Monday, June 16, 2025
Google search engine
Homeರಾಜ್ಯವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ "ಟ್ರ್ಯಾಕ್ಟರ್ ಕಳ್ಳತನದ ಆರೋಪೀತರ ಬಂಧನ"..!!!!

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ “ಟ್ರ್ಯಾಕ್ಟರ್ ಕಳ್ಳತನದ ಆರೋಪೀತರ ಬಂಧನ”..!!!!

“ಟ್ಯಾಕ್ಟರ್ ಕಳ್ಳತನದ ಆರೋಪೀತರ ಬಂಧನ”

ವಿಜಯಪುರ:ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದ ಮಡಿವಾಳಪ್ಪ ಹುಕ್ಕೇರಿಯವರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಸಾಗಾಟನೆಗಾಗಿ ಜಾನ್ ಡೀರ್ ಕಂಪನಿಯ ಟ್ಯಾಕ್ಟರ್ ನ್ನು ಖರೀದಿ ಮಾಡಿ, ತಮ್ಮ ಜಮೀನನಲ್ಲಿ ಹಚ್ಚಿದ್ದು, ದಿನಾಂಕ 5/9/22 ರಂದು ರಾತ್ರಿ 8:30 ರ ಗಂಟೆಗೆ ತನ್ನ ಜಮೀನಿನಿಂದ ಮನೆಗೆ ಹೋಗುವಾಗ ಟ್ರ್ಯಾಕ್ಟರ್ ಜಮೀನಿನದಲ್ಲಿಯೇ ಇದ್ದು, ಬೆಳಗ್ಗೆ 6 ಗಂಟೆಗೆ ವಾಪಸ್ಸು ಬಂದಾಗ ಟ್ಯಾಕ್ಟರ್ ಇರದೇ ಇದ್ದದರಿಂದ ಗಮನಿಸಿ, ಟ್ಯಾಕ್ಟರ್ ಕಳ್ಳತನ ಆಗಿದೆ ಎಂದು ಮನಗೂಳಿಯ ಪೊಲೀಸ್ ಠಾಣೆಯಲ್ಲಿ ತನ್ನ ಮಾಲಿಕತ್ವದ ಜಾನ್ ಡೀರ್ ಎಲ್ & ಟಿ ಕಂಪನಿಯ ಕೆ ಎ 27 ಟಿ ಎ9075, 3.00.000 ರೂ ಅದಕ್ಕೆ ಜೋಡಿಸಿದ ಹಳದಿ ಬಣ್ಣದ ಟ್ಯಾಕ್ಟರ್ ಚೆಸ್ಸಿ ನಂ90/2021 ರ 1.90.000 ರೂ ಬೆಲೆಯ ಕಳ್ಳತನವಾಗಿದೆಂದು ಪ್ರಕರಣದ ಪಿರ್ಯಾರುದಾರರು ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ ಮೇರೆಗೆ ಮನಗೂಳಿಯ ಠಾಣಾ ಪ್ರಕರಣ ಸಂಖ್ಯೆ:96/2022 ಕಲಾಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತಾರೆ

