Wednesday, April 30, 2025
Google search engine
Homeಶಿವಮೊಗ್ಗರಸ್ತೆ ಜಾಗವನ್ನೇ ಬಂದ್ ಮಾಡಿ ಕಟ್ಟಡ ನಿರ್ಮಾಣ ಮಹಾನಗರ ಪಾಲಿಕೆ ಅಧಿಕಾರಿಗಳೇ ತೆರವುಗೊಳಿಸಿ...!

ರಸ್ತೆ ಜಾಗವನ್ನೇ ಬಂದ್ ಮಾಡಿ ಕಟ್ಟಡ ನಿರ್ಮಾಣ ಮಹಾನಗರ ಪಾಲಿಕೆ ಅಧಿಕಾರಿಗಳೇ ತೆರವುಗೊಳಿಸಿ…!

ಶಿವಮೊಗ್ಗ: ನಗರದ ಆಲುಕೊಳ ಸರ್ವೆ ನಂಬರ್ 27, ದುರ್ಗಾ ಲೇಔಟ್, ಗಾಡಿಕೊಪ್ಪ ,‌ಬಿ.ಎಚ್. ರಸ್ತೆ ಗಾಡಿಕೊಪ್ಪ ಸರ್ಕಲ್ ನಿಂದ ಎಡಭಾಗ ತಾಂಡ ರಸ್ತೆ ಬಲಭಾಗ ಎರಡನೇ ಕ್ರಾಸ್, ದುರ್ಗಮ್ಮ ದೇವಸ್ಥಾನದಿಂದ ಮುಂದೆ ಪೋಲೀಸ್ ಲೇಔಟ್ ಹಾಗು ದುರ್ಗಾ ಲೇಔಟ್ ನ ಕನೆಕ್ಟಿವಿಟಿ ರಸ್ತೆಗಾಗಿ 30 ಅಡಿ ಜಾಗ ಬಿಡಲಾಗಿದೆ.

ಈ ಬಡಾವಣೆಯಲ್ಲಿ 70×30 ಅಳತೆಯ ನಿವೇಶನ ಮಾಡಿ ೧೯೮೫-೮೬ ರಲ್ಲಿ ಹಂಚಿಕೆ ಮಾಡಲಾಗಿದೆ.ಇದಕ್ಕೂ ಮೊದಲು‌ ೧೯೬೩ ರಲ್ಲಿಯೇ ಜಿಲ್ಲಾಧಿಕಾರಿಯವರು ಒಂದು‌ ಎಕರೆಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿರುತ್ತಾರೆ‌.

No.R.Did.A5ALN.39/62-63.ಸದರಿ ಬಡಾವಣೆಗೆ ಅನುಕೂಲವಾಗುವಂತೆ ೩೦ ಅಡಿ ಸಂಪರ್ಕ ರಸ್ತೆ ಬಿಡಲಾಗಿದ್ದರೂ ಕೂಡ ರೆವಿನ್ಯೂ ಸ್ವರೂಪದ ಬಡಾವಣೆ ಎಂಬ ಕಾರಣಕ್ಕೆ ರಸ್ತೆ ಜಾಗವನ್ನೇ ಬಂದು ಮಾಡಿ‌ ಕಟ್ಟಡ ನಿರ್ಮಿಸಲಾಗುತ್ತಿದೆ.

ಇದೀಗ ಸಂಖ್ಯೆ 63 ರಲ್ಲಿ ಇಡೀ ರಸ್ತೆಜಾಗಕ್ಕೆ ಕಟ್ಟಡ ನಿರ್ಮಿಸಲಾಗುತ್ತಿದೆ. ಸದರಿ‌ ನಿವೇಶನ ಉತ್ತರಕ್ಕೆ 43 ಅಡಿ ಅಗಲ, ದಕ್ಷಿಣಕ್ಕೆ 13 ಅಡಿ ಅಗಲವಿದೆ. ಇದು ಕೋಚ ಇರುವ ನಿವೇಶನವಾಗಿದೆ.‌ ಸದರಿ ನಿವೇಶನ‌ ಅಲಿನೇಶನ್ ಆಗಿಲ್ಲ. ಮಹಾನಗರ ಪಾಲಿಕೆಯಿಂದ ಕಟ್ಟಡ ಪರವಾನಿಗೆ ಪಡೆದಿಲ್ಲ.‌ಸೂಡ ಅಪ್ರೂಲ್ ಇಲ್ಲ. ರೆವಿನ್ಯೂ ಸ್ವರೂಪ ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣದ ಯಾವುದೇ ನಿಯಮಗಳನ್ನು ಪಾಲಿಸದೆ ಕಟ್ಟಲಾಗುತ್ತಿದೆ.

೩೦ ಅಡಿ ಸಂಪರ್ಕ‌ ರಸ್ತೆಯಲ್ಲಿ‌ ಸರಿಸುಮಾರು೧೫ ಅಡಿಗೂ ಹೆಚ್ಚು ಜಾಗ ಒತ್ತುವರಿ ಮಾಡಿ ಪಿಲ್ಲರ್ ನಿರ್ಮಿಸಲಾಗಿದೆ. ಇದರಿಂದಾಗಿ ಪೊಲೀಸ್ ಲೇ ಔಟ್ ನ ಕೊಳಚೆ ನೀರು ಸರಿಯಾಗಿ ಹೋಗಲು ಸಾಧ್ಯವಿಲ್ಲ. ಸಂಪರ್ಕ ರಸ್ತೆಗೂ ಜಾಗ ಕಿರಿದಾಗಿದೆ. ನಕಾಶೆಯಲ್ಲಿ ತೋರಿಸಿರುವ 43×13 ಅಡಿ ಅಳದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಯಮ ಉಲ್ಲಂಘನೆ ಮಾಡಿರುವುದರಿಂದ ಎರಡೂ ಬಡಾವಣೆ ನಿವಾಸಿಗಳಿಗೆ ಸಮಸ್ಯೆಯಾಗಲಿದೆ.

ದುರ್ಗಾ ಲೇಔಟ್ ಎರಡನೇ ಕ್ರಾಸ್ ನಲ್ಲಿ ಈಗಾಗಲೇ ದೇವಸ್ಥಾನ ನಿರ್ಮಾಣ ಮಾಡಿರುವುದರಿಂದ ಎರಡೂ ಬದಿಯಲ್ಲಿ‌ ರಸ್ತೆ ಬಂದ್ ಆಗಿದೆ. ಇದು ಕೂಡ ಬಂದ್ ಆದರೆ ಸಂಪರ್ಕ ರಸ್ತೆಯೇ ಇಲ್ಲದಂತಾಗಲಿದೆ.

ಪಾಲಿಕೆ ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮವಾಗುವಂತೆ ನೋಡಿಕೊಂಡು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...