Tuesday, April 29, 2025
Google search engine
Homeರಾಜ್ಯಶಿವಮೊಗ್ಗದಲ್ಲಿ ಲಂಕೇಶ್ ಮೊಮ್ಮಗನ ಚಿತ್ರದ ಬಗ್ಗೆ ಮಾತು ದರ್ಶನ್ ಬಗ್ಗೆ ನೋ ಕಾಮೆಂಟ್ಸ್ ಎಂದ ಇಂದ್ರಜಿತ್..!

ಶಿವಮೊಗ್ಗದಲ್ಲಿ ಲಂಕೇಶ್ ಮೊಮ್ಮಗನ ಚಿತ್ರದ ಬಗ್ಗೆ ಮಾತು ದರ್ಶನ್ ಬಗ್ಗೆ ನೋ ಕಾಮೆಂಟ್ಸ್ ಎಂದ ಇಂದ್ರಜಿತ್..!

ಶಿವಮೊಗ್ಗ: ಖ್ಯಾತ ಪತ್ರಕರ್ತ ದಿವಂಗತ ಪಿ ಲಂಕೇಶ್ ಅವರ ಪುತ್ರ ಖ್ಯಾತ ನಿರ್ದೇಶಕ ನಿರ್ಮಾಪಕ ಪತ್ರಕರ್ತರು ಸಂಪಾದಕರು ಆಗಿರುವ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ಗೌರಿ ಚಲನ ಚಿತ್ರದ ಪ್ರಮೋಷನ್ ಗಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ಪುತ್ರ ಸಮರ್ಜಿತ್ ಲಂಕೇಶ್, ನಾಯಕ ನಟಿ ಸಾನಿಯಾ ಅಯ್ಯರ್ ನಗರಕ್ಕೆ ಆಗಮಿಸಿದ್ದರು.

ಚಿತ್ರದ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್   ಗೌರಿ ಎಂಬ ಹೆಸರಿನ ಚಲನಚಿತ್ರ ನಿರ್ಮಾಣ ಮಾಡಿದ್ದೇವೆ . ಇನ್ನೇನು ಬಿಡುಗಡೆಯ ಹಂತಕ್ಕೆ ಬಂದಿದೆ ಸಿನಿಮಾ ಒಂದು ದೊಡ್ಡ ಬಜೆಟ್ಟಿನ ಚಿತ್ರವಾಗಿದ್ದು ಯಾವುದಕ್ಕೂ ಇದರಲ್ಲಿ ಕೊರತೆ ಇಲ್ಲ ಐದು ಜನ ಸಂಗೀತ ನಿರ್ದೇಶಕರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಮಾಥ್ಯು. ಕೆ ಕಲ್ಯಾಣ್, ಸೇರಿದಂತೆ ಐದು ಜನ ಸಂಗೀತ ನಿರ್ದೇಶಕರಿದ್ದಾರೆ.

ಸಾನಿಯಾ ಅಯ್ಯರ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಥಿಯೇಟರ್ ಸ್ಟಡಿಸ್ ಮಾಡಿದ್ದಾರೆ. ಇಬ್ಬರು ಕನ್ನಡ ಪ್ರತಿಭೆಗಳಿದ್ದಾರೆ. ಉಳಿದಂತೆ ಸೀನಿರಂಗದ ಖ್ಯಾತ ಕಲಾವಿದರಾದ ಪ್ರಿಯಾಂಕ ಉಪೇಂದ್ರ, ಲೂಸ್ ಮಾದ, ನೀನಾಸಂ ಸುಧೀರ್, ಅಕುಲ್ ಬಾಲಾಜಿ, ಚಂದು ಗೌಡ ಮೊದಲಾದವರು ಅಭಿನಯಿಸಿದ್ದಾರೆ ಎಂದರು.

ಅಕ್ಕನ ನೆನಪಿಗಾಗಿ ಗೌರಿ ಹೆಸರು ಅಷ್ಟೇ ವಿನಃ ಅಕ್ಕನ ಕುರಿತು ಚಿತ್ರವಲ್ಲ :

ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ. ಅಕ್ಕ ಗೌರಿಯ ನೆನಪಿಗಾಗಿ ಸಿನಿಮಾಕ್ಕೆ ಅದೇ ಹೆಸರು ಇಡಲಾಗಿದೆ. ಗೌರಿಯ ನೆನಪಿಗಾಗಿ ಆರಂಭಿಸಲಾಗಿದೆ ವಿನಃ ಇದು ಗೌರಿ ಸಿದ್ದಾಂತದ ಸಿನಿಮಾ ಅಲ್ಲ. ಕನ್ನಡಕ್ಕೆ ಸೀಮಿತವಾಗಿದೆ. ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಯುವಕರು ಮೇಲೆ ಒತ್ತಡ ಹಾಕಬಾರದು ಎಂಬ ಕಾರಣಕ್ಕೆ ಕನ್ನಡಕ್ಕೆ ಸೀಮಿತವಿಡಲಾಗಿದೆ ಎಂದರು.

