Wednesday, April 30, 2025
Google search engine
Homeಶಿವಮೊಗ್ಗಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಾಚರಣೆ ಹೊಸಮನೆಯಲ್ಲಿ ದಾಂದಲೆ ನಡೆಸಿದ ಪುಂಡರು ಜೈಲಿಗೆ..!

ಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಾಚರಣೆ ಹೊಸಮನೆಯಲ್ಲಿ ದಾಂದಲೆ ನಡೆಸಿದ ಪುಂಡರು ಜೈಲಿಗೆ..!

ಶಿವಮೊಗ್ಗ:ಇತ್ತೀಚಿಗೆ ನಗರದ ಹೊಸಮನೆಯ ಮೂರನೇ ಕ್ರಾಸಿನಲ್ಲಿ ತಡರಾತ್ರಿ  ನಿಲ್ಲಿಸಿದ್ದ  ಕಾರುಗಳ ಗ್ಲಾಸ್ ಗಳನ್ನು ಒಡೆದು ದಾಂದಲೆ ನಡೆಸಿದ ಪುಂಡರನ್ನು ಶಿವಮೊಗ್ಗ ಪೊಲೀಸರು ಖಡಕ್ ಕಾರ್ಯಾಚರಣೆ ನಡೆಸುವುದರ ಮೂಲಕ ಸೆರೆಹಿಡಿದಿದ್ದು ಈ ಕೃತ್ಯಗಳಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸುವುದರ ಶಿವಮೊಗ್ಗದಲ್ಲಿ ಈ ತರಹದ ದಾಂದಲೆ ನಡೆಸುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಬಾಲ ಬಿಚ್ಚಿದ್ರೆ ಹುಷಾರ್ ಎನ್ನುವ ಸಂದೇಶವನ್ನು ಶಿವಮೊಗ್ಗ ಪೊಲೀಸರು ನೀಡಿದ್ದಾರೆ.

ಇನ್ನು ಮುಂದೆ ಈ ತರಹದ ಕೃತ್ಯಗಳಲ್ಲಿ ಭಾಗಿಯಾದರೆ ಅಂತವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದು ಇದು ಇಂಥ ಕೃತ್ಯಗಳನ್ನು ನಡೆಸುವ ಪುಂಡ ಪೋಕರಿಗಳಿಗೆ ಒಂದು ಸಂದೇಶವಾಗಿದೆ.

ಇನ್ನು ಮುಂದೆಯಾದರೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮುನ್ನ ಕೂಂಚ ಯೋಚಿಸಿದರೆ ಒಳಿತು ಇಲ್ಲವಾದರೆ ಜೈಲಿನಲ್ಲಿ ಮುದ್ದೆ ಊಟ ಗ್ಯಾರಂಟಿ ಎನ್ನುವ ಸಂದೇಶವನ್ನು ಪೊಲೀಸರು ನೀಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಕ್ರಮವಾಗಿ,

1) ನೀರಜ್ @ಬಿಕ್ಲಾ 21 ವರ್ಷ ಸುಬ್ಬಯ್ಯ ಆಸ್ಪತ್ರೆಯ ಪಕ್ಕ ಹೊಸಮನೆ ಶಿವಮೊಗ್ಗ ನಗರ.

2) ಮಣಿಕಂಠ ಎನ್ @ಮಾರವಾಡಿ  ಮಣಿ 20 ವರ್ಷ ಕಾಮಾಕ್ಷಿ ಬೀದಿ ಶಿವಮೊಗ್ಗ ನಗರ.

3) ಗಗನ್ ಇ@ಕಪಾಲಿ ಬಿನ್ ಈಶ್ವರ 19 ವರ್ಷ ಹೊಸ ಮನೆ ಶಿವಮೊಗ್ಗ ನಗರ.

4) ದರ್ಶನ್ ಎಸ್ ದಾಸ @20ವರ್ಷ ಕಾಮಾಕ್ಷಿ ಬೀದಿ ಶಿವಮೊಗ್ಗ ನಗರ.

5) ರಾಕೇಶ್ @ಅಪ್ಪು 20 ವರ್ಷ ಜಟ್ ಪಟ್ ನ ಗರ  ವಿನೋಬನಗರ  ನಗರ ಶಿವಮೊಗ್ಗ . ಶಿವಮೊಗ್ಗ.

6) ಶ್ರೀನಿವಾಸ್ @ಅಪ್ರಿಲ್ಲ ಸೀನಾ 24 ವರ್ಷ ಮೇದಾರ್ ಕೇರಿ ವಿನೋಬನಗರ.

ಮೇಲ್ಕಂಡ ಈ ಆರು ಜನ ಆರೋಪಿಗಳನ್ನು ಹಿಡಿಯಲು  ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಬೂಮ್ ರೆಡ್ಡಿ ಹಾಗೂ ಕಾರಿಯಪ್ಪ ಎ ಜಿ ಅವರ ಮಾರ್ಗದರ್ಶನದಲ್ಲಿ  ಬಾಬು ಅಂಜನಪ್ಪ ಡಿವೈಎಸ್ಪಿ ಹಾಗು ಸುರೇಶ್ ಡಿವೈಎಸ್ಪಿ ರವಿ ಪಾಟೀಲ್ ‌ದೊಡ್ಡಪೇಟೆ ಪೊಲೀಸ್ ಠಾಣೆಯ ಪಿ ಐ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿರುತ್ತಾರೆ. 

ಈ ತಂಡ ಯಶಸ್ವಿಯಾಗಿ ಬೆನ್ನತ್ತಿ ಕಾರ್ಯನಿರ್ವಹಿಸಿ ಆರು ಜನ ಆರೋಪಿಗಳನ್ನು ಸದೆ ಬಡಿದು ಘನ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ  ಘನ ನ್ಯಾಯಾಲಯ ಆರು ಜನರನ್ನು  ಜೈಲಿಗೆ ಕಳಿಸಿದೆ.

ಈ ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ  ಕೆ ಅವರು ಇಡೀ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿ ಮುಂದೆ ಈ ತರದ ಕೃತ್ಯಗಳನ್ನು ನಡೆಸಿದರೆ ಅಂತವರಿಗೆ ಕಠಿಣ ಕ್ರಮ ಜರುಗಿಸಲಾಗುವುದು ಎನ್ನುವ ಖಡಕ್ ಸಂದೇಶವನ್ನು ನೀಡಿದ್ದಾರೆ.

ರಘುರಾಜ್ ಹೆಚ್‌. ಕೆ..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...