Wednesday, April 30, 2025
Google search engine
HomeಬಿಜೆಪಿShivamogga breaking: ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ಕೋರ್ಟ್ ಮರೆಹೋದ ಬಿಜೆಪಿ ಜಿಲ್ಲಾಧ್ಯಕ್ಷ..!ಕಾಲಾವಕಾಶ ಕೇಳಿದ ಈಶ್ವರಪ್ಪ..!...

Shivamogga breaking: ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ಕೋರ್ಟ್ ಮರೆಹೋದ ಬಿಜೆಪಿ ಜಿಲ್ಲಾಧ್ಯಕ್ಷ..!ಕಾಲಾವಕಾಶ ಕೇಳಿದ ಈಶ್ವರಪ್ಪ..! ಮುಂದೇನು..?

ಶಿವಮೊಗ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ನಡೆಯುತ್ತಿದ್ದು ಮೋದಿ ಭಾವಚಿತ್ರ ಬಳಸಲು ಈಶ್ವರಪ್ಪ ಯಾರು ಮೋದಿ ಬಿಜೆಪಿಯಿಂದ ಪ್ರಧಾನಿಯಾಗಿರುವುದು  ಅವರ ಭಾವಚಿತ್ರ ಬಳಸಲು ಬಿಜೆಪಿಗೆ ಮಾತ್ರ ಅವಕಾಶವಿದೆ ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಗೆ ಬೆಂಬಲಿಸದೆ ಚುನಾವಣೆಯಲ್ಲಿ ನಿಂತಿರುವುದರಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಈಶ್ವರಪ್ಪ ಬಳಸಲು ಅವಕಾಶವಿಲ್ಲ ಆದ್ದರಿಂದ ನ್ಯಾಯಾಲಯ ಈಶ್ವರಪ್ಪನವರಿಗೆ ಮೋದಿ ಭಾವಚಿತ್ರ ಬಳಸದಂತೆ ನಿರ್ಬಂಧ ಹೇರಬೇಕು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ರವರು ನ್ಯಾಯಾಲಯದ ಮರೆಹೋಗಿದ್ದಾರೆ.

ಖುದ್ದು ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ..!

ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ ಮೋದಿ ಭಾವಚಿತ್ರ ತೆಗೆಯುವಂತೆ ಮನವಿ ಸಲ್ಲಿಸಿರುವ ಜಿಲ್ಲಾಧ್ಯಕ್ಷರ ಮನವಿಗೆ ನ್ಯಾಯಾಲಯ ಈಶ್ವರಪ್ಪನವರ ಉತ್ತರ ಕೇಳಿದ್ದಕ್ಕೆ ಈಶ್ವರಪ್ಪ ಸಮಯ ಅವಕಾಶ ಕೇಳಿದ್ದಾರೆ.

ಇದೇ ತಿಂಗಳ 18ಕ್ಕೆ ದಿನಾಂಕ ನಿಗದಿ ಪಡಿಸಿದ ನ್ಯಾಯಾಲಯ :

ಇದೇ ತಿಂಗಳ 18ನೇ ತಾರೀಖು ನ್ಯಾಯಲಯಕ್ಕೆ ತಮ್ಮ ಉತ್ತರ ತಿಳಿಸುವಂತೆ ನ್ಯಾಯಾಲಯ ಈಶ್ವರಪ್ಪನವರಿಗೆ ಸಮಯ ಅವಕಾಶ ನೀಡಿದೆ.

ಮುಂದೇನು..?

ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಮೋದಿ ಭಾವಚಿತ್ರ ಹಾಕಿಕೊಳ್ಳಲು ಕಾನೂನಿನಲ್ಲಿ ಈಶ್ವರಪ್ಪನವರಿಗೆ ಅವಕಾಶವಿದೆಯಾ..? ಈಶ್ವರಪ್ಪನವರು ಮೋದಿ ಭಾವಚಿತ್ರವನ್ನು ಹಾಕಿಕೊಂಡು ತಮ್ಮ ಚುನಾವಣಾ ಪ್ರಚಾರ ಮುಂದುವರಿಸಬಹುದಾ..? ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡುತ್ತಾ..?! ಅಥವಾ ಬಿಜೆಪಿ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿ ಈಶ್ವರಪ್ಪನವರು ಮೋದಿ ಭಾವಚಿತ್ರವನ್ನು ಹಾಕಿಕೊಳ್ಳದಂತೆ ಆದೇಶ ನೀಡುತ್ತಾ..? ಎನ್ನುವ ಕುತೂಹಲ ಕೆರಳಿಸಿದ್ದು ಇದೇ ತಿಂಗಳ 18ನೇ ತಾರೀಖು ಪ್ರಕರಣ ಒಂದು ಹಂತದ ತಿರುವು ಪಡೆಯುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...