Wednesday, April 30, 2025
Google search engine
Homeಶಿವಮೊಗ್ಗಪಾತಕಿಗಳಿಗೆ ಶಿವಮೊಗ್ಗ ಎಸ್ ಪಿ ಖಡಕ್ ವಾರ್ನಿಂಗ್ ಬಾಲ ಬಿಚ್ಚಿದ್ರೆ ಹುಷಾರ್ ..! ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ...

ಪಾತಕಿಗಳಿಗೆ ಶಿವಮೊಗ್ಗ ಎಸ್ ಪಿ ಖಡಕ್ ವಾರ್ನಿಂಗ್ ಬಾಲ ಬಿಚ್ಚಿದ್ರೆ ಹುಷಾರ್ ..! ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಕಾಲಿಗೆ ಬಿತ್ತು ಗುಂಡೇಟು ..!

ಶಿವಮೊಗ್ಗ: ಇತ್ತೀಚಿಗೆ ನಗರದ ಲಷ್ಕರ್ ಮೊಹಲ್ಲಾ ದಲ್ಲಿ ಪುರಾತನ ಪಾತಕಿ ಯಾಸಿನ್ ಖುರೇಷಿ ಹಾಗೂ ಕೆ ಆರ್ ಪುರಂ ನ ಪಾತಕಿ  ಆದಿಲ್ ಗುಂಪುಗಳ ನಡುವೆ  ಗ್ಯಾಂಗ್ ವಾರ್ ನಡೆದಿತ್ತು.

ಯಾಸಿನ್ ಅನ್ನು ಹೊಡೆಯಲು ಬಂದ ಆದಿಲ್ ಗುಂಪು ಯಾಸಿನ್ ಗೆ  ಮಾರಕಾಸ್ತ್ರಗಳಿಂದ ಹೂಡೆದು ಎಸ್ಕೇಪ್ ಆಗುತ್ತಿದ್ದಾಗ ಯಾಸೀನ್ ಕಡೆಯ ಹುಡುಗರು ಅವರ ಮೇಲೆ ಅಟ್ಯಾಕ್ ಮಾಡಿದರು ಈ ಅಟ್ಯಾಕ್ ನಲ್ಲಿ ಆದಿಲ್ ಗುಂಪಿನ ಇಬ್ಬರು ಬೈಕಿನಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದರು  ಆಗ ಯಾಸಿನ್ ಕಡೆಯ ಹುಡುಗರು ಅವರಿಗೆ ಮಾರಕಾಸ್ತ್ರಗಳಿಂದ ಹೊಡೆದು ಅವರ ಮೇಲೆ ಕಲ್ಲು ಎತ್ತಾಕಿದ್ದರು.

ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರು ಸೇಬು ಮತ್ತು ಗೌಸ್ ಎನ್ನುವವರು ಮೃತಪಟ್ಟವರಾಗಿದ್ದರು ಇದರಲ್ಲಿ ಶೇಬು ಎನ್ನುವವನು ಕುಖ್ಯಾತ ಪಾತಕಿ ಹಂದಿ ಅಣ್ಣಿ ತಮ್ಮ ಗಿರಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ ಇತ್ತ ತೀವ್ರತರದ ಹಲ್ಲೆಗೊಳಗಾಗಿದ್ದ ಯಾಸಿನ್ ಖುರೇಷಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.

ಅಲ್ಲಿಗೆ ಈ ಗ್ಯಾಂಗ್ ವಾರ್ ನಲ್ಲಿ ಮೂರು ಕೊಲೆಗಳು ಆಗಿದ್ದವು.

ಘಟನೆ ನಡೆದು 24 ಗಂಟೆ ಒಳಗೆ ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ ಶಿವಮೊಗ್ಗ ಪೊಲೀಸರು :

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್  ಘಟನೆ ನಡೆದು 24 ಗಂಟೆ ಒಳಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಆದಿಲ್ ಸೇರಿದಂತೆ ಯಾಸಿನ್ ಕಡೆಯ 10 ಹಾಗೂ ಆದಿಲ್ ಕಡೆಯ ಒಂಬತ್ತು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಆರೋಪಿಯನ್ನು ಹಿಡಿಯಲು ವಿಶೇಷ ತಂಡ ರಚನೆ :

