Wednesday, April 30, 2025
Google search engine
Homeರಾಜ್ಯಭಾವಪೂರ್ಣ ಶ್ರದ್ಧಾಂಜಲಿ...

ಭಾವಪೂರ್ಣ ಶ್ರದ್ಧಾಂಜಲಿ…

ಅಪ್ಪು ಅಪ್ಪ ಅಮ್ಮನಿಗೆ ಮುದ್ದಿನ ಕೂಸಿವನು
ಪ್ರೀತಿಯ ಸಹೋದರನಾಗಿ ಮಾದರಿಯಿವನು
ಕೂಡಿ ಬಾಳಿದ ಸುಸಂಸ್ಕೃತ ಪರಿವಾರದವನು
ಲೋಹಿತನಾಗಿ ಬಂದು ಪುನೀತನಾದ
ಬಾಲನಟನೆಯಲ್ಲಿ ಭಾಗ್ಯವಂತನಾದ
ಎರಡು ನಕ್ಷತ್ರದಲ್ಲಿ ಮಿನುಗಿ ಮರೆಯಾದll

ಮರೆಯದ ಬೆಟ್ಟದ ಹೂವಾದ
ಭಕ್ತ ಪ್ರಹ್ಲಾದನಾಗಿ ತಂದೆ ತಾಯಿಗೆ ಕಣ್ಮಣಿಯಾದ
ವೀರಕನ್ನಡಿಗ ,ಮೌರ್ಯ,ಪರಮಾತ್ಮ
ಚಕ್ರವ್ಯೂಹದಿಂದ ಧೃವತಾರೆಯಾದ
ದೊಡ್ಮನೆ ಹುಡುಗನಾಗಿ ಬಂದು ರಾಜಕುಮಾರನಂತೆ
ಕಂಗೊಳಿಸಿದ ಕಲಾಪ್ರೇಮಿಯಿವನುll

ಅಂಜನಿಪುತ್ರ,ನಟಸಾರ್ವಭೌಮ
ಯುವರತ್ನನಾಗಿ ಯುವಕರಿಗೆ ಬೆಳಕಾದ
ಚಲನಚಿತ್ರನಟ,ಹಿನ್ನೆಲೆಗಾಯಕ
ದೂರದರ್ಶನ ನಿರೂಪಕ ಮತ್ತು ನಿರ್ಮಾಪಕ
ಕನ್ನಡದ ಕೋಟ್ಯಾಧಿಪತಿ ನಿರೂಪಕನಾಗಿ
ಜನರನ್ನು ವಿಸ್ಮಯಗೊಳಿಸಿದll

ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿ
ಅತ್ಯುತ್ತಮ ಬಾಲ ಪ್ರಶಸ್ತಿ ಗಳಿಸಿ
ಯುವಕರಿಗೆ ಯುವರತ್ನವಾದ
ಕನ್ನಡದ ಮರೆಯದ ಮಾಣಿಕ್ಯನಿವನು
ಕಲಾಭಿಮಾನಿಗಳಿಗೆ ಮೇರು ನಟನಿವನು
ನೋಡುವ ಕಣ್ಣಿಗೆ ಆದರ್ಶವಾಗಿಹನುll

ಧೀರವಿಕ್ರಮನಂತೆ ಬಾಳಿ
ಎಂದೂ ಬಾರದ ಲೋಕಕ್ಕೆ ಕಾಣದಂತೆ ಮಾಯವಾದನು
ಮತ್ತೆ ಹುಟ್ಟಿ ಬರಲಿ ಈ ಕಲಾವಿದ
ನಮ್ಮ ಪವರ್ ಸ್ಟಾರ್ ಕನ್ನಡದ ಕಣ್ಮಣಿಗೆ ಪದಮಾಲೆಯ ಭಾವಪೂರ್ಣ ಶ್ರದ್ಧಾಂಜಲಿll

ಡಾ.ಎನ್, ಆರ್ ಮಂಜುಳ
ಕವಯಿತ್ರಿ ಮತ್ತು ಲೇಖಕಿ
ಶಿವಮೊಗ್ಗ…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...