Home ಶಿವಮೊಗ್ಗಕೈ ತೋಟದ‌ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿ..!

ಕೈ ತೋಟದ‌ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿ..!

by EDITOR NEWS WARRIORS
0 comments

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸುರಗಿ ಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಕೈತೋಟದ ಮಹತ್ವ ದ ಬಗ್ಗೆ ಗುಂಪು ಚರ್ಚೆ ಹಾಗೂ ಕುಂಡಲಿ ಮಿಶ್ರಣ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.ಕೈತೋಟದ ಬಗ್ಗೆ ಮಹತ್ವ:-ಸಾಮಾನ್ಯವಾಗಿ ಹಳ್ಳಿಮನೆಗಳ ಹಿತ್ತಲಿನಲ್ಲಿ ಸ್ವಲ್ಪ ಜಾಗವನ್ನು ಬಿಟ್ಟಿಕೊಂಡಿರುತ್ತಾರೆ.

ಈ ಜಾಗದಲ್ಲಿ ಮನೆಗೆ ಬೇಕಾಗಿರುವ ತರಕಾರಿಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ, ಕರಿಬೇವು, ಸೊಪ್ಪುಗಳಾದ ಕೊತ್ತಂಬರಿ, ಪಾಲಕ್, ಪುದಿನಾ, ಮೆಂತ್ಯ ,ದಂಟು ಸೊಪ್ಪು,ಹೂವಿನ ಗಿಡಗಳಾದ ಚೆಂಡು, ಸೇವಂತಿಗೆ,ಕನಕಾಂಬರ, ಮಲ್ಲಿಗೆ,ಗುಲಾಬಿ ಹಾಗೂ ಹಣ್ಣುಗಳಾದ ಪೇರಲೆ,ಪಪಾಯ ಗಿಡಗಳನ್ನು ಹಾಕಿಕೊಳ್ಳಬಹುದು. ಹೀಗೆ ಕೈತೋಟ ಮಾಡಿಕೊಳ್ಳುವುದರಿಂದ ತರಕಾರಿಯ ಖರ್ಚು ಕಡಿಮೆ ಮಾಡಿಕೊಳ್ಳಬಹುದಲ್ಲದೆ ರಾಸಾಯನಿಕ ಮುಕ್ತ ತರಕಾರಿಗಳನ್ನು ಸೇವಿಸಬಹುದು. ಹಾಗಾಗಿ ಪ್ರತಿಯೊಂದು ಮನೆಯಲ್ಲಿ ಕೈತೋಟ ಮಾಡಿಕೊಳ್ಳುವುದು ಅವಶ್ಯಕವಾಗಿದೆ.ಕುಂಡಲಿ ಮಿಶ್ರಣ ತಯಾರಿಕೆ-ಪದ್ಧತಿ ಪ್ರಾತ್ಯಕ್ಷಿಕೆ:-ಪ್ರತಿಯೊಬ್ಬರು ತಮ್ಮ ಮನೆಯು ಚೆಂದವಾಗಿ ಕಾಣಬೇಕೆಂದು ಮನೆಯ ಮುಂದೆ ಗಿಡಗಳನ್ನು ಕುಂಡಲಿಗಳಲ್ಲಿ ಹಾಕಿಕೊಂಡಿರುತ್ತಾರೆ.

ಕುಂಡಲಿಗೆ ಬರೀ ಮಣ್ಣನ್ನು ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ. ಹಾಗಾಗಿ ಮಣ್ಣು,ಮರಳು, ಗೊಬ್ಬರ ಹಾಗೂ ತೆಂಗಿನ ನಾರಿನ (ಕೋ ಕೋ ಪೀಟ್) ಸಮಮಿಶ್ರಣ ತಯಾರಿಸಿಕೊಂಡು ಕುಂಡಲಿಗೆ ಹಾಕಬೇಕು, ನಂತರ ಗಿಡವನ್ನು ನೆಡಬೇಕು. ಹೀಗೆ ಮಾಡಿದರೆ ಗಿಡದ ಬೇರಿಗೆ ಬೇಕಾದ ನೀರು ಗಾಳಿ ಹಾಗೂ ಪೋಷಕಾಂಶಗಳು ದೊರೆಯುತ್ತದೆ ಹಾಗೆಯೇ ಗಿಡವು ಚೆನ್ನಾಗಿ ಬೆಳೆಯುತ್ತದೆ, ಎಂದು ವಿದ್ಯಾರ್ಥಿಗಳು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ರಘುರಾಜ್ ಹೆಚ್‌ ಕೆ..9449553305…

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...