ತೀರ್ಥಹಳ್ಳಿ: ನಿನ್ನೆ ಅಂದರೆ 09-08-2023 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಂದೂರು ಕೋಲಿಗೆ ಗ್ರಾಮದ ತೋಟವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ, ಅಶ್ವತ್ ಗೌಡ ಪೊಲೀಸ್ ನಿರೀಕ್ಷಕರು, ಗಾದಿ ಲಿಂಗಪ್ಪ ಗೌಡರ್, ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಅಂದಾಜು ಮೌಲ್ಯ 80,000/- ರೂ ಗಳ, 2 ಕೆಜಿ 164 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರಾದ 1) ಸುನಿಲ್ 34 ವರ್ಷ, ಕೋಲಿಗೆ ಗ್ರಾಮ, ಕೋಣಂದೂರು, ತೀರ್ಥಹಳ್ಳಿ ಮತ್ತು 2) ಕಾರ್ತಿಕ್ 29 ವರ್ಷ, ಕೋಲಿಗೆ ಗ್ರಾಮ, ಕೋಣಂದೂರು, ತೀರ್ಥಹಳ್ಳಿ ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0144/2023 ಕಲಂ 8(a), 20(a) (i) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಗಾಂಜಾದ ಅಮಲಿನಲ್ಲಿ ತೇಲಾಡುತ್ತಿರುವ ಯುವಕರು ಹೆಚ್ಚಾಗಿದ್ದು ಇದರ ಮತ್ತಿನಲ್ಲಿ ಸಾಕಷ್ಟು ಅಪರಾಧಗಳನ್ನು ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯೂ ಸಹ ಸಾಕಷ್ಟು ಶ್ರಮಪಡುತ್ತಿದೆ. ಸ್ಥಳೀಯರು ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಗೆ ಇದರ ಬಗ್ಗೆ ಮಾಹಿತಿ ನೀಡಬೇಕು ಆಗ ಮಾತ್ರ ಇದರ ಸಂಪೂರ್ಣ ನಾಶ ಸಾಧ್ಯ..