Wednesday, April 30, 2025
Google search engine
Homeಸಿನಿಮಾಭರದಿಂದ ಸಾಗುತ್ತಿದೆ "ಬ್ಯಾಂಕ್ ಲೋನ್" ಚಿತ್ರದ ಚಿತ್ರೀಕರಣ, ಈ ಚಿತ್ರದ ವಿಶೇಷತೆ ಏನು ಗೊತ್ತಾ?

ಭರದಿಂದ ಸಾಗುತ್ತಿದೆ “ಬ್ಯಾಂಕ್ ಲೋನ್” ಚಿತ್ರದ ಚಿತ್ರೀಕರಣ, ಈ ಚಿತ್ರದ ವಿಶೇಷತೆ ಏನು ಗೊತ್ತಾ?


  • ಬೆಂಗಳೂರ : ಪ್ರದೀಪ ಸಾಗರ ಮೂವ್ಹೀಸ್ ಬೆಂಗಳೂರ ಇವರ ಮೂರನೇ ಚಲನಚಿತ್ರ ‘ಬ್ಯಾಂಕ್ ಲೋನ್’ ಕನ್ನಡ ಚಲನಚಿತ್ರ ದ ಚಿತ್ರೀಕರಣ ಕಳೆದ ಹದಿನೈದು ದಿನಗಳಿಂದ ಭರದಿಂದ ಸಾಗಿದೆ .
    ನಿರ್ಮಾಪಕ ಪ್ರದೀಪ ಸೋನ್ಸ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಬೆಂಗಳೂರು, ಬೆಳ್ಳೂರ ಕ್ರಾಸ್, ಮಂಥನಹಳ್ಳಿ, ಕುಶಾಲನಗರದ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸಿದ್ದಾರಲ್ಲದೆ ‘ಸಾಲ ಸಾಲ ಸಾಲ ಸಾಲದಯ್ಯ ,ಕಾಲ ಕೊಟ್ಟ ಸಾಲ ನಮಗೆ ಸಾಲದಯ್ಯ ‘ ಎನ್ನುವ ಹಾಡಿನ ಚಿತ್ರೀಕರಣವನ್ನು ಖ್ಯಾತ ಜನಪ್ರಿಯ ಜಾನಪದ ಗಾಯಕ ಗುರುರಾಜ ಹೊಸಕೋಟಿ ಅವರ ಆಭಿನಯದಲ್ಲಿ ಮಂಥನಹಳ್ಳಿ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು ಇದೀಗ ಇನ್ನೊಂದು ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೊನ್ನಾವರದಲ್ಲಿ ಬೀಡುಬಿಟ್ಟಿದೆ.
  • ಬೆಂಗಳೂರಿನಂತಹ ನಗರದಲ್ಲಿ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕಲು ಎದುರಾಗುವ ಅಡಚಣೆಗಳ ಬಗ್ಗೆ ಬೆಳಕು ಚೆಲ್ಲಲಿದೆ .ಇದೊಂದು ಬದುಕಿನ ಪಯಣದ ಚಿತ್ರವಾಗಿದ್ದು ಹಲವಾರು ತಿರುವುಗಳನ್ನು ಒಳಗೊಂಡರೂ ತಮ್ಮ ಗುರಿಯನ್ನು ಹೇಗೆ ಮುಟ್ಟುತ್ತಾರೆ ಎಂಬ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಚಿತ್ರ ಪ್ರೇಕ್ಷಕರ ಮನ ತಟ್ಟುತ್ತದೆ . ಈ ಚಿತ್ರ ಕೂಡ ಯಶಸ್ಸು ಕಾಣುವದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ನಾವು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ಶೇ. ೮೦% ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ .
