Home ಶಿವಮೊಗ್ಗShivamogga:ಮಹಾನಗರ ಪಾಲಿಕೆಯ ಮಹತ್ವದ ಕಾರ್ಯಾಚರಣೆ ಜೆಸಿಬಿ ಎಂಟ್ರಿ..!

Shivamogga:ಮಹಾನಗರ ಪಾಲಿಕೆಯ ಮಹತ್ವದ ಕಾರ್ಯಾಚರಣೆ ಜೆಸಿಬಿ ಎಂಟ್ರಿ..!

by EDITOR NEWS WARRIORS
0 comments

ನವುಲೆಯ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇ ಶ್ವರ ಬಡಾವಣೆಗೆ (ಬೊಮ್ಮನಕಟ್ಟೆ F ಬ್ಲಾಕ್ backside) ಹೊಂದಿಕೊಂಡಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಎ ನಿವೇಶನಕ್ಕೆ ಬಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಸಿಮೆಂಟ್ ಬ್ರಿಕ್ಸ್, ಜಿಂಕ್ ಶೀಟ್ ಶೆಡ್ ಗಳನ್ನು ಪಾಲಿಕೆಯ ಅಧಿಕಾರಿಗಳು ಜೆಸಿಬಿ ಯಿಂದ ನೆಲಸಮ ಮಾಡುತ್ತಿದ್ದಾರೆ. ಸಧ್ಯ ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಶಿವಮೊಗ್ಗ: ಅತಿಕ್ರಮಿತ ಜಾಗವನ್ನು ಕಾಪಾಡಿಕೊಳ್ಳಲು ಇಲ್ಲಿಯ ಮಹಾನಗರ ಪಾಲಿಕೆಯ ಮುಂದಾಗಿದ್ದು ಅದರ ಆರಂಭಿಕ ಹಂತವಾಗಿ ಇಂದು ಬೆಳಗ್ಗಿನಿಂದಲೇ ಜೆಸಿಬಿ ಸದ್ದು ಮಾಡಲಾರಂಭಿಸಿದೆ,


ಬೊಮ್ಮನ ಕಟ್ಟೆಯ ಆಶ್ರಯ ಬಡಾವಣೆಯ ಹಿಂಭಾಗದಲ್ಲಿ ಸರ್ಕಾರಿ ನೌಕರರ ನೀಲಮ್ಮ ಜ್ಞಾನೆಶ್ವರ ಬಡಾವಣೆಗೆ ಹೊಂದಿಕೊಂಡ ಸಿಎ ನಿವೇಶನದಲ್ಲಿ ಅನಧಿಕೃತವಾಗಿ ಸುಮಾರು 15ಕ್ಕೂ ಹೆಚ್ಚು ಸಿಮೆಂಟ್ ಬ್ರಿಕ್ಸ್ ಮತ್ತು ತಗಡಿನ ಶೆಡ್ ಗಳು ತಲೆ ಎತ್ತಿದ್ದವು. ಅಲ್ಲದೇ 20×30 ಅಡಿ ಅಳತೆಯ ಎರಡು ಆರ್.ಸಿ.ಸಿ. ಕಟ್ಟಡಗಳೂ ತಲೆ ಎತ್ತಿವೆ ಈ ಅನಧಿಕೃತ ಕಟ್ಟಡಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ, ಅನಧಿಕೃತ ಯುಜಿಡಿ ಸಂಪರ್ಕ, ಅನಧಿಕೃತ ನೀರಿನ ಸಂಪರ್ಕ ಎಲ್ಲವನ್ನೂ ನೀಡಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.


ಅನಧಿಕ್ರತ ಕಟ್ಟಡಗಳ ನಿರ್ಮಾಣಕ್ಕೂ ಮೊದಲು ತಾವು ಪಾಲಿಕೆಯ ಉನ್ನತಾಧಿಕಾರಿಗಳ, ಕೆಲ ಬಿಜೆಪಿ, ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದೆವು. ತದ ನಂತರವೇ ತಾವು ಕಟ್ಟಡ ನಿರ್ಮಿಸಿದಗದಾಗಿ ಅನಧಿಕೃತ ಕಟ್ಟಡದ ಮಾಲಿಕರು ಅಲವತ್ತುಕೊಂಳ್ಳುತ್ತಿರುವುದು ಕಂಡುಬಂದಿದೆ.


ಇಂದು ಜೆಸಿಬಿ ತಂದು ಕೇವಲ ಸಿಮೆಂಟ್ ಬ್ರಿಕ್ಸ್ ನಿಂದ ಸಣ್ಣ ಪುಟ್ಟ ಶೆಡ್ ಗಳ ನೆಲಸಮ ಮಾಡಿ ಸ್ಥಳೀಯರ ಕಣ್ಣೊರೆಸುವ ಕೆಲಸವಾಗಬಾರದು. ತಲೆ ಎತ್ತಿದ ಆರ್.ಸಿಸಿ ಯ ಎರಡೂ ಕಟ್ಟಡಗಳ ನೆಲಸಮವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಇಲ್ಲವಾದಲ್ಲಿ ಪಾಲಿಕೆಯ ಉಳಿದ ಖಾಲಿ ಜಾಗದಲ್ಲಿ ತಾವೂ ಕಟ್ಟಡ ನಿರ್ಮಿಸಿಕೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಕಳೆದ 5-6ತಿಂಗಳ ಹಿಂದೆಯೇ ಸ್ಥಳೀಯ ನಾಗರಿಕರು ಪಾಲಿಕೆಗೆ ತನ್ನ ಜಾಗವನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದರು.ಆದರೆ ಇಂದು ಪಾಲಿಕೆಯ ಇಂಜಿನೀಯರ್ ವಿಷ್ಣು ದೀಕ್ಷತ್ ಆಶ್ರಯ ಅಧಿಕಾರಿ ಶಶಿಧರ್, ಕಂದಾಯ ಅಧಿಕಾರಿ ಮಂಜುನಾಥ್ ಮೊದಲಾದವರ ಉಸ್ತುವಾರಿಯಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆದಿದೆ.

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...