ಪ್ಯಾನ್ ಇಂಡಿಯಾ ಸಿನಿಮಾ ರಚಿಸಿದರೆ ಹೊರೆಯಾಗಲಿದೆ. ಅದಕ್ಕೆ ತಕ್ಕಂತ ಜಾಹೀರಾತು ಹೊರೆಯಾಗಲಿದೆ. ಕಮರ್ಷಿಯಲ್ ಆದರೂ ಒಳ್ಳೆಯ ಮೆಸೇಜ್ ಇದೆ. ಗೌರಿ ತತ್ವದ ಮೇಲೆ ಸಿನಿಮಾ ಮಾಡುತ್ತಿಲ್ಲ. ಗೌರಿಯ ಕಥೆಯಲ್ಲ. ಆದರೆ ಅಕ್ಕನ ನೆನಪಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದರು.

ನೈಜ್ಯ ಘಟನೆ ಆಧಾರಿತ ಚಿತ್ರ :

ನೈಜ ಘಟನೆಯ ಸಿನಿಮಾ ಇದಾಗಿದೆ. ಸಿನಿಮಾ ಕಥೆಯ ವಿಷಯದಲ್ಲಿ ಗೆದ್ದಿದ್ದೀನಿ ಸೋತಿದ್ದೀನಿ, ಆದರೆ ಗುಣಮಟ್ಟದಲ್ಲಿ ಸೋತಿಲ್ಲ. ನಮಗೆ ವಿದೇಶದ ಖರ್ಚು ರಾಜ್ಯದಲ್ಲಿ ಎರಡು ಶೂಟಿಂಗ್ ಮಾಡಬಹುದು. ಹಾಗಾಗಿ ವಿದೇಶದಲ್ಲಿ ಶೂಟಿಂಗ್ ಮಾಡಿಲ್ಲ. ಕಥೆಗೆ ವಿದೇಶಕ್ಕೆ ಹೋಗಿ ಶೂಟಿಂಗ್ ನ ಅವಶ್ಯಕತೆ ಇರಲಿಲ್ಲವೆಂದರು.

ನಟ ಸಮರ್ಜಿತ್ ಲಂಕೇಶ್ :


ಚಿಕ್ಕ ವಯಸ್ಸಿನಿಂದ ಸಿನಿಮಾ ಇಂಡಸ್ಟ್ರೀಸ್ ಹೆಚ್ಚು ಪ್ರೀತಿ. ಸುದೀಪ್ ಮತ್ತು ನನ್ನ ತಂದೆಯ ಸಿನಿಮಾಗಳ ಪ್ರೇರಣೆ. ಯೋಗರಾಜ್ ಭಟ್ ರವರ ಗರಡಿ ಮತ್ತು ಕರಟಕಧಮನಕ ಸಿನಿಮಾದಲ್ಲಿ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಸಿಸ್ಟೆಂಟ್ ನೃತ್ಯ ನಿರ್ದೇಶಕರಾಗಿದ್ದೇನೆ. ಪಲ್ಲವಿ ಮತ್ತು ಎಲ್ಲಿಂದಲೋ ಬಂದವರು ಸಿನಿಮಾವನ್ನ ಅತ್ತೆ ಜೊತೆ ನೋಡಿದ್ದ ನೆನಪನ್ನ ಮೆಲಕು  ಹಾಕುವುದರ ಜೊತೆಗೆ  ಮತ್ತು ದಿವಂಗತ ಅಪ್ಪು  ಸಾರ್ ಮತ್ತು ಸುದೀಪ್ ನನಗೆ ಇನ್ಸಪರೇಷನ್ ಎಂದು ಹೇಳಿದರು.

ನಾಯಕ ನಟಿ ಸಾನಿಯಾ ಅಯ್ಯರ್ :


ನಟಿ ಸಾನಿಯಾ ಅಯ್ಯರ್ ಮಾತನಾಡಿ, ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಿರುವುದು ಖುಷಿಯಾಗಿದೆ. ಸಮರ್ಜಿತ್ ಇಡೀ ತಂಡದಲ್ಲಿ ಕೆಲಸ ಮಾಡುವಾಗ ಕುಟುಂಬಸ್ಥಳು ಎಂಬಂತೆ ಟ್ರೀಟ್ ಸಿಕ್ಕಿದೆ. ಸಮರ್ಜಿತ್ ನೋಡಿದಾಗ ಅಪ್ಪು ಸಾರ್ ನೆನಪಾಗುತ್ತದೆ.