  • ಶಿವಕುಮಾರ್ ಆರಾಧ್ಯ, ಗುರುರಾಜ ಹೊಸಕೋಟಿ ಅವರೂ ತುಂಬಾ ಮನೋಜ್ಞವಾಗಿ ಆಭಿನಯಿಸಿದ್ದಾರೆ. ನಾವು ಅಂದುಕೊಂಡಂತೆ ಈ ಚಿತ್ರದ ಚಿತ್ರೀಕರಣ ೨೫ ರಿಂದ ೩೦ ದಿನಗಳೊಳಗೆ ಸಂಪೂರ್ಣ ಮುಗಿಸುತ್ತಿದ್ದೇವೆ ಎಂದು ನಿರ್ದೇಶಕಿದ್ವಯರಾದ ಪೂರ್ಣಶ್ರೀ ಆರ್,ರಶ್ಮಿ ಎಸ್ ತಿಳಿಸಿದ್ದಾರೆ.
  • ‘ಇದು ನನ್ನ ನಿರ್ಮಾಣದ ಮೂರನೇ ಚಿತ್ರವಾಗಿದೆ. ನಿರ್ದೇಶಕರು ಕಥೆ ಹೇಳಿದಾಗ ಇಷ್ಟ ಆಯ್ತು. ಇಂಥ ಘಟನೆಗಳೂ ನಿಜಜೀವನದಲ್ಲಿ ನಡೆದದ್ದು ಕೇಳಿದ್ದೆ ಅದನ್ನೇ ಇದೀಗ ತೆರೆಗೆ ತರುತ್ತಿರುವೆ’ ಎಂದು ನಿರ್ಮಾಪಕ ಪ್ರದೀಪ್ ಸೋನ್ಸ್ ತಿಳಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಪ್ರದೀಪ ಸೋನ್ಸ್ , ಮತ್ತೊಬ್ಬ ಯುವ ನಾಯಕ ನವರಸ ನಟನಾ ಅಕಾಡೆಮಿಯ ಮನೋಜ್ ಶೆಟ್ಟಿ, ಸೇರಾ (ಟೆಂಟ್ ಸಿನಿಮಾ), ಲಿಖಿತಾ ಅನಂತ್, ಶಿವಕುಮಾರ್ ಆರಾಧ್ಯ, ಕಾವ್ಯ,ಗದಗ ನಗರದ ಅವಿನಾಶ್ ಗಂಜಿಹಾಳ, ಮುರುಳೀಧರ್ ಮುಂತಾದವರಿದ್ದಾರೆ.
  • ಛಾಯಾಗ್ರಹಣ ಶೇಖರ್, ಚಿತ್ರಕಥೆ, ಸಂಕಲನ ,ತಾಂತ್ರಿಕ ನಿರ್ದೇಶನ ಟಿ. ಮುತ್ತುರಾಜು, ಸಂಭಾಷಣೆಯನ್ನು ಶ್ರೀದೇವಿ ಮಂಜುನಾಥ , ಸಾಹಿತ್ಯದ ಜೊತೆಗೆ ಸಂಗೀತವನ್ನು ವಿ.ಮನೋಹರ ನೀಡಿದ್ದು, ಪ್ರಸಾದನ ಮೋಹನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ , ಸಹನಿರ್ದೇಶಕರಾಗಿ ಸತೀಶ ಜೋಶಿ, ನಿರ್ದೇಶನವನ್ನು ಈ ಹಿಂದೆ ‘ಶ್ರೀ ಕಬ್ಬಾಳಮ್ಮ ಮಹಿಮೆ’ ಪೌರಾಣಿಕ ಸಿನೇಮಾ ಹಾಗೂ ಈಗಾಗಲೇ ಸುಮಾರು ೯೭ ರಾಷ್ಟ್ರೀಯ ,ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದು ಇನ್ನೂ ಹಲವಷ್ಟು ಪ್ರಶಸ್ತಿಗಳ ನಿರೀಕ್ಷೆಯಲ್ಲಿರುವ ‘ಮನೆ” ಕಲಾತ್ಮಕ ಚಲನಚಿತ್ರದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್, ಮತ್ತು ರಶ್ಮೀ ಎಸ್ ನಿರ್ದೇಶನ ಮಾಡುತ್ತಿದ್ದಾರೆ.
    ****

-ಡಾ.ಪ್ರಭು… ಗಂಜಿಹಾಳ-9448775346..

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...