Wednesday, April 30, 2025
Google search engine
Homeಶಿವಮೊಗ್ಗShivamogga breaking: ನಾನು ದಂದೇ ಮಾಡೋದು ಡೌಟ್ 3 ನೇ ತಾರೀಖು ಎಲ್ಲರೂ ಫೋನ್ ಆನ್...

Shivamogga breaking: ನಾನು ದಂದೇ ಮಾಡೋದು ಡೌಟ್ 3 ನೇ ತಾರೀಖು ಎಲ್ಲರೂ ಫೋನ್ ಆನ್ ಇಟ್ಕೊಳ್ಳಿ ಎಂದ ಓಸಿ ಡಾನ್ ಸಂದೀಪ್..!

ಶಿವಮೊಗ್ಗ : ಓಸಿ ಸಾಮ್ರಾಜ್ಯದಲ್ಲಿ ಒಂದು ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ ಆದರೂ ಪೊಲೀಸ್ ಇಲಾಖೆ ಏಕೋ ಸುಮ್ಮನೆ ಕುಳಿತಿದೆ ಓಸಿ ಸಾಮ್ರಾಜ್ಯದ 70 ಭಾಗದ ದೊರೆ ಸಂದೀಪ್ ನ ಬಗ್ಗೆ ಪತ್ರಿಕೆ ಹಿಂದೆ ವರದಿ ಮಾಡಿತ್ತು ಈತನ ವ್ಯವಹಾರದ ಬಗ್ಗೆ ವಿಸ್ತಾರವಾಗಿ ವರದಿ ಮಾಡಿತ್ತು. ಜೊತೆಗೆ ಈಗ ನಡೆಯುತ್ತಿರುವ ದಂಧೆಯ ಬಗ್ಗೆ ಸಾಕ್ಷಿ ಸಮೇತ ಪ್ರಕಟಿಸುವುದಾಗಿ ಪತ್ರಿಕೆ ಸುದ್ದಿ ಕೂಡ ಪ್ರಕಟಿಸಿತ್ತು ಸಂದೀಪನ ಆಸ್ತಿ ವಿವರಗಳನ್ನು ಸಂಗ್ರಹಿಸುತ್ತಿದ್ದು ಅದನ್ನು ಕೂಡ ಪ್ರಕಟಿಸುವುದಾಗಿ ಹೇಳಲಾಗಿತ್ತು ಇದರ ಬೆನ್ನಲ್ಲೇ ಇತ್ತ ಕಡೆ ಸಂದೀಪ್ ತಾನು ಇನ್ನು ಮುಂದೆ ಓಸಿ ಸಾಮ್ರಾಜ್ಯದ ದೊರೆ ಸ್ಥಾನಕ್ಕೆ ನಿವೃತ್ತಿ ಘೋಷಿಸುತ್ತೇನೆ ನಾನು ಮುಂದುವರಿಯವುದು ಕಷ್ಟ ಹಾಗಾಗಿ ಈ ಸಲಹದ ದೀಪಾವಳಿ ಬೋನಸ್ ಅನ್ನು ತಮಗೆ ನೀಡುವುದಿಲ್ಲ ನನ್ನ ಕಡೆ ಹುಡುಗರಿಗೂ ನೀವು ಕರೆ ಮಾಡಬೇಡಿ ನಾನು ನಿಮಗೆ ಫೋನಿಗೆ ಸಿಗುವುದಿಲ್ಲ ನನ್ನ ನಿರ್ಧಾರ ಏನಿದ್ದರೂ 3ನೇ ತಾರೀಕು ತಿಳಿಸುತ್ತೇನೆ ಮೂರನೇ ತಾರೀಕು ಎಲ್ಲರೂ ಫೋನ್ ಆನ್ ಇಟ್ಕೊಳ್ಳಿ ಎಂದು ಹೇಳಿರುವ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ದಿನದಲ್ಲಿ ಲಕ್ಷಗಟ್ಟಲೆ ದುಡ್ಡು ಮಾಡುವ ಕೋಟಿಗೆ ಬಾಳುವ ಸಂದೀಪ್ ಪ್ರತಿ ವರ್ಷ ತಿಂಗಳ ಮಾಮೂಲು ಅಲ್ಲದೆ ದೀಪಾವಳಿಗೆ ಬೋನಸ್ ನೀಡುವುದು ಪದ್ಧತಿ ಆದರೆ ಈ ಸಲ ಬೋನಸ್ ನೀಡುವುದಿಲ್ಲ ಎಂದು ಹೇಳಿರುವುದು ಹಾಗೂ ತನ್ನ ನಿರ್ಧಾರವನ್ನು ಮೂರನೇ ತಾರೀಕು ಪ್ರಕಟಿಸುತ್ತೇನೆ ಎಂದು ಹೇಳಿರುವುದು ತೀವ್ರ ಕುತೂಹಲ ಉಂಟು ಮಾಡಿದೆ ಈ ಆಡಿಯೋ ಇಷ್ಟೆಲ್ಲಾ ವೈರಲ್ ಆಗುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಏಕೆ ಯಾವುದೇ ಪ್ರಕರಣ ದಾಖಲು ಮಾಡದೆ ವಿಚಾರಣೆ ಮಾಡದೆ ಸುಮ್ಮನಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಿವಮೊಗ್ಗದ ಓಸಿ ಸಾಮ್ರಾಜ್ಯದಲ್ಲಿ ಏನಾಗ್ತಿದೆ ಲಕ್ಷಗಳ ಲೆಕ್ಕದಲ್ಲಿ ದಿನದಲ್ಲಿ ದುಡಿಯುವ ಓಸಿ ಡಾನ್ ಗಳು ನಿವೃತ್ತಿಯ ಮಾತನಾಡುತ್ತಿರುವುದು ಏಕೆ ..?! ಈತನ ನಿವೃತ್ತಿಯ ನಂತರ ಈತನ ಸ್ಲೀಪಿಂಗ್ ಪಾರ್ಟ್ನರ್ ಪ್ರಕಾಶ್ ಮುನ್ನೆಲೆಗೆ ಬರುತ್ತಾನಾ..?! ಅಥವಾ ಹಳೆ ಓಸಿಡಾನ್ ಸುಧಾಕರ್ ಮತ್ತೆ ಫೀಲ್ಡಿಗೆ ಇಳಿಯುತ್ತಾನ..?! ನಿವೃತ್ತಿಯ ಮಾತನಾಡಿ ಹಿಂದಿನಿಂದ ಆಟವಾಡುವ ಲೆಕ್ಕಾಚಾರ ನಡೆಯುತ್ತಿದೆಯಾ..?! ಲಕ್ಷಗಳ ಲೆಕ್ಕದಲ್ಲಿ ಬಾಳುವ ಈ ಡಾನ್ ಗಳು ನಿವೃತ್ತಿ ಘೋಷಿಸಿ ಬಿಟ್ಟರೆ ಎಲ್ಲವೂ ಸರಿ ಹೋದಂತೆ ಆಗುತ್ತಾ..?! ಇವರು ಮಾಡಿರುವ ಅಕ್ರಮ ಆಸ್ತಿಯ ಮೇಲೆ ಬೆನ್ನು ಬೀಳಲ್ವಾ..?! ಖಂಡಿತಾ ಎಲ್ಲೆಲ್ಲಿ ಇದೆ ಅಕ್ರಮ ಆಸ್ತಿ ಅದು ಹೇಗೆ ಬಂತು ‌.? ಬಹಿರಂಗವಾಗಿ ದೀಪಾವಳಿಯ ಬೋನಸ್ ಕೊಡಲ್ಲ ಎಂದು ಹೇಳುವ ಓಸಿ ಸಾಮ್ರಾಜ್ಯದ ದೊರೆ ಸಂದೀಪ್ ಮಾಡಿರುವ ಆಸ್ತಿಯ ವಿವರಗಳು ನಿರೀಕ್ಷಿಸಿ…

ರಘುರಾಜ್ ಹೆಚ್.ಕೆ..9449553305….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...