹಳ್ಳಿ ಕೊರಚರಟ್ಟಿ ಗ್ರಾಮ, ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ. ಮತ್ತು ಹನುಮಂತಪ್ಪ@ ಕೊರಚರ ಹನುಮಂತಪ್ಪ ತಂದೆ ಕೊರಚರ ಬಡಕಪ್ಪ (52) ವರ್ಷ ಕೊರಚರ ಜನಾಂಗ ಕೂಲಿ ಕೆಲಸ ವಾಸ ಕನ್ನನಾಯಕನಹಳ್ಳಿ ಅಗ್ರಹಾರ ಗ್ರಾಮ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ. ಅವರುಗಳನ್ನು ಮೇಲ್ಕಂಡ ಪ್ರಕರಣದಲ್ಲಿ ಪೊಲೀಸರು ದಸ್ತಗಿರಿ ಮಾಡಿ 6 ಲಕ್ಷ ರೂಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿಬಿ ರಿಶ್ವಂತ್, ಹಾಗೂ ಹೆಚ್ಚು ವರಿ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಂಗಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈಗಲೂ ನಕಲಿ ಬಂಗಾರದ ವ್ಯವಹಾರಗಳು ನಡೆಯುತ್ತಿವೆ ಹುಷಾರ್ ಪೊಲೀಸರ ಎಚ್ಚರಿಕೆ :

ಈಗಲೂ ನಕಲಿ ಬಂಗಾರಗಳನ್ನು ನೀಡುತ್ತೇವೆ ಎಂದು ಹೇಳಿ ಹಣವನ್ನು ದೋಚುವ ತಂಡಗಳು ಯಶಸ್ವಿಯಾಗಿ ತಮ್ಮ ಕಾರ್ಯಚರಣೆಗಳನ್ನು ನಡೆಸುತ್ತಿವೆ ಇದನ್ನು ನಂಬಿಕೊಂಡು ಯಾರು ಹೋಗಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆಯನ್ನು ನೀಡಿದೆ…

ರಘುರಾಜ್ ಹೆಚ್.ಕೆ…9449553305…

ರಘುರಾರಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!