Wednesday, April 30, 2025
Google search engine
Homeಶಿವಮೊಗ್ಗವೈಭವ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆಗೆ ಮನವಿ...

ವೈಭವ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆಗೆ ಮನವಿ…

ಶಿವಮೊಗ್ಗ, >ಸೆಪ್ಟೆಂಬರ್> 22 : ನಗರದಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ಈ ಬಾರಿ ವೈಭವ ಮತ್ತು ಸಾಂಪ್ರದಾಯಿಕವಾಗಿ ಮೈಸೂರು ಮಾದರಿಯಲ್ಲಿ 09 ದಿನಗಳ ಕಾಲ ನಡೆಸಬೇಕೆಂದು ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲಿಕೆ ಸಭೆಯಲ್ಲಿ ಮನವಿ ಮಾಡಿದರು. ನಾಡಹಬ್ಬ ದಸರಾ ಆಚರಣೆಯನ್ನು ನಡೆಸುವ ಸಂಬಂಧ ಇಂದು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪೂಜ್ಯ ಮಹಾಪೌರರಾದ ಸುನೀತಾ ಎಸ್ ಅಣ್ಣಪ್ಪ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಅವರು ಮನವಿ ಸಲ್ಲಿಸಿದರು. ಸದಸ್ಯರಾದ ಹೆಚ್.ಸಿ.ಯೋಗೀಶ್ ಮಾತನಾಡಿ, ದಸರಾ ಹಬ್ಬ ಆಚರಣೆಗಾಗಿ ಸರ್ಕಾರಕ್ಕೆ ರೂ.2 ಕೋಟಿ ಪ್ರಸ್ತಾವನೆ ಸಲ್ಲಿಸಿರುವುದು ಅಭಿನಂದನಾರ್ಹ. ಈ ಅನುದಾನದೊಂದಿಗೆ ಪಾಲಿಕೆಯ ಬಜೆಟ್ ರೂ.50 ಲಕ್ಷ ಮತ್ತು ಇತರೆ ಉಳಿಕೆ ಅನುದಾನ ಸೇರಿಸಿ, ಸಮಿತಿಗಳನ್ನು ರಚಿಸಿ ಈ ಬಾರಿ ಅದ್ದೂರಿ ಹಬ್ಬ ಆಚರಿಸುವಂತೆ ಸಲಹೆ ನೀಡಿದರು. ಸದಸ್ಯರಾದ ನಾಗರಾಜ ಕಂಕಾರಿ, ಸಾಂಪ್ರದಾಯಿಕ ಅದ್ದೂರಿತನಕ್ಕೆ ಒತ್ತು ನೀಡಬೇಕು. ಹಾಗೂ ಬಜೆಟ್ ಮತ್ತು ಹಬ್ಬದ ಮಾರ್ಗಸೂಚಿ ನಿಗದಿಯಾದ ನಂತರ ಸಭೆ ನಡೆಸಿ ನಿರ್ಧರಿಸುವುದು ಒಳಿತು ಎಂದರು. ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗನಾಥ್ ಮತ್ತು ಸದಸ್ಯರಾದ ರಮೇಶ್ ಹೆಗ್ಡೆ ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ವೈಭವದ ದಸರಾ ಆಚರಣೆಗೆ ಹಾಗೂ ಮೈಸೂರಿನಲ್ಲಿ ಆಚರಿಸುವಂತೆ 09 ದಿನಗಳ ಆಚರಣೆಗೆ ಪಾಲಿಕೆ ಸಕಲ ಸಿದ್ದತೆ ಮಾಡಿಕೊಳ್ಳಬೇಕು.ಕೋವಿಡ್ ಪ್ರಮಾಣ ಕಡಿಮೆ ಇದೆ. ಆದರೂ ಸರ್ಕಾರದ ಮಾರ್ಗಸೂಚಿಯನ್ವಯ ಎಚ್ಚರಿಕೆಯಿಂದ ಹಬ್ಬದ ಆಚರಣೆ ಮಾಡಬೇಕು. ಅನುದಾನದ ಬಗ್ಗೆ ಗೊಂದಲ ಬೇಡ. ವಿಜೃಂಭಣೆಯ ಆಚರಣೆಗೆ ಸಭೆ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು. ಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಮಾತನಾಡಿ, ದಸರಾ ಆಚರಣೆಗೆ ಸರ್ಕಾರದಿಂದ ಇದುವರೆಗೆ ಯಾವುದೇ ಮಾರ್ಗಸೂಚಿ ಬಿಡುಗಡೆ ಆಗಿಲ್ಲ. ಪ್ರಸ್ತುತ ಮಾರ್ಗಸೂಚಿಯಂತೆ ಮದುವೆ, ಇತರೆ ಸಮಾರಂಭ ಹೊರತುಪಡಿಸಿ ಸಾರ್ವಜನಿಕ ಕಾರ್ಯಕ್ರಮ ಮಾಡುವಂತಿಲ್ಲ. ಸಭಾಂಗಣದ ಶೇ.50 ಆಸನ ವ್ಯವಸ್ಥೆಯಲ್ಲಿ ಸಮಾರಂಭ ನಡೆಸಬೇಕು. ನಗರದಲ್ಲಿ ಪ್ರಸ್ತುತ 16 ಕಂಟೈನ್‍ಮೆಂಟ್ ವಲಯಗಳಿದ್ದು 78 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಬಜೆಟ್ ನಿಗದಿಗೆ ಸಂಬಂಧಿಸಿದಂತೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಬಿಡುಗಡೆಯಾಗದೆ ಸರಳ ಆಚರಣೆ ಮಾಡಲಾಗಿತ್ತು. ಈ ಬಾರಿ ದಸರಾ ಆಚರಣೆಗೆ ರೂ.2 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ.70.17 ಆದಾಯ ತೆರಿಗೆ ಸಂಗ್ರಹ ಆಗಿದ್ದು ಶೇ.100 ಸಂಗ್ರಹವಾದರೆ ರೂ.50 ಲಕ್ಷ ಆಚರಣೆಗೆ ನಿಗದಿಪಡಿಸಲಾಗುವುದು ಎಂದರು. ಮಹಾಪೌರರು ಮಾತನಾಡಿ, ತಾವು ಈಗಾಗಲೇ ಸರ್ಕಾರಕ್ಕೆ ರೂ.2 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಮೈಸೂರು ರೀತಿಯಲ್ಲಿ 9 ದಿನಗಳ ಆಚರಣೆಗೆ ಪಾಲಿಕೆ ಸಿದ್ದತೆ ನಡೆಸಿಕೊಳ್ಳಲು ತಯಾರಿದ್ದು, ಸರ್ಕಾರದಿಂದ ಹಬ್ಬ ಆಚರಣೆ ಮಾರ್ಗಸೂಚಿ ಬಂದ ನಂತರ ಸಮಿತಿಗಳ ರಚನೆ ಮತ್ತು ಆಚರಣೆಗೆ ತಯಾರಿ ಆರಂಭಿಸಲಾಗುವುದು ಎಂದರು. ಸಭೆಯಲ್ಲಿ ಸದಸ್ಯೆ ಅನಿತಾ ರವಿಶಂಕರ್, ಧೀರರಾಜ್, ಮಂಜುನಾಥ್, ಆರ್.ಸಿ.ನಾಯಕ್ ಇತರೆ ಸದಸ್ಯರು ಸಲಹೆಗಳನ್ನು ನೀಡಿದರು.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...