
ಕೇಂದ್ರ ಸರ್ಕಾರ ಭೂತಾನ್ ದೇಶದಿಂದ 17,000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳುವ ನಿರ್ದಾರ ಕೈಗೊಂಡಿದೆ .ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಆರಂಭ ಆಗಿದೆ.
ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಧರು ಆಗಿರುವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು.
ಇದು ರಾಜಕೀಯ ಪ್ರೇರಿತವಾಗಿ ಪರಿವರ್ತನೆಗೊಂಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಭೂತಾನ್ ಅಡಿಕೆ ಆಮದು ನಿರ್ದಾರಕ್ಕೆ ಹೆಚ್ಚು ಕಿವಿಗೊಡದಿರಿ ಕರ್ನಾಟಕದ ಅದರಲ್ಲಿಯೂ ಮಲೆನಾಡ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ..ಈ ಆಮದು ಪ್ರಕ್ರಿಯೆ ನಿರ್ದಾರ ಹಿಂದೆ 2006 ಸಾರ್ಕ್ ದೇಶಗಳ ಒಪ್ಪಂದಕ್ಕೆ ಸಂಬಂಧಿಸಿದ ದೇಶದ ಆಂತರಿಕ ಪ್ರಕ್ರಿಯೆ ಆಗಿದ್ದು .ಪರಸ್ಪರ ಅಮದು ಮತ್ತು ರಫ್ತುಗಳನ್ನು ದೇಶ ದೇಶಗಳ ನಡುವೆ ಮಾಡಿಕೊಳ್ಳಬೇಕಾಗುತ್ತದೆ. ಆ ಪ್ರಕ್ರಿಯೆಯಲ್ಲಿ ಭಾರತದಿಂದಲೂ ಕೂಡ ಭೂತಾನಿಗೆ ಅಡಿಕೆ ರಫ್ತಾಗುತ್ತದೆ. ಆದರೂ ಕೇಂದ್ರ ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚಿಸಿ ಈ ಪ್ರಕ್ರಿಯೆಯನ್ನು ಕೂಡ ನಿಲ್ಲಿಸುವ ಪ್ರಯತ್ನವನ್ನು ಮಾಡಲಾಗುವುದು. ರೈತರು ಯಾವುದೇ ಆತಂಕ ಪಡುವ ಅಗತ್ಯತೆ ಇಲ್ಲ, ಇದರಲ್ಲಿ ರಾಜಕೀಯ ಮಾಡುವ ಅಗತ್ಯತೆ ಕೂಡ ಇಲ್ಲ, ಹಿಂದೆ ಕೂಡ ಸಾಕಷ್ಟು ಸಲ ಇದೇ ತರ ಸಮಸ್ಯೆಗಳು ಸಂಭವಿಸಿದಾಗ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ನಿಯೋಗವನ್ನು ತೆಗೆದುಕೊಂಡು ಹೋಗಿ ಸೂಕ್ತ ಪರಿಹಾರವನ್ನು ಒದಗಿಸಲಾಗಿದೆ. ಈಗ ಕೂಡ ಅದೇ ದಾರಿಯಲ್ಲಿ ಮುಂದುವರಿಯುತ್ತೇವೆ. ಎಂದು ಸಮಸ್ತ ಅಡಿಕೆ ಬೆಳೆಗಾರರಿಗೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಧೈರ್ಯ ತುಂಬಿದ್ದಾರೆ.
ರಘುರಾಜ್ ಹೆಚ್.ಕೆ…9449553305….