ಪಾತ್ರಕ್ಕಾಗಿ ಕಲಿಯಬೇಕಾದ ಅಂಶ ಸಿನಿಮಾದಲ್ಲಿದೆ. ಇಂದ್ರಜಿತ್ ಸಾರ್ ಇಲ್ಲವಾದರೆ ನನ್ನ ಕನಸು ಚಿಗುರು ಒಡೆಯುತ್ತಿರಲಿಲ್ಲ. ನಾನು ಧಾರವಾಹಿಯಿಂದ ಜರ್ನಿ ಆರಂಭಿಸಿದೆ ಸಿನಿಮಾದಲ್ಲಿ ತೆರೆದುಕೊಳ್ಳಲು ಅವಕಾಶ ಸಿಕ್ಕಿದೆ ಎಂದು ಬಣ್ಣಿಸಿದ ಅವರು ತಾವೇ ಬರೆದ ಕಾವ್ಯವನ್ನೂ ಹೇಳಿದ್ದು ಗಮನಾರ್ಹವಾಗಿತ್ತು.‌

ದರ್ಶನ್ ಬಗ್ಗೆ ನೋ ಕಾಮೆಂಟ್ಸ್ ಎಂದ ಇಂದ್ರಜಿತ್:


ದರ್ಶನ್ ಪ್ರಕರಣ ತನಿಖೆ ಹಂತದಲ್ಲಿದೆ. ನಾನು ಕಾಮೆಂಟ್ಸ್ ಹೇಳುವುದು ಸರಿಯಲ್ಲ.
ಕಾಮೆಂಟ್ಸ್ ಗೆ ಜಗತ್ತಿನ ಡೊಂಕು ತಿದ್ದುವ ಬಸಣ್ಣನವರ ವಚನ ಹೇಳಿ ಕಾಮೆಂಟ್ಸ್ ಮಾಡಲು ನಿರಾಕರಿಸಿದರು.

ಕನ್ನಡ ಸಿನಿಮಾ ರಂಗ ಇನ್ನು ಬೆಳೆಯಬೇಕು
ತಾಂತ್ರಿಕವಾಗಿ ಮುಂದುವರೆದಿದೆ. ನಟ ನಟಿಯರು, ಛಾಯಾಗ್ರಹಕರು, ಕಥೆಗಳಲ್ಲಿ ವಿಫಲರಾಗಿದ್ದೇವೆ. ಕಥೆಯ ಗುಣಮಟ್ಟ ಹೆಚ್ಚಿಸಬೇಕಿದೆ. 70 ರ ದಶಕದಲ್ಲಿ ಡಾ. ರಾಜ್, ಲಂಕೇಶ್, ಪುಟ್ಟಣ್ಣ ಕಣಗಲ್ ಅವರು ಕನ್ಬಡ ಸಿನಿಮಾ ಇಂಡಸ್ಟ್ರೀಸ್ ನಲ್ಲಿ ಕ್ರಾಂತಿಮಾಡಿದ್ದಾರೆ. ಸಿನಿಮಾ ನಿರ್ದೇಶಕರ ಮಾಧ್ಯಮವಾದುದ್ದರಿಂದ ಅವರನ್ನ ಬೆಳೆಸಬೇಕಿದೆ.

ಸಾಹಿತಿಗಳು ಸಿನಿಮಾದಿಂದ ದೂರವಾಗಿದ್ದಾರೆ. ಅವರಿಗೆ ಉತ್ತಮ ಸಂಭಾವನೆ ನೀಡಿದಾಗ ಬರುತ್ತಾರೆ. ಹಳ್ಳಿಗಳಿಂದ ಬಂದವರಿಗೆ ಪ್ರೋತ್ಸಹಿಸಬೇಕಿದೆ. ಸಿನಿಮಾ ರಂಗದಲ್ಲಿ ಥಿಯೇಟರ್ ಗಳು ಮುಚ್ಚು ಹೋಗುತ್ತಿವೆ. ಇದು ಬದಲಾವಣೆಯ ಕಾಲವಾಗಿದೆ. ಡಿಜಿಟಲ್ ಮೀಡಿಯಾವಾದುದರಿಂದ ಇದನ್ನ ಎದುರಿಸಲೇ ಬೇಕಿದೆ ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಾಯಕನಟ ಸಮರ್ಜಿತ್ ಲಂಕೇಶ್ ಹಾಗೂ ನಟಿ ಸಾನಿಯಾ ಅಯ್ಯರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...