Wednesday, April 30, 2025
Google search engine
Homeರಾಜ್ಯBIG IMPACT:: ಸಾಲೂರು ಗ್ರಾಮಸ್ಥರ ಹೋರಾಟಕ್ಕೆ ನ್ಯೂಸ್ ವಾರಿಯರ್ಸ್ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು..!! 2022-2023 ನೇ...

BIG IMPACT:: ಸಾಲೂರು ಗ್ರಾಮಸ್ಥರ ಹೋರಾಟಕ್ಕೆ ನ್ಯೂಸ್ ವಾರಿಯರ್ಸ್ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು..!! 2022-2023 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ 2 ಮನೆಗಳು C ವರ್ಗದಿಂದ B2 ವರ್ಗಕ್ಕೆ ಮಾರ್ಪಾಡು..!! ಆದರೆ ತಾವೇ ಮನೆ ಬೀಳಿಸಿಕೊಂಡು ಪರಿಹಾರ ಪಡೆದುಕೊಂಡವರ ಕಥೆ ಏನು..?!! ಸ್ಥಳ ಪರಿಶೀಲನೆ ಮಾಡದೆ A B C ಎಂದು ಪರಿಗಣನೆ ಮಾಡಿ ಪರಿಹಾರ ನೀಡಿರುವ ಇಂಜಿನಿಯರ್ ಗಳ ತಲೆದಂಡವಾಗಬೇಕು..!! ಪುನಃ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಬೇಕು..!!!

ಶಿವಮೊಗ್ಗ : ಅಧಿಕ ಮಳೆಯಿಂದ ಅತಿವೃಷ್ಟಿಯ ಕಾರಣದಿಂದ ಬಿದ್ದು ಹೋದ ಮನೆಗಳಿಗೆ ಅವುಗಳು ಬಿದ್ದು ಹೋದ ರೀತಿಯ ಆಧಾರದ ಮೇಲೆ ಪೂರ್ತಿ ಬಿದ್ದು ಹೋದರೆ 5 ಲಕ್ಷ ರೂಗಳು, ಅರ್ಧ ಬಿದ್ದರೆ 3 ಲಕ್ಷ ರೂಗಳು, ಸ್ವಲ್ಪ ಪ್ರಮಾಣದ ಹಾನಿಯಾದರೆ 50 ಸಾವಿರ ರೂಪಾಯಿಗಳು ಎಂದು ಕ್ರಮವಾಗಿ ABC ಎಂದು ಮಾರ್ಪಾಡು ಮಾಡಿ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ…

ಸರ್ಕಾರದ ಈ ವ್ಯವಸ್ಥೆ ಬಡವರಿಗೆ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ವರದಾನವಾಗಿದೆ.. ಬಿದ್ದು ಹೋದ ಮನೆ ಬದಲಾಗಿ ಮತ್ತೊಂದು ಮನೆಯನ್ನು ಕಟ್ಟಿಸಿಕೊಳ್ಳಲು ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ.ಆದರೆ ಕೆಲವು ಅಧಿಕಾರಿ ವರ್ಗದವರಿಗೆ ಬಲಾಡ್ಯರಿಗೆ ಆರ್ಥಿಕವಾಗಿ ಸದೃಢ ಇರುವವರು ಕೂಡ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ವರದಿಯನ್ನು ನ್ಯೂಸ್ ವಾರಿಯರ್ಸ್ ನಿನ್ನೆ ಪ್ರಕಟಿಸಿದ್ದು… ಸಾಲೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರನ್ನು ಕೂಡ ನೀಡಿದ್ದರು… ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಇದನ್ನು ಪರಿಶೀಲನೆ ನಡೆಸುವಂತೆ ತಹಸಿಲ್ದಾರ್ ಗೆ ಆದೇಶ ಮಾಡಿದ್ದಾರೆ… ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಹಶೀಲ್ದಾರ್ C GRADE ಹೊಂದಿದ್ದ ಎರಡು ಮನೆಗಳನ್ನು B2 ಗೆ ವರ್ಗಾಯಿಸಿ ಮಾರ್ಪಾಡು ಮಾಡಿ ಕಳಿಸಿದ್ದಾರೆ… ಇದು ಸ್ವಾಗತಾರ್ಹ ಬೆಳವಣಿಗೆ… ಆದರೆ….

ಈಗಾಗಲೇ ಮನೆಯನ್ನು ಹೊಂದಿರುವವರು ಆರ್ಥಿಕವಾಗಿ ಸದೃಢವಾಗಿರುವವರು ತಾವೇ ಮನೆಯನ್ನು ಬಿಳಿಸಿಕೊಂಡು ಇಂಜಿನಿಯರ್ ಗಳನ್ನು ಬುಕ್ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ಗಂಭೀರ ಆರೋಪ ಈಗ ಇಂಜಿನಿಯರ್ ಗಳ ಮೇಲೆ ಬಿದ್ದಿದೆ…

ಇಂಜಿನಿಯರ್ ಕೂಡ ಯಾವುದೇ ಸ್ಥಳ ಪರಿಶೀಲನೆ ನಡೆಸದೆ ಎಬಿಸಿ ಎನ್ನುವ ಕೆಟಗರಿಯಲ್ಲಿ ಪರಿಹಾರ ಹಣ ನೀಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತದೆ…

ಕೂಡಲೇ ಅಂತ ಇಂಜಿನಿಯರ್ ಗಳನ್ನು ಅಮಾನತ್ತಿನಲ್ಲಿ ಇಡಬೇಕು ಪುನಃ ಸ್ಥಳ ಪರಿಶೀಲನೆ ನಡೆಸಬೇಕು ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗಬೇಕು ಪರಿಹಾರ ಧನ ಬರಬೇಕು ಎನ್ನುವುದು ಗ್ರಾಮಸ್ಥರ ಮನವಿ ಹಾಗೂ ಆಗ್ರಹ…

ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾಡುತ್ತೇವೆ ಎಂದು ಊರಿನ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...