Sunday, June 15, 2025
Google search engine
Homeಶಿವಮೊಗ್ಗಆರೋಗ್ಯವೈದ್ಯಕೀಯ ಎನ್ನುವುದು ಒಂದು ಸೇವೆಯ ಅಂಗವೇ ಆಗಿದೆ ವೈದ್ಯ ಡಾ.ಗೋಪಾಲಕೃಷ್ಣ ಶಾನ್‌ಭಾಗ್..!

ವೈದ್ಯಕೀಯ ಎನ್ನುವುದು ಒಂದು ಸೇವೆಯ ಅಂಗವೇ ಆಗಿದೆ ವೈದ್ಯ ಡಾ.ಗೋಪಾಲಕೃಷ್ಣ ಶಾನ್‌ಭಾಗ್..!

ನಗರದ ದುರ್ಗಿಗುಡಿಯ ೨ನೇ ಸಮಾನಾಂತರ ರಸ್ತೆಯಲ್ಲಿ ಮಹಾಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ೩ನೇ ವರ್ಷದ ವಾರ್ಷಿಕೋತ್ಸವ ಮೇ ೨೪ರಿಂದ ೨೬ರವರೆಗೆ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಗೋಪಾಲಕೃಷ್ಣ ಶಾನ್‌ಭಾಗ್ ಹೇಳಿದರು.


ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಕೇವಲ ಸೇವೆಯ ಆಧಾರದ ಮೇಲೆ ಪ್ರಾರಂಭವಾಗಿದೆ. ಅದರಲ್ಲೂ ಬಡವರ ಪರವಾಗಿ ನಮ್ಮ ಆಸ್ಪತ್ರೆಯಿದೆ. ಆಸ್ಪತ್ರೆಯ ವೆಚ್ಚ ಕೂಡ ಬಡವರು ಮತ್ತು ಮಧ್ಯಮ ವರ್ಗದವರನ್ನು ಗಣನೆಯಲ್ಲಿಟ್ಟುಕೊಂಡು ನಾವು ಸೇವೆ ಸಲ್ಲಿಸುತ್ತ ಬಂದಿದ್ದೇವೆ. ಹಣ ನಮಗೆ ಮುಖ್ಯವಲ್ಲ ಎಂದರು.


ಆಸ್ಪತ್ರೆಯಲ್ಲಿ ಬಡವರಿಗಾಗಿಯೇ ಒಂದು ವಿಶೇಷ ವಾರ್ಡ್‌ನ್ನು ಕಲ್ಪಿಸಲಾಗಿದೆ. ಇಲ್ಲಿ ಕೇವಲ ದಿನಕ್ಕೆ ೬೦೦ ರೂ.ಗಳು ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಒಂದು ನಾರ್ಮಲ್ ಹೆರಿಗೆಗೆ ಈ ವಾರ್ಡ್‌ನಲ್ಲಿದ್ದಾರೆ ಕೇವಲ ೧೨ ಸಾವಿರದೊಳಗೆ ಖರ್ಚಾಗುತ್ತದೆ ಅಷ್ಟೇ ಎಂದರು.
ಇದಲ್ಲದೆ ವಿಶೇಷವಾಗಿ ಇನ್ನು ೨ ವಾರ್ಡ್‌ಗಳನ್ನು ನಾವು ತೆರೆದಿದ್ದೇವೆ. ಇವು ಮಧ್ಯಮ ವರ್ಗದವರಿಗೆ ಸುಲಭವಾಗಿ ಸಿಗುತ್ತದೆ. ಇದು ಕೂಡ ೨೦ ಸಾವಿರದೊಳಗೆ ಇರುತ್ತದೆ ಎಂದರು.

ವಿಶೇಷ ವಾರ್ಡ್‌ನಲ್ಲಿ ಶಸ್ತ್ರ ಚಿಕಿತ್ಸೆಯೊಂದಿಗೆ ಹೆರಿಗೆಯಾದರೆ ೩೫ ಸಾವಿರ  ತಲುಪುತ್ತದೆ ಎಂದರು.
ಒಟ್ಟಾರೆ ವೈದ್ಯಕೀಯ ಎನ್ನುವುದು ಒಂದು ಸೇವೆಯ ಅಂಗವೇ ಆಗಿದೆ. ಇಂದಿನ ದುಬಾರಿ ಕಾಲದಲ್ಲಿ ನಾವು ಸೇವೆಯನ್ನೇ ಮುಂದಿಟ್ಟುಕೊಂಡು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಇದು ಯಾವ ಆಸ್ಪತ್ರೆಗೂ ಸ್ಪರ್ಧೆಯಲ್ಲ ಎಂದರು.


೩ನೇ ವಾರ್ಷಿಕೋತ್ಸವದ ಅಂಗವಾಗಿ ನಮ್ಮ ಆಸ್ಪತ್ರೆಯಲ್ಲಿ ಮೇ ೨೬ರಂದು ಬೆಳಿಗ್ಗೆ ೧೨ ಗಂಟೆಗೆ ಪ್ರಸೂತಿ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ವೈದ್ಯಕೀಯ ತೀವ್ರ ನಿಗಾ ಘಟಕ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಮತ್ತು ಎಕಾನಮಿ ವಾರ್ಡ್‌ಗಳನ್ನು ಪ್ರಾರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂಜಯ್, ಆಕಾಶ್, ಪುನಿತ್ ಇದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!