ಇನ್ನೊಬ್ಬ ಪ್ರಮುಖ ಆರೋಪಿ ಶೋಯಿಬ್ ಯಾನೆ ಅಂಡ ತಲೆಮರಿಸಿಕೊಂಡಿದ್ದ ಆತನ ಹುಡುಕಾಟದಲ್ಲಿ ಪೊಲೀಸರು ಇದ್ದರು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ವಿಶೇಷ ತಂಡವನ್ನು ರಚಿಸಿದ್ದರು ಆ ತಂಡದಲ್ಲಿ ಹಿಂದೆ ತುಂಗಾ ನಗರದಲ್ಲಿ ರೌಡಿ ನಿಗ್ರಹದಳದ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸ್ತುತ ಮಾಲೂರು ಠಾಣೆಯ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಕುಮಾರ್ ಹಾಗೂ  ನಾಗರಾಜ್ ಅಣ್ಣಪ್ಪ ಎನ್ನುವರು ಇದ್ದರು.

ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಬಿತ್ತು ಗುಂಡೇಟು :

ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ ಶೋಯಿಬ್  ಯಾನೆ ಅಂಡ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಭಾಗದ ಭೀರನಕೆರೆಯಲ್ಲಿ ಇದ್ದಾನೆ ಎಂದು ಸುಳಿವು ಸಿಕ್ಕಿತು ಇದರ ಆದರದ ಮೇಲೆ ಪಿಎಸ್ಐ ಕುಮಾರ್ ತಂಡ ಆರೋಪಿಯನ್ನು ಹಿಡಿಯಲು ಹೋದಾಗ ಆತ ದಪೇದರ್ ಅಣ್ಣಪ್ಪ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆಗ ಪಿಎಸ್ಐ ಕುಮಾರ್ ಶರಣಾಗುವಂತೆ ಒಂದು ಸುತ್ತು ಗುಂಡನ್ನು ಹಾರಿಸಿದರು ಆದರೂ ಆತ ಮಾತು ಕೇಳದೆ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೆ ದಾಳಿ ಮಾಡಲು ಪ್ರಯತ್ನಿಸಿದ ಆಗ ಆತ್ಮ ರಕ್ಷಣೆಗಾಗಿ ಪಿಎಸ್ಐ ಕುಮಾರ್ ತಮ್ಮ ಸೊಂಟದಲ್ಲಿದ್ದ ರಿವಾಲ್ವರ್ ಗೆ ಕೆಲಸ ಕೊಟ್ಟರು ಆರೋಪಿ ಶೋಯಬ್ ಕಾಲಿಗೆ ಬಿತ್ತು ಗುಂಡೇಟು.

ಗಾಯಾಳು ದಪೇದಾರ್ ಅಣ್ಣಪ್ಪ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಶೋಯಿಬ್ ನಗರದ ಮೇಗನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಯಾರು ಈ ಗುಂಡೇಟು ತಿಂದ ಪುಡಿ ರೌಡಿ :

ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಪುಡಿ ರೌಡಿ ಶೋಯಿಬ್ ಒಂದಷ್ಟು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ  ಭಾಗಿಯಾಗಿ ಜೈಲುವಾಸ  ಅನುಭವಿಸಿ ಬಂದಿದ್ದ ಈತ ಆದಿಲ್ ನ  ಪ್ರಮುಖ ಸಹಚರನಾಗಿದ್ದ.

ಶಿವಮೊಗ್ಗ ಎಸ್ ಪಿ ನೀಡಿದರು ರೌಡಿಗಳಿಗೆ ಖಡಕ್ ವಾರ್ನಿಂಗ್ :

ಶಿವಮೊಗ್ಗಕ್ಕೆ ಎಸ್ಪಿ  ಆಗಿ ಬಂದ ನಂತರ ಮಿಥುನ್ ಕುಮಾರ್ ಈ ಪುಂಡರ ವಿಷಯದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದು  ಸಾಕಷ್ಟು ಪ್ರಕರಣಗಳಲ್ಲಿ ಇದೇ ರೀತಿ ಪುಂಡರು ತಪ್ಪಿಸಿಕೊಂಡು ಓಡುತ್ತಿದ್ದಾಗ ಕಾಲಿಗೆ ಗುಂಡೇಟು ತಿಂದಿದ್ದಾರೆ. ಪುಂಡರಿಗೆ ಖಡಕ್ ವಾರ್ನಿಂಗ್ ನೀಡಿರುವ ಎಸ್ ಪಿ ಮಿಥುನ್ ಕುಮಾರ್ ಬಾಲ ಬಿಚ್ಚಿದ್ರೆ ಹುಷಾರ್ ಎನ್ನುವ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ.

ರಘುರಾಜ್ ಹೆಚ್‌ ಕೆ..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...