
ಶಿವಮೊಗ್ಗ ಜಿಲ್ಲೆಯಾದ್ಯಂತ ಅತಿಯಾದ ಮಳೆಯಿಂದಾಗಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಮತ್ತು ಕೊಳೆರೋಗ ಉಂಟಾಗಿದ್ದು ಅದರಲ್ಲೂ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಆಗುವ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಈ ರೋಗದ ಬಾಧೆ ಹೆಚ್ಚಾಗಿದ್ದು. ರೈತರು ಕಂಗಾಲಾಗಿದ್ದಾರೆ. ಇದಲ್ಲದೆ ರೈತರು ಬೆಳೆದ ಬೆಳೆಗಳಾದ ಭತ್ತ,ಕಬ್ಬು, ಶುಂಠಿ ,ಜೋಳ, ಅತಿಯಾದ ಮಳೆಯಿಂದ ಹಾನಿಯಾಗಿದ್ದು ರೈತರ ಬದುಕು ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳಾದ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆಯ, ತಜ್ಞರುಗಳನ್ನು ಸಂಬಂಧಪಟ್ಟ ರೋಗಪೀಡತ ಪ್ರದೇಶಗಳಿಗೆ ಕಳಿಸಿಕೊಟ್ಟು ವರದಿಯನ್ನು ತರಿಸಿಕೊಂಡು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಹಾಗೂ ಸೂಕ್ತ ಪರಿಹಾರವನ್ನು ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ತಹಸಿಲ್ದಾರ್ ಮೂಲಕ ಘನ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದಾರೆ…
ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸಾಲೇಕೊಪ್ಪ ರಾಮಚಂದ್ರ,ಮಂಡಲ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ ,ಮಂಡಲ ಪ್ರಧಾನ ಕಾರ್ಯದರ್ಶಿ
ಕವಿರಾಜ್ ಬೇಗುವಳ್ಳಿ,
ರಕ್ಷಿತ್ ಮೇಗರವಳ್ಳಿ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು,
ತಾ. ಪಂ. ಮಾಜಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್ & ಕುಕ್ಕೆ ಪ್ರಶಾಂತ್ , ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ,ಹೆದ್ದೂರು ಮಹೇಶ್ , ದಿಂಡಿನಬೈಲು ನವೀನ್ , ಸುರೇಂದ್ರ ಕೋಟೆಗುಡ್ಡೆ , ಡಾಕಮ್ಮ, ಮುರುಳಿ ನಂಬಳ , ದಯಾನಂದ್ ಸಾಲಿಯಾನ್ , ಸತ್ಯೇಂದ್ರ ನಾಯಕ್, ಪ್ರದೀಪ್ ಗಬಡಿ , ಪದ್ಮ ನವೀನ್ ಮತ್ತಿತರರು ಉಪಸ್ಥಿತರಿದ್ದರು….
ರಘುರಾಜ್ ಹೆಚ್.ಕೆ….9449553305….