Wednesday, April 30, 2025
Google search engine
Homeರಾಜ್ಯಮೈಸೂರು ಕಾರಾಗೃಹದಲ್ಲಿ ಖತರ್ನಾಕ್ ಕೈದಿ ಹತ್ತಿರ ಸಿಮ್ ಕಾರ್ಡ್ ಮೆಮೊರಿ ಕಾರ್ಡ್ ಪತ್ತೆ..!

ಮೈಸೂರು ಕಾರಾಗೃಹದಲ್ಲಿ ಖತರ್ನಾಕ್ ಕೈದಿ ಹತ್ತಿರ ಸಿಮ್ ಕಾರ್ಡ್ ಮೆಮೊರಿ ಕಾರ್ಡ್ ಪತ್ತೆ..!

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇತ್ತೀಚಿಗಷ್ಟೇ ಕೈದಿಗಳು ಬಡದಾಡಿಕೊಂಡಿದ್ದರು ಅದು ಮಾಸುವ ಮುಂಚೆ ಮತ್ತೆ ಕೈದಿ ಒಬ್ಬನ ಹತ್ತಿರ ಮೆಮೊರಿ ಕಾರ್ಡ್ ಸಿಮ್ ಕಾರ್ಡ್ ಪತ್ತೆಯಾಗಿದೆ.

ದರೋಡೆ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದಿದ್ದ ವಿಚಾರಣಾಧೀನ ಖೈದಿ ಕಿರಣ್ ಎಂಬಾತನನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ದಾಖಲಿಸಲು ಕರೆತಂದ ವೇಳೆ ಆತನ ಚಪ್ಪಲಿಯಲ್ಲಿ ಒಂದು ಸಿಮ್ ಕಾರ್ಡ್, ಮೆಮೋರಿ ಕಾರ್ಡ್ ಮತ್ತು ಪ್ಯಾಂಟ್ ಒಳ ಜೇಬಿನಲ್ಲಿ ಒಂದು ಸಿಮ್ ಕಾರ್ಡ್ ಪತ್ತೆಯಾಗಿದೆ.    ಈತನನ್ನು ಕೇಂದ್ರ ಕಾರಾಗೃಹಕ್ಕೆ ದಾಖಲಿಸುವ ವೇಳೆ ಮುಖ್ಯ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಸಿಮ್ ಮತ್ತು ಮೆಮೋರಿಕಾರ್ಡ್ ಪತ್ತೆಯಾಗಿದೆ.

ಚಪ್ಪಲಿಯಲ್ಲಿ ಸಿಮ್ ಕಾರ್ಡ್ ಮೆಮೊರಿ ಕಾರ್ಡ್ ಇಟ್ಟು ಕೊಲೆಗೆ ಹಾಕಿಸಿಕೊಂಡು ಬಂದಿದ್ದ :

ಸಿಮ್ ಕಾರ್ಡ್,ಮೆಮೋರಿ ಕಾರ್ಡ್ ಇಟ್ಟು ನಂತರ ಹೊಲಿಗೆ ಹಾಕಿಕೊಂಡು ಕಾರಾಗೃಹ ಪ್ರವೇಶಿಸುವ ಪ್ರಯತ್ನ ಮಾಡಿದ್ದನು.

ಈತನ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ   ದರೋಡೆ ಪ್ರಕರಣ ಆರೋಪವಿತ್ತು ಈ ಸಂಬಂಧ ಬಂಧಿಸಿದ್ದ ಲಷ್ಕರ್ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿತ್ತು.

ಆರೋಪಿಯನ್ನ ಕಾರಾಗೃಹಕ್ಕೆ ದಾಖಲಿಸಲು ಲಷ್ಕರ್ ಠಾಣೆ ಸಿಬ್ಬಂದಿ ಚಿನ್ನಪ್ಪ ಕಲ್ಲೊಳ್ಳಿ ಹಾಗೂ ಮಂಜುನಾಥ್ ಕರೆತಂದಿದ್ದರು. ದಾಖಲಿಸುವಾಗ  ನಿಯಮಾನುಸಾರ ತಪಾಸಣೆ ನಡೆಸುವ ವೇಳೆ ಕಿರಣ್ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಚಪ್ಪಲಿಯಲ್ಲಿ ಮರೆಮಾಚಿ ತಂದಿರುವುದು ಬೆಳಕಿಗೆ ಬಂದಿದೆ. ಎರಡು ಸಿಮ್ ಕಾರ್ಡ್ ಹಾಗೂ ಒಂದು ಮೆಮೋರಿ ಕಾರ್ಡ್ ವಶಪಡಿಸಿಕೊಂಡ ಕಾರಾಗೃಹ ಪೊಲೀಸರು ಈ ಸಂಬಂಧ ಕಿರಣ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...