Saturday, June 14, 2025
Google search engine
Homeತೀರ್ಥಹಳ್ಳಿThirthalli breaking news:ಪತ್ರಿಕೆ ವರದಿ ನಿಜವಾಯಿತು..! ಕದ್ದವರು ಸಿಕ್ಕಿಬಿದ್ದರು..! ಅಸಲಿಗೆ ಕದ್ದವರು ಯಾರು ಗೊತ್ತಾ..?!

Thirthalli breaking news:ಪತ್ರಿಕೆ ವರದಿ ನಿಜವಾಯಿತು..! ಕದ್ದವರು ಸಿಕ್ಕಿಬಿದ್ದರು..! ಅಸಲಿಗೆ ಕದ್ದವರು ಯಾರು ಗೊತ್ತಾ..?!

ತೀರ್ಥಹಳ್ಳಿ : ಪಟ್ಟಣದ ರಂಜದ ಕಟ್ಟೆಯ ಸಮೀಪ ನಿನ್ನೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಗೂಡ್ಸ್ ವಾಹನವನ್ನು ನಿಲ್ಲಿಸಿ ನಮಾಜಿಗೆ ಎಂದು ತೆರಳಿದ್ದ ಹೊನ್ನಾಳಿ ಮೂಲದ ಗುಜರಿ ವ್ಯಾಪಾರ ಮಾಡುವ ಮಾಲಿಕ ಹಾಗೂ ಡ್ರೈವರ್ ವಾಹನ ನಿಲ್ಲಿಸಿದ ನಂತರ ಇವರು ನಮಾಜಿಗೆ ಹೋಗಿದ್ದನ್ನು ನೋಡಿ ಇವರ ಗೂಡ್ಸ್ ವಾಹನವನ್ನು ತೆಗೆದುಕೊಂಡು ಸ್ವಲ್ಪ ದೂರದವರೆಗೆ ಹೋಗಿ ಅಲ್ಲಿ ಹಣವನ್ನು ತೆಗೆದುಕೊಂಡು ಗೂಡ್ಸ್ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣ ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು .

ಕದ್ದವರು ಸಿಕ್ಕಿಬಿದ್ದರು..!

ಈ ಪ್ರಕರಣವನ್ನು ಬೆನ್ನತ್ತಿದ ತೀರ್ಥಹಳ್ಳಿ ಪೊಲೀಸರು ಪ್ರಕರಣ ನಡೆದು 24 ಗಂಟೆ ಒಳಗೆ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಆರೋಪಿಗಳು ಹೊನ್ನಾಳಿ ಮೂಲದವರಾಗದ್ದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ಹತ್ತಿರ ಕಳುವಾಗಿದ್ದ ಸುಮಾರು 29 ಲಕ್ಷ ರೂಗಳನ್ನು ವಶಪಡಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪತ್ರಿಕೆಯ ವರದಿ ನಿಜವಾಯಿತು..!

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ಸುದ್ದಿ ಮಾಡುವಾಗ ಈ ಪ್ರಕರಣದಲ್ಲಿ ಡ್ರೈವರ್ ಮತ್ತು ಮಾಲೀಕರು ಇಬ್ಬರು ಇದ್ದರು ಕದ್ದವರು ಯಾರು..?! ಮಾಲಿಕ ಕಳ್ಳತನ ಮಾಡುವುದಿಲ್ಲ … ಹಾಗಾದರೆ ಡ್ರೈವರ್ ಇದರಲ್ಲಿ ಪಾಲುದಾರನ..?! ಈತನ ಕಡೆಯವರು ಇದರಲ್ಲಿ ಇದ್ದಾರಾ ಎನ್ನುವ ಅನುಮಾನ ಪತ್ರಿಕೆ ವ್ಯಕ್ತಪಡಿಸಿದ್ದು…. ಅದು ಈಗ ನಿಜವಾಗಿದ್ದು ಡ್ರೈವರ್ ಹಾಗೂ ಇನ್ನಿಬ್ಬರು ಸೇರಿಕೊಂಡು ಈ ಹಣವನ್ನು ದೋಚಲು ಹೊನ್ನಾಳಿಯಲ್ಲಿ ಸ್ಕೆಚ್ ರೂಪಿಸಿದ್ದಾರೆ ಆದರೆ ಅದನ್ನು ಕಾರ್ಯರೂಪಕ್ಕೆ ತರಲು ತೀರ್ಥಹಳ್ಳಿಯನ್ನು ಬಳಸಿಕೊಂಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಪೊಲೀಸರ ಸಮಗ್ರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ…

ರಘುರಾಜ್ ಹೆಚ್‌ ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!