Wednesday, April 30, 2025
Google search engine
Homeಶಿವಮೊಗ್ಗಗುಂಡಿ ಬಿದ್ದ ರಸ್ತೆಯನ್ನು ಮುಚ್ಚಿಸಿ,ರಸ್ತೆಯಲ್ಲಿ ಕಡಿದು ಹಾಕಿರುವ ಮರದ ತುಂಡುಗಳನ್ನು ತೆರವುಗೊಳಿಸಿ ಪುಣ್ಯ ಕಟ್ಟಿಕೊಳ್ಳಿ...

ಗುಂಡಿ ಬಿದ್ದ ರಸ್ತೆಯನ್ನು ಮುಚ್ಚಿಸಿ,ರಸ್ತೆಯಲ್ಲಿ ಕಡಿದು ಹಾಕಿರುವ ಮರದ ತುಂಡುಗಳನ್ನು ತೆರವುಗೊಳಿಸಿ ಪುಣ್ಯ ಕಟ್ಟಿಕೊಳ್ಳಿ ವಾಹನ ಸವಾರರ ಮನವಿ..!

ಶಿವಮೊಗ್ಗ: ತೀರ್ಥಹಳ್ಳಿಗೆ ಹೋಗುವ ಮಾರ್ಗದಲ್ಲಿರುವಂತಹ ನ್ಯೂ ಮಂಡಲಿ ಸರ್ಕಲ್ ನಲ್ಲಿ ಚೆನ್ನಾಗಿದ್ದ ಹೈವೇ ರೋಡನ್ನು 7 8 ದಿವಸ ಗಳ ಹಿಂದೆ ಅಗೆದು ಕೆ ಇ ಬಿ ಯಾ ಒಂದು ಕಾಮಗಾರಿಯನ್ನು ಮಾಡಿ ಮುಗಿಸಿದ್ದಾರೆ.

ಕೆಲಸ ಮುಗಿದ ನಂತರ ಆ ರಸ್ತೆಯನ್ನು ಸರಿಯಾಗಿ ಮುಚ್ಚದೆ ಗುಂಡಿಗಳನ್ನು ಮಾಡಿ ಹೋಗಿರುತ್ತಾರೆ ಕಾರ್ಯನಿರ್ವಹಿಸುತ್ತಿದ್ದಂತಹ ಅಧಿಕಾರಿಗಳನ್ನು ಸತತವಾಗಿ ಮೂರು ನಾಲ್ಕು ದಿನಗಳಿಂದ ಸ್ಥಳೀಯರು ಸಂಪರ್ಕಿಸಿದರು ಏನು ಪ್ರಯೋಜನವಾಗಿಲ್ಲ.

ಮೊದಲನೆಯ ದಿನ ಸಂಪರ್ಕಿಸಿದ್ದಾಗ ನಾಳೆ ಗುಂಡಿಗಳನ್ನು ಮುಚ್ಚಿ ಕೊಡುತ್ತೇನೆ ಎಂದಿದ್ದರು ಆದರೆ ಈ ದಿನ ಕರೆ ಮಾಡಿದ್ದಾಗ ಹೇಳುತ್ತಾರೆ ಅವರಿಗೆ ಹೇಳಿದ್ದೇವೆ ಇವರಿಗೆ ಹೇಳಿದ್ದೇವೆ ಅಂತ ಅಲ್ಲಿ ಓಡಾಡಲಿಕ್ಕೆ ತುಂಬಾನೇ ತೊಂದರೆಯಾಗುತ್ತಿದೆ ಶಾಲಾ ವಾಹನಗಳು ಹಾಗೂ ವೃದ್ಧರು ಹೆಣ್ಣು ಮಕ್ಕಳು ದೊಡ್ಡ ದೊಡ್ಡ ವಾಹನಗಳಲ್ಲಿ ಸಂಚರಿಸುವಾಗ ಅಲ್ಲಿ ತುಂಬಾ ಧೂಳು ಬರುತ್ತಿದೆ ಅನಾರೋಗ್ಯಕ್ಕೆ ತುತ್ತಾಗುವ ಸ್ಥಿತಿ ಉಂಟಾಗುತ್ತಿದೆ ತುಂಬಾ ತೊಂದರೆಯಾಗುತ್ತಿದೆ.

ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ, ನೌಕರರು ಕೆಲಸಕ್ಕೆ ತೆರಳುವಾಗ ಅಪಘಾತಗಳು ಸಂಭವಿಸುತ್ತಿದ್ದು ದೊಡ್ಡ ಅಪಘಾತ ಆಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬೇಗ ಗುಂಡಿಗಳನ್ನು ಮುಚ್ಚಿಸಿಲಿ ಎನ್ನುವುದು ಸ್ಥಳೀಯರ ಹಾಗೂ ಅಲ್ಲಿ ಓಡಾಡುವ ವಾಹನ ಸವಾರರ ಮನವಿ.

ಕೋಣಂದೂರಿನಲ್ಲೂ ಸಹ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಮರದ ತುಂಡುಗಳನ್ನು ಕಡಿದು ಹಾಗೆ ಬಿಟ್ಟಿದ್ದು ವಾಹನಸವಾರರ ಓಡಾಟಕ್ಕೆ ಅಡಚಣೆ ಉಂಟಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿ ಮಾಡಿ ಮರದ ತುಂಡುಗಳನ್ನು ತೆರವುಗೊಳಿಸಿ ಓಡಾಟಕ್ಕೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎನ್ನುವುದು ಸ್ಥಳೀಯರ ಮನವಿ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...