Sunday, June 15, 2025
Google search engine
Homeರಾಜ್ಯಉಪನ್ಯಾಸ ಭಾಗ 2... ಪ್ರತಿಭಟನೆಯೂ ಎರಡು.

ಉಪನ್ಯಾಸ ಭಾಗ 2… ಪ್ರತಿಭಟನೆಯೂ ಎರಡು.

ಶಿವಮೊಗ್ಗ : ನಗರದ ಬಿ.ಹೆಚ್ ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ ಎರಡನೇ ದಿನದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಜೆ ವೇಳೆಯಲ್ಲಿ ಪ್ರತಿಭಟನೆಯ ಗಾಳಿ ಬೀಸಿತು.

ಜಿಲ್ಲಾ ಕಾಂಗ್ರೆಸ್ ನಿಂದ ಕಾರ್ಯಕರ್ತರು ಕರ್ನಾಟಕ ಸಂಘ ಬಳಿ ಸೂಲಿಬೆಲೆ ವಿರುದ್ಧ ಘೋಷಣೆ ಕೂಗುತ್ತಾ ಕರ್ನಾಟಕ ಸಂಘ ಬಳಿ ಆಗಮಿಸಿದರು. ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪೊರಕೆ ಹಿಡಿದು ದಿಕ್ಕಾರ ಕೂಗಿದರು.

ಪ್ರತಿಭಟಿಸಲು ಬಂದವರು ಪ್ರತಿಭಟನೆ ಎದುರಿಸಿದರು.


ಕಾರ್ಯಕ್ರಮದ ರುವಾರಿಗಳಾದ ನಮೋ ಬ್ರಿಗೇಡ್ ತಂಡದವರು ಕರ್ನಾಟಕ ಸಂಘದ ಹೊರ ಬಂದು ಕಾಂಗ್ರೆಸ್ ಪಕ್ಷದ ವಿರುದ್ಧ ದಿಕ್ಕಾರ ಕೂಗಲು ಆರಂಭಿಸಿದರು.

ಎರಡೂ ಕಡೆಯವರ ಪರಸ್ಪರ ಪ್ರತಿಭಟನೆ ಘೋಷಣೆಗಳು ಸಾರ್ವಜನಿಕರನ್ನು ಕರ್ನಾಟಕ ಸಂಘದ ಮುಂದೆ ನಿಲ್ಲುವಂತೆ ಮಾಡಿತ್ತು.

ಮೋದಿ…ಮೋದಿ…ಮೋದಿ


ಕಾಂಗ್ರೆಸ್ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೋಲೀಸರು ಬಸ್ ನಲ್ಲಿ ಕಾರ್ಯಕರ್ತರನ್ನು ತೆಗೆದುಕೊಂಡು ಸ್ಥಳಾಂತರಿಸುವಾಗ ರಸ್ತೆ ದಾಟಿ ಬಸ್ ಬಳಿ ಬಂದ ನಮೋ ಬ್ರಿಗೇಡ್ ಹಾಗು ಬಿಜೆಪಿ ಕಾರ್ಯಕರ್ತರು ಬಸ್ ಸಾಗುವಾಗ ಡಿವೈಡರ್ ಮೇಲೆ ನಿಂತು ಮೋದಿ ಜೈಕಾರದ ಘೋಷಣೆಗಳನ್ನು ಹಾಕಿದರು.

ಪ್ರತಿಭಟನಾ ಸ್ಥಳಕ್ಕೆ ಗೋ ಮೂತ್ರ ಸಿಂಪಡಿಸಿದರು.

ಎರಡೂ ಕಡೆಯವರ ಪ್ರತಿಭಟನೆ ತಣ್ಣಗಾದ ನಂತರ ನಮೋ ಬ್ರಿಗೇಡ್ ನ ಅಭಿಮಾನಿ ಒಬ್ಬ ಕಾಂಗ್ರೆಸ್ ಪ್ರತಿಭಟನೆ ಮಾಡಿದ ಸ್ಥಳಕ್ಕೆಲ್ಲಾ ಗೋಮೂತ್ರ ಹಾಕಿದರು.

ವರದಿ – ವಿನಯ್ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!