ಸಾಗರ : ತಾಲೂಕಿನ ರೈತಸಂಘದ ಎಲ್ಲಾ ಗೌರವಾನ್ವಿತ ಪದಾಧಿಕಾರಿಗಳೇ, ಸದಸ್ಯರುಗಳೇ, ರೈತಬಾಂಧವರೇ ಹಾಗೂ ತಾಲೂಕಿನ ನಾಗರೀಕ ಬಂಧುಗಳೇ, ಎಲ್ಲಾ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳೇ ರಾಜ್ಯಸರ್ಕಾರದ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಮತ್ತು ಸಮವಸ್ತ್ರವನ್ನು ಶಾಲಾರಂಭದ ಅರ್ಧವರ್ಷ ಕಳೆದರು ವಿತರಣೆ ಮಾಡದಿರುವ ಇಲಾಖೆಯ ವಿಳಂಬ ಧೋರಣೆ ಖಂಡಿಸಿ ,
ಗುರುವಾರ ದಿನಾಂಕ 08-09-2022 ರ ಗುರುವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಸಾಗರ ಗಣಪತಿ ದೇವಸ್ಥಾನದಿಂದ ಉಪವಿಭಾಗಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮತ್ತು ಬಿಕ್ಷಾಟನೆ ನಡೆಸಿ ಸಂಗ್ರಹವಾದ ಹಣವನ್ನು ಶಿಕ್ಷಣ ಇಲಾಖೆಗೆ ಉಪವಿಭಗಾಧಿಕಾರಿಗಳ ಮೂಲಕ ತಲುಪಿಸುವ ಸಾಂಕೇತಿಕವಾದ ಹೋರಾಟವನ್ನು ದಾಖಲಿಸಲಿದ್ದೇವೆ ಈ ಹೋರಾಟಕ್ಕೆ ಎಲ್ಲರೂ ಭಾಗವಹಿಸಿ ಬೆಂಬಲಿಸುವುದರ ಮೂಲಕ ಹಾಗೂ ಭಿಕ್ಷೆ ನೀಡುವ ಮೂಲಕ ಸರ್ಕಾರವನ್ನು ಎಚ್ಚರಿಸಿ ಮಕ್ಕಳಿಗೆ ಸಿಗಬೇಕಾದ ಸೌಲಭ್ಯ ಕೊಡಿಸಲು ಎಲ್ಲರೂ ಜೊತೆಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸೋಣ. ಎಂದು ತಾಲೂಕು ರೈತ ಸಂಘ ಪತ್ರಿಕಾ ಪ್ರಕಟಣೆ ಹೊರಡಿಸಿದೆ….
ವರದಿ: ಸತೀಶ್ ಸಾಗರ…