Wednesday, April 30, 2025
Google search engine
Homeರಾಜ್ಯರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆ ಇವರಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ...

ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆ ಇವರಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು!!

ಕೋವಿಡ್ ನಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆ ನಡುವೆಯೂ ನಮ್ಮ ಕರೆಗೆ ಓಗೊಟ್ಟು ಸ್ವಯಂ ಪ್ರೇರಣೆಯಿಂದ ಇಂದು ರಕ್ತದಾನ ಮಾಡುವ ಮೂಲಕ ಎಪ್ಪತ್ತೈದನೆಯ ಸ್ವಾತಂತ್ರೋತ್ಸವನ್ನು ಸಮಾಜಮುಖಿಯಾಗಿ ಸಂಭ್ರಮಿಸಿದ ಎಲ್ಲಾ ಸಹೃದಯಿ ಬಂಧುಗಳಿಗೆ,

ಆಗಮಿಸಿದರೂ ತಾಂತ್ರಿಕ ಕಾರಣಗಳಿಂದ ರಕ್ತದಾನ ಮಾಡಲು ಸಾಧ್ಯವಾಗದ ಎಲ್ಲಾ ಸಹೃದಯಿ ಬಂಧುಗಳಿಗೆ,

ಮತ್ತು ..,

ರಕ್ತದಾನ ಮಾಡಲು ಪ್ರೇರೇಪಿಸಲು ಶ್ರಮವಹಿಸಿದ ಎಲ್ಲಾ ಸಹೃದಯಿ ಬಂಧುಗಳಿಗೆ,

ತಮ್ಮ ಸಮಾಜಮುಖಿ ಕಾಳಜಿ,ಬದ್ದತೆಗಳಿಗಾಗಿ ಕರ್ನಾಟಕ ರಾಜ್ಯ ಸಂಘ, ತೀರ್ಥಹಳ್ಳಿ ತಾಲ್ಲೂಕು ಶಾಖೆಯು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ.

ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ಶ್ರಮವಹಿಸಿದ ನಮ್ಮ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶ್ರೀ ಆರ್ ಎಂ ಧರ್ಮಕುಮಾರ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶ್ರೀ ಮಂಜಣ್ಣ, ನಮ್ಮ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀ ಜಯಪ್ರಕಾಶ್, ಜಂಟಿ ಕಾರ್ಯದರ್ಶಿ ಶ್ರೀ ಕೌಶಿಕ್, ಉಪಾಧ್ಯಕ್ಷರುಗಳಾದ ಶ್ರೀ ರಾಘವೇಂದ್ರ ಎಸ್, ಶ್ರೀಮತಿ ಸುಷ್ಮಾ ಎಸ್ ಪಿ, ಜಂಟಿ ಕಾರ್ಯದರ್ಶಿ ಶ್ರೀ ಎಲ್ಲಪ್ಪ ವಡ್ಡರ್, ಕೃಷಿ ಅಧಿಕಾರಿ ಶ್ರೀ ಅಜಿತ್, ಪೋಲಿಸ್ ಅಧಿಕಾರಿಗಳಾದ ಶ್ರೀ ಎಲ್ಲಪ್ಪನವರ್,ಶ್ರೀ ಶಿವಾನಂದ ಕೋಲಿ, ಸಹೃದಯಿ ನಾಗರೀಕ ಬಂಧುಗಳಾದ ಮಾರಿಕಾಂಬ ಡ್ರೈವಿಂಗ್ ಸ್ಕೂಲ್ ನ ಶ್ರೀ ಕವಿರಾಜ್, ಶ್ರೀ ಸುಭಾಷ್,ಕೃಷಿಕ ಶ್ರೀ ಮಹೇಶ್ವರ,ರಜತ್ ಮೋಟರ್ಸ್ ನ ಟಿ ವಿ ಸುರೇಶ್ ಶೆಟ್ಟಿ, ಸಂಘದ ಮ್ಯಾನೇಜರ್ ಶ್ರೀ ಕಾಡಪ್ಪ ಗೌಡ ಸೇರಿದಂತೆ ಎಲ್ಲಾ ಸಹೃದಯಿ ಬಂಧುಗಳಿಗೂ ತುಂಬು ಹೃದಯದ ಧನ್ಯವಾದಗಳು.

ಇಲಾಖಾವಾರು ರಕ್ತದಾನಿಗಳ ವಿವರ ಈ ಕೆಳಕಂಡಂತಿದೆ.

ಕಂದಾಯ. : 10
ಆರ್ ಡಿ ಪಿ ಆರ್ : 6
ಕೃಷಿ : 5
ಸಾರ್ವಜನಿಕ ಬಂಧುಗಳು: 5
ಆರೋಗ್ಯ. : 4
ಭೂಮಾಪನಾ : 2
ಪೋಲಿಸ್ : 2
——————————-
ಒಟ್ಟು : 34
——————————
ಇದೇ ದಿನ ಪ್ರಥಮ ಬಾರಿ ರಕ್ತದಾನ ಮಾಡಿದ ದಾನಿಗಳ ಸಂಖ್ಯೆ : 7

ರಕ್ತದಾನ ಮಾಡಿದ, ಸಹಕರಿಸಿದ ಎಲ್ಲಾ ಸಹೃದಯಿ ಬಂಧುಗಳಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.
🙏🙏🙏🙏🙏🙏🙏🙏
ಅಧ್ಯಕ್ಷರು ಮತ್ತು ಸದಸ್ಯರು ರಾಜ್ಯ ಸರ್ಕಾರಿ ನೌಕರರ ಸಂಘ
ತಾಲ್ಲೂಕು ಶಾಖೆ, ತೀರ್ಥಹಳ್ಳಿ

ವರದಿ.. ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...