Wednesday, April 30, 2025
Google search engine
Homeಶಿವಮೊಗ್ಗShivamogga:ಮಹಾನಗರ ಪಾಲಿಕೆಯ ಮಹತ್ವದ ಕಾರ್ಯಾಚರಣೆ ಜೆಸಿಬಿ ಎಂಟ್ರಿ..!

Shivamogga:ಮಹಾನಗರ ಪಾಲಿಕೆಯ ಮಹತ್ವದ ಕಾರ್ಯಾಚರಣೆ ಜೆಸಿಬಿ ಎಂಟ್ರಿ..!

ನವುಲೆಯ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇ ಶ್ವರ ಬಡಾವಣೆಗೆ (ಬೊಮ್ಮನಕಟ್ಟೆ F ಬ್ಲಾಕ್ backside) ಹೊಂದಿಕೊಂಡಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಎ ನಿವೇಶನಕ್ಕೆ ಬಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಸಿಮೆಂಟ್ ಬ್ರಿಕ್ಸ್, ಜಿಂಕ್ ಶೀಟ್ ಶೆಡ್ ಗಳನ್ನು ಪಾಲಿಕೆಯ ಅಧಿಕಾರಿಗಳು ಜೆಸಿಬಿ ಯಿಂದ ನೆಲಸಮ ಮಾಡುತ್ತಿದ್ದಾರೆ. ಸಧ್ಯ ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಶಿವಮೊಗ್ಗ: ಅತಿಕ್ರಮಿತ ಜಾಗವನ್ನು ಕಾಪಾಡಿಕೊಳ್ಳಲು ಇಲ್ಲಿಯ ಮಹಾನಗರ ಪಾಲಿಕೆಯ ಮುಂದಾಗಿದ್ದು ಅದರ ಆರಂಭಿಕ ಹಂತವಾಗಿ ಇಂದು ಬೆಳಗ್ಗಿನಿಂದಲೇ ಜೆಸಿಬಿ ಸದ್ದು ಮಾಡಲಾರಂಭಿಸಿದೆ,


ಬೊಮ್ಮನ ಕಟ್ಟೆಯ ಆಶ್ರಯ ಬಡಾವಣೆಯ ಹಿಂಭಾಗದಲ್ಲಿ ಸರ್ಕಾರಿ ನೌಕರರ ನೀಲಮ್ಮ ಜ್ಞಾನೆಶ್ವರ ಬಡಾವಣೆಗೆ ಹೊಂದಿಕೊಂಡ ಸಿಎ ನಿವೇಶನದಲ್ಲಿ ಅನಧಿಕೃತವಾಗಿ ಸುಮಾರು 15ಕ್ಕೂ ಹೆಚ್ಚು ಸಿಮೆಂಟ್ ಬ್ರಿಕ್ಸ್ ಮತ್ತು ತಗಡಿನ ಶೆಡ್ ಗಳು ತಲೆ ಎತ್ತಿದ್ದವು. ಅಲ್ಲದೇ 20×30 ಅಡಿ ಅಳತೆಯ ಎರಡು ಆರ್.ಸಿ.ಸಿ. ಕಟ್ಟಡಗಳೂ ತಲೆ ಎತ್ತಿವೆ ಈ ಅನಧಿಕೃತ ಕಟ್ಟಡಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ, ಅನಧಿಕೃತ ಯುಜಿಡಿ ಸಂಪರ್ಕ, ಅನಧಿಕೃತ ನೀರಿನ ಸಂಪರ್ಕ ಎಲ್ಲವನ್ನೂ ನೀಡಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.


ಅನಧಿಕ್ರತ ಕಟ್ಟಡಗಳ ನಿರ್ಮಾಣಕ್ಕೂ ಮೊದಲು ತಾವು ಪಾಲಿಕೆಯ ಉನ್ನತಾಧಿಕಾರಿಗಳ, ಕೆಲ ಬಿಜೆಪಿ, ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದೆವು. ತದ ನಂತರವೇ ತಾವು ಕಟ್ಟಡ ನಿರ್ಮಿಸಿದಗದಾಗಿ ಅನಧಿಕೃತ ಕಟ್ಟಡದ ಮಾಲಿಕರು ಅಲವತ್ತುಕೊಂಳ್ಳುತ್ತಿರುವುದು ಕಂಡುಬಂದಿದೆ.


ಇಂದು ಜೆಸಿಬಿ ತಂದು ಕೇವಲ ಸಿಮೆಂಟ್ ಬ್ರಿಕ್ಸ್ ನಿಂದ ಸಣ್ಣ ಪುಟ್ಟ ಶೆಡ್ ಗಳ ನೆಲಸಮ ಮಾಡಿ ಸ್ಥಳೀಯರ ಕಣ್ಣೊರೆಸುವ ಕೆಲಸವಾಗಬಾರದು. ತಲೆ ಎತ್ತಿದ ಆರ್.ಸಿಸಿ ಯ ಎರಡೂ ಕಟ್ಟಡಗಳ ನೆಲಸಮವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಇಲ್ಲವಾದಲ್ಲಿ ಪಾಲಿಕೆಯ ಉಳಿದ ಖಾಲಿ ಜಾಗದಲ್ಲಿ ತಾವೂ ಕಟ್ಟಡ ನಿರ್ಮಿಸಿಕೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಕಳೆದ 5-6ತಿಂಗಳ ಹಿಂದೆಯೇ ಸ್ಥಳೀಯ ನಾಗರಿಕರು ಪಾಲಿಕೆಗೆ ತನ್ನ ಜಾಗವನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದರು.ಆದರೆ ಇಂದು ಪಾಲಿಕೆಯ ಇಂಜಿನೀಯರ್ ವಿಷ್ಣು ದೀಕ್ಷತ್ ಆಶ್ರಯ ಅಧಿಕಾರಿ ಶಶಿಧರ್, ಕಂದಾಯ ಅಧಿಕಾರಿ ಮಂಜುನಾಥ್ ಮೊದಲಾದವರ ಉಸ್ತುವಾರಿಯಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆದಿದೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...