ಈ ಪ್ರಕರಣದ ತನಿಖೆ ಕುರಿತು ಎಚ್.ಡಿ .ಆನಂದ್ ಕುಮಾರ್ ಪೊಲೀಸ ಅಧೀಕ್ಷಕರು ವಿಜಯಪುರ ಜಿಲ್ಲೆ, ಹಾಗೂ ರಾಮ್ .ಎಲ್ .ಅರಿಸಿದ್ ಮಾನ್ಯ ಹೆಚ್ಚುವರಿ ಪೊಲೀಸ ಆಧೀಕ್ಷಕರು ವಿಜಯಪುರ , ಮತ್ತು ಅರುಣಕುಮಾರ ಕೋಳೂರು ಮಾನ್ಯ ಪೋಲಿಸ ಉಪಾಅಧೀಕ್ಷಕರು, ಬಸವನ ಬಾಗೇವಾಡಿ ರವರ ಮಾರ್ಗದರ್ಶನದಲ್ಲಿ, ಸೋಮಶೇಖರ್ ಜುಟ್ಟಲ್ ಸಿಪಿಐ ನಿಡಗುಂದಿ ವೃತ್ತ, ರವರ ನೇತೃತ್ವದಲ್ಲಿ, ಪಿ.ಎನ್.ಮನಗೂಳಿ ಪಿಎಸ್ಐ ಹಾಗೂ ಕು. ದೀಪಾ.ವೈ ಗೋಡೆಕರ ಹೆಚ್ಚುವರಿ ಪಿಎಸ್ಐ ಮನಗೂಳಿ ಪಿ.ಎಸ್ ಹಾಗೂ ಸಿಬ್ಬಂದಿ ಜನರಾದ ಎಂ.ಎಸ್.ಗೋರನಾಳ, ಆಸಿಫ್.ಅ.ಲಸ್ಕರಿ, ಎಸ್.ಆರ್.ಏಳುಗಂಟಿ.ಯವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿದ್ದು.

