Saturday, June 14, 2025
Google search engine
HomeಬೆಂಗಳೂರುGovernment employee's union state president : ಸಿ ಎಸ್ ಷಡಾಕ್ಷರಿ ಗೆ ಸಂಕಷ್ಟ ವಸತಿ...

Government employee’s union state president : ಸಿ ಎಸ್ ಷಡಾಕ್ಷರಿ ಗೆ ಸಂಕಷ್ಟ ವಸತಿ ಗೃಹ ತೆರುವು ಸೂಚನೆ ಬೆನ್ನಲ್ಲೇ ದಂಡ ವಸೂಲಿ ಮಾಡುತ್ತಾ ಲೋಕೋಪಯೋಗಿ ಇಲಾಖೆ..?!

ಶಿವಮೊಗ್ಗದಲ್ಲಿ ಲೆಕ್ಕಾಧಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು ಆನಂತರ ಆ ವರ್ಗಾವಣೆಯನ್ನು ಪ್ರಶ್ನಿಸಿ ಷಡಾಕ್ಷರಿಯವರು ನ್ಯಾಯಾಲಯದ ಮರೆಹೋಗಿದ್ದರು ನಂತರ ಅವರ ವರ್ಗಾವಣೆಯನ್ನು ಬೆಂಗಳೂರಿಗೆ ಮಾಡಲಾಯಿತು .

ವರ್ಗಾವಣೆಯಾಗಿ 12 ತಿಂಗಳು ಕಳೆದರೂ ವಸತಿ ಗೃಹ ಖಾಲಿ ಮಾಡದ ಷಡಾಕ್ಷರಿ :

ವರ್ಗಾವಣೆಯಾಗಿ ಸುಮಾರು 12 ತಿಂಗಳು ಕಳೆದರೂ ರಾಜ್ಯಾಧ್ಯಕ್ಷ ಷಡಾಕ್ಷರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯೊಳಗೆ ಬರುವ ವಸತಿಗೃಹವನ್ನು ತೆರುವುಗೋಳಿಸಿರಲಿಲ್ಲ ಇದನ್ನು ಪ್ರಶ್ನಿಸಿ ಸಾಕಷ್ಟು ಜನ ಇಲಾಖೆಯ ಗಮನಕ್ಕೆ ದೂರು ನೀಡಿದ್ದರು ಅದರಲ್ಲೂ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷರಾದ ರುದ್ರಪ್ಪನವರು ಒತ್ತಡ ತಂದಿದ್ದರು ಇದರ ಬೆನ್ನಲ್ಲೇ ದಿನಾಂಕ 18-10.2024 ರಂದು ಲೋಕೋಪಯೋಗಿ ಇಲಾಖೆಯ ಕಿರಿಯ ಸಹಾಯಕರು ಷಡಾಕ್ಷರಿ ಅವರಿಗೆ ವಸತಿಗೃಹವನ್ನು ತೆರವುಗೊಳಿಸಿ ತಮ್ಮ ಇಲಾಖೆಯ ಸುರ್ಪದಿಗೆ ವಹಿಸುವಂತೆ ಸೂಚನೆ ನೀಡಿದ್ದರು.

ಅವಧಿ ಮುಗಿದಿದ್ದರೂ ವಸತಿಗೃಹದಲ್ಲಿ ಇದ್ದರಿಂದ ಷಡಾಕ್ಷರಿ ಗೆ ದಂಡ ಬೀಳುತ್ತಾ..?!

ವರ್ಗಾವಣೆಯಾಗಿ 12 ತಿಂಗಳು ಕಳೆದರೂ ಷಡಾಕ್ಷರಿ ಅವರು ತಮಗೆ ನೀಡಿದ್ದ ವಸತಿಗೃಹವನ್ನು ತೆರವುಗೊಳಿಸಿದೆ ಇದ್ದರಿಂದ ಅವರ ಮೇಲೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆ ಇದೆ ..?! ಏಕೆಂದರೆ ಸಾಮಾನ್ಯವಾಗಿ ಸರ್ಕಾರದ ವಸತಿ ಗೃಹವನ್ನು ವರ್ಗಾವಣೆಯಾದ ನಂತರ ಖಾಲಿ ಮಾಡಬೇಕು ಒಂದು ವೇಳೆ ಹಾಗೆ ಮುಂದುವರೆದರೆ ಮೊದಲ 3 ತಿಂಗಳಿಗೆ 4 ಪಟ್ಟು ದಂಡ ಹಾಗೂ ಬಾಡಿಗೆ ಅದಕ್ಕೂ ಹೆಚ್ಚಿನ ಸಮಯಕ್ಕೆ 8 ಪಟ್ಟು ದಂಡ ವಸೂಲಿ ಮಾಡಬಹುದಾಗಿದ್ದು ದಂಡ ವಸೂಲಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಜನ ಒತ್ತಡ ತರುತ್ತಿದ್ದಾರೆ.

ವಸತಿ ಗೃಹ ತೆರವುಗೊಳಿಸಿ ದಂಡ ವಿಧಿಸುತ್ತಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು..?

ವಸತಿ ಗೃಹ ತೆರುವು ಗೊಳಿಸಲು ಸೂಚನೆ ನೀಡಿದ್ದು ವಸತಿಗೃಹ ತೆರವು ಬೆನ್ನಲ್ಲೇ ಸಾಕಷ್ಟು ಸಮಯ ಹಿಡಿದಿದ್ದರಿಂದ ಅದಕ್ಕೆ ದಂಡ ವಿಧಿಸುತ್ತಾರಾ..? ಬೇರೆಯವರಿಗೆ ಅನ್ವಯಿಸಿದ ನಿಯಮಗಳು ಷಡಾಕ್ಷರಿಯವರಿಗೂ ಅನ್ವಯಿಸುತ್ತವೆ.. ಅದನ್ನು ಅಧಿಕಾರಿಗಳು ಪಾಲಿಸುತ್ತಾರಾ..?! ಅಥವಾ ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯ ಮಾತಿಗೆ ಬೆಂಡಾಗಿ ಸುಮ್ಮನಿರುತ್ತಾರ..?! ಕಾದುನೋಡಬೇಕು…..

ರಘುರಾಜ್ ಹೆಚ್.ಕೆ..9449553305…..

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!