
ಶಿಕಾರಿಪುರ ತಾಲೂಕಿನ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಕಂದಾಯ, ಬಗರ್ ಹುಕುಂ, ಸಾರ್ವಜನಿಕರಿಗೆ ಮಾಶಾಸನ, ಕೋವಿಡ್ ಪರಿಹಾರ, ಮಳೆಹಾನಿ, ಬೆಳೆಹಾನಿ,ಸರ್ವೇ ವಿಷಯಗಳ ಬಗ್ಗೆ ಚರ್ಚಿಸಿ ಶೀಘ್ರವಾಗಿ ಇರುವ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಗರಂ ಆದ ಸಂಸದ ಬಿ ವೈ ರಾಘವೇಂದ್ರ :
ತಾಲೂಕಿನ ಅಭಿವೃದ್ಧಿಗೋಸ್ಕರ ಕೋಟಿಗಟ್ಟಲೆ ಅನುದಾನ ತಂದರು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಕೆಲವು ಅಧಿಕಾರಿಗಳು ಲಂಚಕ್ಕಾಗಿ ಬಾಯಿ ತೆರೆದು ಕುಳಿತಿರುವುದು ನಮ್ಮ ಗಮನಕ್ಕೆ ಇದು ಇಲ್ಲಿಗೆ ಲಂಚ ತೆಗೆದುಕೊಳ್ಳುವ ಮನಸ್ಥಿತಿ ಇರುವವರು ದಯವಿಟ್ಟು ಔಗ ಖಾಲಿ ಮಾಡಿ ನಮಗೆ ನಿಮ್ಮ ಅವಶ್ಯಕತೆ ಇಲ್ಲ. ಕೆಲವು ವಿಲೇಜ್ ಅಕೌಂಟೆಂಟ್ ಗಳು ಸ್ಥಳದಲ್ಲಿದ್ದು ಕಾರ್ಯ ನಿರ್ವಹಿಸುತ್ತಿಲ್ಲ ಮನೆಯಲ್ಲಿ ಇದ್ದುಕೊಂಡೇ ಸುಳ್ಳು ಹೇಳುತ್ತಿದ್ದಾರೆ. ಬಡವರು ಅನಕ್ಷರಸ್ಥರು ಅವರ ಕೆಲಸ ಮಾಡಿಕೊಡಿ ಅವರಿಂದ ಏನು ನಿರೀಕ್ಷಿಸಬೇಡಿ 500 /1000 ಕ್ಕೋಸ್ಕರ ಕೈ ಚಾಚಾಬೇಡಿ ಎಂದು ಖಡಕ್ಕಾಗಿ ವಾರ್ನಿಂಗ್ ನೀಡಿದರು..
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಸೆಲ್ವಮಣಿ ಅವರು, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ, ಸಾಗರ ಉಪ ವಿಭಾಗಧಿಕಾರಿ ಪಲ್ಲವಿ,
ತಹಶೀಲ್ದಾರ್ ಕವಿರಾಜ್, ಪರಮೇಶ್, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ…9449553305….