ತನಿಖಾ ತಂಡವು ಆರೋಪಿತರ ಮತ್ತು ಕಳ್ಳತನವಾಗಿರುವ ವಾಹನ ಪತ್ತೆಯ ಸಲವಾಗಿ ಹಲವಡೆ ಬಾತ್ಮಿದಾರರನ್ನು ನೇಮಿಸಿದ್ದು ಈ ದಿನ 15/9/2022 ರಂದು ಬಾತ್ಮಿದಾರರ ಬಾತ್ಮಿ ಮೇರೆಗೆ ಕೋಲ್ಹಾರದ ಯುಕೆಪಿ ಕ್ರಾಸ್ ಹತ್ತಿರ ಆರೋಪಿತರು ಹೋಗುವುದಾಗಿ ಖಚಿತ ಪಡಿಸಿಕೊಂಡು ಯುಕೆಪಿ ಹತ್ತಿರ ಕಾಯ್ದು ನೋಡಲಾಗಿ, ಬೆಳಗ್ಗೆ 07:00 ಗಂಟೆಗೆ ಕೆ ಎ 29 ಇ ಎ8527 ದ್ವಿಚಕ್ರ ವಾಹನದಲ್ಲಿ ಇಬ್ಬರು ಸವಾರರು ವಿಜಯಪುರ ಕಡೆಯಿಂದ ಯುಕೆಪಿ ಕ್ರಾಸ್ ಕಡೆಗೆ ಬಂದು, ಅಲ್ಲಿಂದ ಬಸವನ ಬಾಗೇವಾಡಿ ಕಡೆಗೆ ಹೋಗುವ ರಸ್ತೆ ಕಡೆಗೆ ಹೋಗುತ್ತಿದ್ದನ್ನು ಗಮನಿಸಿ ವಾಹನದಲ್ಲಿದ್ದ ಇಬ್ಬರು ಆರೋಪಿತರನ್ನು ಖಚಿತ ಪಡಿಸಿಕೊಂಡು ಅವರನ್ನು ತಡೆದು ಹಿಡಿದು ಅವರನ್ನು ಮನಗೂಳಿಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ಸದರಿ ಇಬ್ಬರು ಆರೋಪಿತರಾದ 1) ಪರಶುರಾಮ್ ತಂ ಲಕ್ಷ್ಮಣ್ ಕೊಲ್ಹಾರ, 22 ವರ್ಷ , ಕೂಲಿ ಕೆಲಸ, ಹಿಂದೂ ಗಾಣಿಗ, ಸಾ// ಕುಬಕಡ್ಡಿ ಗ್ರಾಮ ತಾಲೂಕ ಕೋಲ್ಲಾರ, ಜಿಲ್ಲೆ ವಿಜಯಪುರ.2) ಬಾಬಾಸಾಹೇಬ @ ಗಂಡು ತಾತುಬಾ ಜಕತಪ್ಪಗೋಳ, 23 ವರ್ಷ, ಹಿಂದೂ ಮರಾಠ, ಸಾ// ಕುಬಕಡ್ಡಿ ಗ್ರಾಮ, ತಾಲೂಕು ಕೋಲ್ಹಾರ ಜಿಲ್ಲೆ ವಿಜಯಪುರ, ಎಂದು ಹೇಳಿದ್ದು, ಇಬ್ಬರು ಆರೋಪಿತರು ಇನ್ನೊಬ್ಬ 3) ಮಹಮ್ಮದ್ ತಂದೆ ರಜಾಕಸಾಬ ಪೆಂಡಾರಿ ಸಾ// ಕುಬಕಡ್ಡಿ ಗ್ರಾಮ ತಾಲೂಕು ಕೋಲ್ಹಾರ ಜಿಲ್ಲೆ ವಿಜಯಪುರ ನೊಂದಿಗೆ ಸೇರಿಕೊಂಡು ಹತ್ತರಕಿಹಾಳ ಗ್ರಾಮದಲ್ಲಿರುವ ಜಾನ್ ಡೀರ್ ಕಂಪನಿಯ ಎಲ್ & ಟಿ ಕಂಪನಿಯ ಟ್ಯಾಕ್ಟರ್ ಹಾಗೂ ಅದಕ್ಕೆ ಜೋಡಿಸಿದ ಹಳದಿ, ಬಣ್ಣದ ಟ್ರೈಲರ್ ರನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಆರೋಪಿತರ ಕಡೆಯಿಂದ ಜಾನ್ ಡೀರ್ ಎಲ್ & ಟಿ ಕಂಪನಿಯ ನಂ.ಕೆ.ಎ 27.ಟಿ.ಎ.9075.ಹಾಗೂ ಅದಕ್ಕೆ ಜೋಡಿಸಿದ ಹಳದಿ ಬಣ್ಣದ ಟೇಲರ್ ಚೆಸ್ಸಿ ನಂ:90/2021 ಒಟ್ಟು 4.90.000 ರೂ ಬೆಲೆಯ ಪಿರ್ಯಾದಿ ಟ್ಯಾಕ್ಟರ್ ನ್ನು & ಕೃತ್ಯಕ್ಕೆ ಬಳಸಿದ ಬಜಾಜ್ ಡಿಸ್ಕವರಿ ಕಂಪನಿಯ ಕೆ.ಎ.29.ಇ.ಎ.8527.ಮೋಟಾರ್ ಸೈಕಲ್ ಮತ್ತು ಎರಡು ಫೋನ್ ಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಚ್.ಡಿ.ಆನಂದ್ ಕುಮಾರ್ ಐಪಿಎಸ್ ಪೊಲೀಸ್ ಅಧೀಕ್ಷಕರು ವಿಜಯಪುರ ಜಿಲ್ಲೆ , ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಆರೋಪಿತರ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಪಿ.ಎನ್.ಮನಗೂಳಿ ಪಿಎಸ್ಐ & ಕು. ದೀಪಾ .ವೈ.ಗೋಡೆಕರ ಹೆಚ್ಚುವರಿ ಪಿಎಸ್ಐ ಮನಗೂಳಿ ಪಿ.ಎಸ್ ಹಾಗೂ ಸಿಬ್ಬಂದಿಗಳಾದ ಎಂ.ಎಸ್.ಗೊರನಾಳ, ಆಸಿಫ್ .ಅ.ಲಸ್ಕರಿ, ಎಸ್.ಆರ್.ಏಳಗಂಟಿ, ರವರ ಕಾರ್ಯವನ್ನು ಎಚ್.ಡಿ.ಆನಂದಕುಮಾರ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ….

ವರದಿ : ಮಲ್ಲಿಕಾರ್ಜುನ ಮ ಬುರ್ಲಿ…
ವಿಜಯಪುರ….

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!