ನಗರದ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಗುಂಪು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಶಾಲೆಗೆ ಹೊಗುವ ಮಕ್ಕಳಿಗೆ, ಮನೆಗಳ ಮುಂದೆ ಆಟವಾಡುವ ಮಕ್ಕಳು ಈ ಬೀದಿ ನಾಯಿಗಳ ಅಟ್ಟಹಾಸಕ್ಕೆ ತುತ್ತಾಗುತ್ತಿದ್ದಾರೆ.
ಕೆಲ ಪ್ರಕರಣಗಳಲ್ಲಿ ದೊಡ್ಡವರಿಗೂ ಕೂಡ ಓಡಿಸಿಕೊಂಡು ಬಂದಿ ನಾಯಿಗಳು ಕಚ್ಚಿರುವುದು ಬಹಳಷ್ಟು ಇದೆ.
ಸಾರ್ವಜನಿಕರಿಂದ ದೂರು ಪಡೆದ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಗಂಭೀರದ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದೆ.
ಇಂತಹ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳ ಜೀವ ಬೀದಿ ನಾಯಿಗಳ ಬಲಿ ತೆಗೆದುಕೊಂಡರೆ ಆಶ್ಚರ್ಯ ಇಲ್ಲದಂತಹ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.
ಮಹಾನಗರ ಪಾಲಿಕೆ ಈಗಲಾದರೂ ಬೀದಿ ನಾಯಿಗಳ ಗುಂಪುಗಳನ್ನು ಹಿಡಿದು ನಗರದಿಂದ ದೂರ ಕಳುಹಿಸಿ ಮಕ್ಕಳ ಜೀವಗಳು ಉಳಿಬೇಕಾಗಿದೆ.
ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾಗಿದೆ. ಬೀದಿನಾಯಿಗಳ ಹಾವಳಿಯಿಂದ ನಗರವನ್ನು ರಕ್ಷಿಸ ಬೇಕಾಗಿದೆ ಎಂದು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯ ಆಗ್ರಹಿಸಿದೆ.